ಆ್ಯಪ್ನಗರ

ಸರಣಿ ಸಂಕಷ್ಟಗಳ ಮಧ್ಯೆ ಸೋತು ನಿಂತ ರೈತ

ತೆಲಸಂಗ: ಮೆಕ್ಕೆ ಜೋಳದ ತೆನೆಯಲ್ಲಿ ಲದ್ದಿ ಹುಳು ಕಾಣಿಸಿಕೊಂಡಿದ್ದು, ಸತತ ಬರದಿಂದ ತತ್ತರಿಸಿದ್ದ ರೈತರಿಗೆ ...

Vijaya Karnataka 15 Oct 2019, 5:00 am
ತೆಲಸಂಗ: ಮೆಕ್ಕೆ ಜೋಳದ ತೆನೆಯಲ್ಲಿಲದ್ದಿ ಹುಳು ಕಾಣಿಸಿಕೊಂಡಿದ್ದು, ಸತತ ಬರದಿಂದ ತತ್ತರಿಸಿದ್ದ ರೈತರಿಗೆ ಇಳುವರಿಯಲ್ಲಿಭಾರೀ ಹೊಡೆತ ಬೀಳುತ್ತಿದೆ.
Vijaya Karnataka Web 14TELSANG1_53


ಮುಂಗಾರು ಸುರಿದ ಅಲ್ಪ ಮಳೆಗೆ ಬಿತ್ತನೆ ಮಾಡಲಾಗುತ್ತಿತ್ತು. ಈ ಬಾರಿ ಮಳೆ ಕಡಿಮೆಯಾದ ಪರಿಣಾಮ ಕೆಲವರ ಬೆಳೆ ಒಣಗಿ ಹೋಗಿದೆ. ಇನ್ನು ಬೋರ್ವೆಲ್‌ಗೆ ಇದ್ದ ಅಲ್ಪಪ್ರಮಾಣದ ನೀರು ಹಾಯಿಸಿ ಉಳಿಸಿಕೊಂಡ ಬೆಳೆಗೆ ಲದ್ದೆ ಹುಳು ಕಾಣಿಸಿಕೊಂಡಿದ್ದರಿಂದ ನಷ್ಟವಾಗಿದೆ. ಸತತ ಬರ ಬೆಂಬಿಡದೆ ಕಾಡುತ್ತಿರುವುದರಿಂದ ಈ ಭಾಗದಲ್ಲಿಒಂದಿಲ್ಲೊಂದು ನಷ್ಟ ರೈತನ ಬೆನ್ನು ಬಿಡುತ್ತಿಲ್ಲ.

ಎಲ್ಲೆಡೆ ಮಳೆಯಾಗಿ ಪ್ರವಾಹ ಬಂದಿದ್ದರೆ, ತೆಲಸಂಗ ಹೋಬಳಿ ಭಾಗದ ಹಳ್ಳಿಗಳಲ್ಲಿಮುಂಗಾರು ಮಳೆ ಇಲ್ಲದ್ದಕ್ಕೆ ಬೆಳೆ ಬರಲಿಲ್ಲ. ಹಿಂಗಾರು ಮಳೆ ಚೆನ್ನಾಗಿ ಸುರಿಯುತ್ತಿದೆಯಾದರೂ, ಬಿತ್ತನೆಯ ಅವಧಿ ಮುಗಿದರೆ ಹಿಂಗಾರು ಒಣ ಬೇಸಾಯದ ರೈತರಿಗೆ ಸಂಕಟ ತಪ್ಪಿದ್ದಲ್ಲ. ಇಷ್ಟೊತ್ತಿಗೆ ಒಣ ಬೇಸಾಯದ ಬೆಳೆಗಳ ಬಿತ್ತನೆಯಾಗಬೇಕಿತ್ತು. ಬಿಡುವಿಲ್ಲದ ಮಳೆ ಮತ್ತದೆ ಸಂಕಷ್ಟ ತಂದೊಡ್ಡಿದ್ದು ಸರಕಾರ ಈ ಸಂದರ್ಭದಲ್ಲಿನೆರವಿಗೆ ಬರಬೇಕೆಂದು ಗ್ರಾಮದ ರೈತರಾದ ಬಸವರಾಜ ರೊಟ್ಟಿ, ಸುಭಾಷ ಖೊಬ್ರಿ, ಶೇಖರ ವಳಸಂಗ್‌ ಸರಕಾರವನ್ನು ಒತ್ತಾಯಿಸಿದ್ದಾರೆ.

ಯಂಕಪ್ಪ ಉಪ್ಪಾರ, ಕೃಷಿ ಅಧಿಕಾರಿ:
ಎರಡು ವರ್ಷದಿಂದ ಹೊಸ ನಮುನೆಯ ಲದ್ದಿ ಹುಳು(ಫಾಲ್‌ ಆರ್ಮಿವಮ್‌ರ್‍) ಕೀಟ ಕಂಡು ಬರುತ್ತಿದೆ. ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿಹಾಕಿದ ಒಂದು ತಿಂಗಳ ಬೆಳೆಯಲ್ಲಿಕಾಣಿಸಿಕೊಂಡಿದೆ. ರೈತರ ಹೊಲಗಳಿಗೆ ಭೇಟಿ ನೀಡಿ ಸಲಹೆ ನೀಡಿದ್ದಲ್ಲದೆ ಸಭೆಗಳನ್ನು ನಡೆಸಿ, ಪತ್ರಿಕೆಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಈ ಭಾಗದ ವಸ್ತು ಸ್ಥಿತಿ ಬಗೆಗಿನ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತಿದ್ದೇವೆ.
- ಯಂಕಪ್ಪ ಉಪ್ಪಾರ ಕೃಷಿ ಅಧಿಧಿಕಾರಿ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ