ಆ್ಯಪ್ನಗರ

ದತ್ತ ಸಕ್ಕರೆ ಕಾರ್ಖಾನೆಗೆ ಹರಿಯಾಣ ಸಂಶೋಧನಾ ಸಂಸ್ಥೆಯ ಅಧಿಕಾರಿಗಳ ತಂಡ ಭೇಟಿ

ಇಚಲಕರಂಜಿ: ಶಿರೋಳ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಗೆ ಹರಿಯಾಣದ ಕೇಂದ್ರೀಯ ಮೃದಲವನತಾ ಅನುಸಂಧಾನ ಸಂಶೋಧನಾ ಸಂಸ್ಥೆಯ ಅಧಿಕಾರಿಗಳಾದ ಡಾ ಡಿಎಸ್‌...

Vijaya Karnataka 16 Jun 2019, 5:00 am
ಇಚಲಕರಂಜಿ : ಶಿರೋಳ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಗೆ ಹರಿಯಾಣದ ಕೇಂದ್ರೀಯ ಮೃದಲವನತಾ ಅನುಸಂಧಾನ ಸಂಶೋಧನಾ ಸಂಸ್ಥೆಯ ಅಧಿಕಾರಿಗಳಾದ ಡಾ. ಡಿ.ಎಸ್‌. ಬುಂದೇಲಾ, ಡಾ. ಅನೀಲಕುಮಾರ, ಡಾ. ಆರ್‌. ರಾಜು ಹಾಗೂ ಎಂಜಿನಿಯರ್‌ ಸಾಗರ ವಿಭೂತೆ ಭೇಟಿ ನೀಡಿದರು.
Vijaya Karnataka Web BEL-15ICH2


ಇದೇ ವೇಳೆ, ಗಣೇಶವಾಡಿ, ಶೇಡಶಾಳ, ಆಲಾಸ, ಘಾಲವಾಡ, ಅರ್ಜುನವಾಡ, ಕವಠೇಸಾರ, ಬುಬನಾಳ, ಕುಟವಾಡ, ಹಸೂರ ಹಾಗೂ ಅಥಣಿ ತಾಲೂಕಿನ ಮಂಗಾವತಿ, ಕಾಗವಾಡ ಗ್ರಾಮಗಳಲ್ಲಿ ಕಾರ್ಖಾನೆಯ ವತಿಯಿಂದ ಕೈಗೊಂಡಿರುವ ಸವಳು ಭೂಮಿಗೆ ಫಲವತ್ತತೆ ನೀಡುವ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದತ್ತ ಕಾರ್ಖಾನೆಯ ಪರವಾಗಿ ಅಧ್ಯಕ್ಷ ಗಣಪತರಾವ ಪಾಟೀಲ ಅವರು ಡಾ. ಬುಂದೇಲಾ ಸೇರಿದಂತೆ ತಂಡದವರಿಗೆ ಸತ್ಕಾರ ನೀಡಿದರು.

ಈ ವೇಳೆ ಕಾರ್ಖಾನೆಯ ಸಂಚಾಲಕ ವಿಶ್ವನಾಥ ಮಾನೆ, ವಿಜಯ ಸೂರ್ಯವಂಶಿ, ಪ್ರಮೋದ ಪಾಟೀಲ, ಕಾರ್ಯಕಾರಿ ಸಂಚಾಲಕ ಎಂ.ವಿ. ಪಾಟೀಲ, ಮುಖ್ಯಕೃಷಿ ಅಧಿಕಾರಿ ಶ್ರೀಶೈಲ ಹೆಗ್ಗಣ್ಣ, ಕಬ್ಬು ಅಭಿವೃದ್ಧಿ ಅಧಿಕಾರಿ ದಿಲೀಪ ಜಾಧವ, ಭೈಯಾಸಾಹೇಬ ಪಾಟೀಲ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ