ಆ್ಯಪ್ನಗರ

ರಮೇಶ ಕತ್ತಿ ವಿರುದ್ಧ ಆರೋಪ ಸಾಬೀತಿಗೆ ಸಿದ್ಧ: ಎ.ಬಿ. ಪಾಟೀಲ

ವಿಕ ಸುದ್ದಿಲೋಕ 21 Jan 2017, 5:00 am

ಸಂಕೇಶ್ವರ: ಮಾಜಿ ಸಂಸದ ರಮೇಶ ಕತ್ತಿ ಅವರ ಆಹ್ವಾನದಂತೆ, ಒಂದೇ ವೇದಿಕೆಯಲ್ಲಿ ಅವರ ಮೇಲಿನ ಆರೋಪ ಸಾಬೀತುಪಡಿಸಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಎ.ಬಿ. ಪಾಟೀಲ ಘೋಷಿಸಿದ್ದಾರೆ.

Vijaya Karnataka Web ab patil
ರಮೇಶ ಕತ್ತಿ ವಿರುದ್ಧ ಆರೋಪ ಸಾಬೀತಿಗೆ ಸಿದ್ಧ: ಎ.ಬಿ. ಪಾಟೀಲ


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1994ರ ಮೊದಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಸಾಲ-ಆಸ್ತಿ ಹಾಗೂ 2016-2017ರ ಸಾಲ-ಆಸ್ತಿಗಳನ್ನು ಘೋಷಿಸಬೇಕು. ಕಾರ್ಖಾನೆಯ ಸಾಲ ಹೆಚ್ಚಿದ್ದು, ಈ ಭಾಗದ ಸಿಬ್ಬಂದಿ ಹಾಗೂ ರೈತರಿಗೆ ಮೋಸವಾಗಿದೆ. ಅಲ್ಲದೆ, ಸಹಕಾರಿ ಸಂಘ ಸಂಸ್ಥೆಗಳು ಸೇರಿದಂತೆ ಸಕ್ಕರೆ ಕಾರ್ಖಾನೆ, ಪುರಸಭೆ, ಟಿಎಪಿಸಿಎಂಎಸ್‌, ಎಪಿಎಂಸಿ, ವಿದ್ಯುತ್‌ ಸಂಘ, ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಅವರಿಗೆ ಅಧಿಕಾರ ನೀಡದೇ ರಬ್ಬರ್‌ ಸ್ಟ್ಯಾಂಪ್‌ಗಳಂತೆ ಬಳಸಿಕೊಳ್ಳುತ್ತಿರುವ ಕತ್ತಿ ಸಹೋದರರು ಹುದ್ದೆಯ ಗೌರವ ಕಡಿಮೆಗೊಳಿಸಿದ್ದಾರೆ ಎಂದು ಎಬಿ ಆರೋಪಿಸಿದರು. ರಾಜ್ಯ ಸರಕಾರ ರೈತರಿಗೆ ಶೂನ್ಯಬಡ್ಡಿಯಲ್ಲಿ ಬಿಡಿಸಿಸಿ ಬ್ಯಾಂಕ್‌ ಮೂಲಕ ಸಾಲ ವಿತರಣೆ ಮಾಡಿದರೂ ಬೆಳಗಾವಿ ಡಿಸಿಸಿ ಬ್ಯಾಂಕ್‌ ಅಧಿಕಾರ ಹೊಂದಿರುವ ಕತ್ತಿ ಸಹೋದರರು ಸಾಲ ವಿತರಣೆಯಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಆರೋಪಿಸಿದರು. ಶಿವಾನಂದ ನೇಸರಿ, ಗಂಗಾಧರ ಮುಡಸಿ, ಶಿವಶಂಕರ ಚೌಗಲಾ, ಬಸನಗೌಡ ಪಾಟೀಲ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ