ಆ್ಯಪ್ನಗರ

ಅಪಘಾತದಲ್ಲಿ ಬೈಕ್‌, ಟ್ರಕ್‌ ಬೆಂಕಿಗಾಹುತಿ

ಕಾಕತಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ ಬೈಕ್‌ ಮತ್ತು ಟ್ರಕ್‌ ನಡುವೆ ಅಪಘಾತ ಸಂಭವಿಸಿ ಎರಡೂ ವಾಹನಗಳು ಸುಟ್ಟು

Vijaya Karnataka 18 Apr 2019, 5:00 am
ಬೆಳಗಾವಿ: ಕಾಕತಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ ಬೈಕ್‌ ಮತ್ತು ಟ್ರಕ್‌ ನಡುವೆ ಅಪಘಾತ ಸಂಭವಿಸಿ ಎರಡೂ ವಾಹನಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ತಾಲೂಕಿನ ಕಡೋಲಿ ಗ್ರಾಮದ ಸುನಿಲ ಶಿವಾಜಿ ಬೋಗನೆ (26), ವಿವೇಕ ಕೃಷ್ಣಾ ಬಿರ್ಜೆ(16) ಮತ್ತು ರಿತೇಶ ಪಾಟೀಲ (20) ಗಾಯಗೊಂಡಿದ್ದಾರೆ.
Vijaya Karnataka Web BEL-17 TRAK


ಗಾಯಾಗಳುಗಳು ಒಂದೇ ಬೈಕ್‌ ಮೇಲೆ ಕಣಬರ್ಗಿಯಿಂದ ಇಂಡಾಲ್‌ ಮಾರ್ಗವಾಗಿ ಕಡೋಲಿಗೆ ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಟ್ರಕ್‌ ಕೆಳಗೆ ಬೈಕ್‌ ಸಿಕ್ಕಿಹಾಕಿಕೊಂಡ ರಭಸಕ್ಕೆ ಬೆಂಕಿ ಕಾಣಿಸಿಕೊಂಡಿದೆ. ನೋಡುನೋಡುತ್ತಿದ್ದಂತೆ ಎರಡೂ ವಾಹನಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಬೈಕ್‌ ಮೇಲಿಂದ ಬಿದ್ದ ಮೂವರು ಗಾಯಗೊಂಡರೆ, ಟ್ರಕ್‌ನಲ್ಲಿದ್ದವರು ತಕ್ಷಣ ಇಳಿದು ಜೀವ ಉಳಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ಮೂಲದ ಟ್ರಕ್‌ ನಗರದ ಎಪಿಎಂಸಿಯಲ್ಲಿ ತರಕಾರಿ ಇಳಿಸಿ ಮರಳಿ ಹೋಗುತ್ತಿತ್ತು. 10ಲಕ್ಷ ರೂ.ಗೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಸಂಚಾರ ಉತ್ತರ ಠಾಣೆ ಪೊಲೀಸರು ಅಂದಾಜಿಸಿದ್ದಾರೆ. ನಿರ್ಲಕ್ಷ ್ಯದಿಂದ ಬೈಕ್‌ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ