ಆ್ಯಪ್ನಗರ

ಕಾನೂನು ಹೋರಾಟದಿಂದ ಪರಿಹಾರ ಪಡೆದ ವಿದ್ಯಾರ್ಥಿನಿ

ಬೆಳಗಾವಿ: ಪದವಿ ಅಧ್ಯಯನ ಪೂರ್ತಿಗೊಳಿಸಿದ ...

Vijaya Karnataka 14 Jan 2020, 5:00 am
ಬೆಳಗಾವಿ: ಪದವಿ ಅಧ್ಯಯನ ಪೂರ್ತಿಗೊಳಿಸಿದ ವಿದ್ಯಾರ್ಥಿನಿಗೆ ಅಂಕ ಪಟ್ಟಿ ನೀಡದೆ ಲೋಪ ಎಸಗಿದ ಕಾರಣಕ್ಕೆ 1.01 ಲಕ್ಷ ರೂ. ಪರಿಹಾರ ವಿತರಿಸಬೇಕು ಎಂದು ಜಿಲ್ಲಾಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ (ಆರ್‌ಸಿಯು) ಆದೇಶ ನೀಡಿದೆ.
Vijaya Karnataka Web a student who was relieved of a legal fight
ಕಾನೂನು ಹೋರಾಟದಿಂದ ಪರಿಹಾರ ಪಡೆದ ವಿದ್ಯಾರ್ಥಿನಿ


ಸೇವಾ ನ್ಯೂನತೆ ಕಾರಣಕ್ಕೆ ಒಂದು ಲಕ್ಷ ರೂ. ಹಾಗೂ ಮಾನಸಿಕ ವೇದನೆಗೆ ಪರಿಹಾರವಾಗಿ 1 ಸಾವಿರ ರೂ.ಗಳನ್ನು 30 ದಿನಗಳೊಳಗಾಗಿ ವಿದ್ಯಾರ್ಥಿನಿಗೆ ಕೊಡಬೇಕು. ತಪ್ಪಿದರೆ ಶೇ. 9 ರಷ್ಟು ಬಡ್ಡಿ ಸೇರಿಸಿ ಕೊಡಬೇಕು ಎಂದು ವೇದಿಕೆಯ ಅಧ್ಯಕ್ಷ ಬಿ.ವಿ.ಗುದ್ಲಿ, ಸದಸ್ಯೆ ಸುನೀತಾ ಅವರು ಆದೇಶ ಹೊರಡಿಸಿದ್ದಾರೆ.

ಬಾಗಲಕೋಟೆಯ ಕೌಲಪೇಟ್‌ ಗ್ರಾಮದ ಗೀತಾ ಈರಪ್ಪ ಇಜಾರ್‌ದಾರ್‌ ವಿವಿ ವಿರುದ್ಧ ಕಾನೂನು ಹೋರಾಟ ಮಾಡಿ ಪರಿಹಾರ ಪಡೆದ ವಿದ್ಯಾರ್ಥಿನಿ.

ಆರ್‌ಸಿಯು ಅಧೀನದ ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಗೀತಾ ಅವರು 2015ರಲ್ಲಿಬಿ.ಕಾಂ ಪದವಿ ಪಾಸಾಗಿದ್ದರು. ಆದರೆ, ಕಾಲೇಜು ಬಿ.ಕಾಂ ಪದವಿ ಪಾಸಾದ ಅಂಕಪಟ್ಟಿ ಕೊಟ್ಟಿರಲಿಲ್ಲ. ಇದರಿಂದ ಗೀತಾ ಅವರಿಗೆ ಮುಂದಿನ ವಿದ್ಯಾಭ್ಯಾಸ ಮತ್ತು ಉದ್ಯೋಗ ಪಡೆಯಲು ಸಮಸ್ಯೆ ಆಗಿತ್ತು.

ಹಾಗಾಗಿ ಪರಿಹಾರ ಕೋರಿ ಜಿಲ್ಲಾಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ 2018ರ ಏ.24 ರಂದು ದೂರು ನೀಡಿದ್ದರು. ಅದರಂತೆ ಜಿಲ್ಲಾಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಆರ್‌ಸಿಯು ಹಾಗೂ ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯಕ್ಕೆ ನೋಟಿಸ್‌ ಜಾರಿ ಮಾಡಿತ್ತು. ಬಳಿಕ ವಿವಿ ಮತ್ತು ಕಾಲೇಜು ಪ್ರತಿನಿಧಿಗಳು ಗೀತಾ ಅವರ ಅಂತಿಮ ವರ್ಷದ ಅಂಕ ಪಟ್ಟಿಯನ್ನು ವೇದಿಕೆ ಎದುರು ಹಾಜರುಪಡಿಸಿದ್ದರು.

ಎರಡೂ ಕಡೆಯಿಂದ ವಾದ ಆಲಿಸಿದ ವೇದಿಕೆಯು ವಿವಿ ಮತ್ತು ಕಾಲೇಜಿನ ಸೇವೆಯಲ್ಲಿನ್ಯೂನ್ಯತೆ ಇರುವುದಾಗಿ ಅಭಿಪ್ರಾಯ ಪಟ್ಟು ಗೀತಾ ಅವರಿಗೆ ಪರಿಹಾರ ಕೊಡುವಂತೆ ಆದೇಶ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ