ಆ್ಯಪ್ನಗರ

ಸಮಾನತೆ ಆಶಯದಡಿ 370ನೇ ವಿಧಿ ರದ್ದತಿ

ರಾಮದುರ್ಗ: ಸಂವಿಧಾನದ ಸಮಾನತೆಯ ಆಶಯ ಎತ್ತಿಹಿಡಿಯಲು ಜಮ್ಮು-ಕಾಶ್ಮೀರಕ್ಕೆ ...

Vijaya Karnataka 28 Sep 2019, 5:00 am
ರಾಮದುರ್ಗ: ಸಂವಿಧಾನದ ಸಮಾನತೆಯ ಆಶಯ ಎತ್ತಿಹಿಡಿಯಲು ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿತು ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಉಪಾಧ್ಯಕ್ಷ ವಿಕಾಸ ಮುತ್ತೂರ ಹೇಳಿದರು.
Vijaya Karnataka Web 27RD7_53


ಸ್ಥಳೀಯ ಶ್ರೀನಿವಾಸ ಸಭಾ ಭವನದಲ್ಲಿಹಮ್ಮಿಕೊಂಡಿದ್ದ 'ಒಂದು ದೇಶ ಒಂದು ಸಂವಿಧಾನ' ಕಾರ್ಯಕ್ರಮದಲ್ಲಿಮಾತನಾಡಿದ ಅವರು, ವಿಶೇಷ ಸ್ಥಾನಮಾನ ಇದ್ದ ವೇಳೆ ದೇಶದಲ್ಲಿಐದು ವರ್ಷಕ್ಕೊಮ್ಮೆ ನಡೆಯಬೇಕಿದ್ದ ಚುನಾವಣೆಗಳು ಆರು ವರ್ಷಕ್ಕೊಮ್ಮೆ ನಡೆಯುತ್ತಿದ್ದವು. ಅಷ್ಟೇ ಅಲ್ಲದೆ ಅಲ್ಲಿನ ಜನತೆ ಸಂವಿಧಾನದತ್ತವಾಗಿ ಸಿಗುವ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದರು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಜಿ.ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ರಮೇಶ ದೇಶಪಾಂಡೆ ಮಾತನಾಡಿದರು. ಜಿಪಂ ಸದಸ್ಯರಾದ ರೇಣಪ್ಪ ಸೋಮಗೊಂಡ, ಮಾರುತಿ ತುಪ್ಪದ, ಮುಖಂಡರಾದ ರಾಜು ಚಿಕ್ಕನ್ನವರ, ಗುರುಪಾದಪ್ಪ ಕಳ್ಳಿ, ಮಲ್ಲಣ್ಣ ಯಾದವಾಡ, ಶಶಿಧರ ಮಾಳವಾಡ, ಜಗದೀಶ ಲಾಹೋಟಿ, ವಿಜಯ ಗುಡದಾರೆ ಉಪಸ್ಥಿತರಿದ್ದರು.

ಗಂಗಾಧರ ಭೋಸಲೆ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ವಿಜಯ ನಾಯ್ಕ ನಿರೂಪಿಸಿದರು. ಸಿದ್ದು ಮೇತ್ರಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ