ಆ್ಯಪ್ನಗರ

ಖಾರದ ಪುಡಿ ಎರಚಿ ಸ್ಕೂಟರ್‌ ಅಪಹರಣ

ಬೈಲಹೊಂಗಲ : ಪಟ್ಟಣದ ಮುರಕಿಭಾವಿ ರಸ್ತೆಯ ಹೊರವಲಯದ ಪ್ರದೇಶದಲ್ಲಿ ...

Vijaya Karnataka 27 Sep 2019, 5:00 am
ಬೈಲಹೊಂಗಲ : ಪಟ್ಟಣದ ಮುರಕಿಭಾವಿ ರಸ್ತೆಯ ಹೊರವಲಯದ ಪ್ರದೇಶದಲ್ಲಿ, ಮಹಿಳೆಯ ಕಣ್ಣಿಗೆ ಖಾರದ ಪುಡಿ ಎರಚಿ ಅವರ ಪ್ಲೆಜರ್‌ ಸ್ಕೂಟರ್‌ ಅನ್ನು ಅಪಹರಣ ಮಾಡಲಾಗಿದೆ.
Vijaya Karnataka Web abduction of scented powder scooter
ಖಾರದ ಪುಡಿ ಎರಚಿ ಸ್ಕೂಟರ್‌ ಅಪಹರಣ


ಮುರಕಿಭಾವಿ ಗ್ರಾಮದ ಪ್ರೌಢ ಶಾಲೆಯ ನೌಕರಸ್ಥೆ ಗಂಗವ್ವ ಮಡಿವಾಳರ ಕೆಲಸ ಮುಗಿಸಿ ಪಟ್ಟಣದಲ್ಲಿನ ತಮ್ಮ ಮನೆಗೆ ಹಿಂದಿರುಗುವಾಗ ಯುವಕನೊಬ್ಬ ಮುಖಕ್ಕೆ ಹೆಲ್ಮೆಟ್‌ ಹಾಕಿಕೊಂಡು ಮಹಿಳೆಗೆ ಗಾಡಿ ನಿಲ್ಲಿಸಲು ಕೈ ಮಾಡಿದ್ದಾನೆ. ಮಹಿಳೆ ವಾಹನ ನಿಲ್ಲಿಸದೇ ಚಲಾಯಿಸಲು ಯತ್ನಿಸಿದಾಗ, ಮುಖಕ್ಕೆ ಖಾರದ ಪುಡಿ ಎರಚಿದ್ದಾನೆ. ಕಣ್ಣು ಕಾಣದೇ ಮಹಿಳೆ ಕೆಳಗೆ ಬೀಳುತ್ತಿದ್ದಂತೆ ವಾಹನ ಅಪಹರಿಸಿ ಪರಾರಿಯಾಗಿದ್ದಾನೆ.

ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಅಪಹರಣಕಾರನ ಪತ್ತೆಗೆ ಜಾಲ ಬೀಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ