ಬೆಳಗಾವಿ: ಚಿಕ್ಕೋಡಿ- ನಿಪ್ಪಾಣಿ ರಸ್ತೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಪಿಂಪಳಗಾಂವದ ಸಂಭಾಜಿ ಆತ್ಮರಾಮ ಅವುಟೆ(35) ಮತ್ತು ಕಾಗಲ್ ಪಟ್ಟಣದ ಸಂಗ್ರಾಮ ಧನಾಜಿ ನಾಗರಾಳೆ (28) ಮೃತರು. ಚಿಕ್ಕೋಡಿಯಿಂದ ನಿಪ್ಪಾಣಿಗೆ ಸಂಚರಿಸುತ್ತಿದ್ದ ಕಾರು ನಿಪ್ಪಾಣಿ ಸಮೀಪದ ದನದಪೇಟೆ ಬಳಿ ಹೊರಟಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟ್ಯಾಕ್ಟರ್ ಚಾಲಕ ಶಿವಲಿಂಗ ಸತ್ಯೆಪ್ಪ ಖೋತ ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನಿಪ್ಪಾಣಿ ಠಾಣೆ ಸಿಪಿಐ ಕಿಶೋರ್ ಭರಣಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ: ಇಬ್ಬರು ಸಾವು
ಇಬ್ಬರು ಸಾವು ಬೆಳಗಾವಿ: ಚಿಕ್ಕೋಡಿ-ನಿಪ್ಪಾಣಿ ರಸ್ತೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ...
Vijaya Karnataka 14 Feb 2018, 5:00 am