ಆ್ಯಪ್ನಗರ

ಸದ್ಗುರು ಕೊಂಡಿಬಾ ಮಹಾರಾಜರ ಭೇಟಿ ಮಾಡಿದ ಶ್ರೀಮಂತ ಪಾಟೀಲ್‌

ಕಾಗವಾಡ: ಸರಳ, ಸಜ್ಜನಿಕೆಯ ಶ್ರೀಮಂತ ಪಾಟೀಲ ...

Vijaya Karnataka 25 Nov 2019, 5:00 am
ಕಾಗವಾಡ: ಸರಳ, ಸಜ್ಜನಿಕೆಯ ಶ್ರೀಮಂತ ಪಾಟೀಲ ಅವರು ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಬೇಡಿಕೆ ಈಡೇರಿಸಲು ಸಮರ್ಥರು ಎಂದು ಶಿರೂರ ಗ್ರಾಮದ ಸದ್ಗುರು ಕೊಂಡಿಬಾ ಮಹಾರಾಜರು ಅಭಿಪ್ರಾಯ ಪಟ್ಟರು.
Vijaya Karnataka Web 24 KAGWAD 2 NEWS PHOTO_53
ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಶಿರೂರ ಸದ್ಗುರು ಮಠದ ಕೊಂಡಿಬಾ ಮಹಾರಾಜರ ಆಶೀರ್ವಾದ ಪಡೆದರು.


ಕಾಗವಾಡ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮಂತ ಪಾಟೀಲ ಅವರು ಭಾನುವಾರ ಶಿರೂರ ಮಠದ ಸದ್ಗುರು ಕೊಂಡಿಬಾ ಮಹಾರಾಜರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಮಾತನಾಡಿದ ಮಹಾರಾಜರು, ಶ್ರೀಮಂತ ಪಾಟೀಲ ಅವರು ಈ ಭಾಗದ ಜನರ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. 23 ಕೆರೆ ತುಂಬಿಸಲು 200 ಕೋಟಿ ರೂ. ಅನುದಾನ ತಂದಿದ್ದಾರೆ. ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಈಗಾಗಲೇ ಚಾಲನೆಯಲ್ಲಿದೆ. ಯೋಜನೆಗಳು ಸಕಾಲದಲ್ಲಿಪೂರ್ಣಗೊಂಡರೆ ಈ ಭಾಗದ ಜನರ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದರು.

ಈ ವೇಳೆ ಬಿಜೆಪಿ ಪಕ್ಷದ ಮುಖಂಡ ಮಹಾದೇವ ಕೋರೆ, ಅಪ್ಪಾಸಾಹೇಬ ಅವತಾಡೆ, ಸುಶಾಂತ ಶ್ರೀಮಂತ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ