ಆ್ಯಪ್ನಗರ

ಅಪಘಾತ: ಮಾಜಿ ಯೋಧ ಸಾವು

ಬೆಳಗಾವಿ : ಇಲ್ಲಿನ ಖಾನಾಪುರ ರಸ್ತೆಯ ಸಂಚಯನಿ ವೃತ್ತದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮಾಜಿ ಸೈನಿಕರೊಬ್ಬರು ಮೃತಪಟ್ಟು, ಮತ್ತೋರ್ವ ಮಾಜಿ ಸೈನಿಕರಿಗೆ ...

Vijaya Karnataka 26 Jun 2019, 5:00 am
ಬೆಳಗಾವಿ : ಇಲ್ಲಿನ ಖಾನಾಪುರ ರಸ್ತೆಯ ಸಂಚಯನಿ ವೃತ್ತದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮಾಜಿ ಸೈನಿಕರೊಬ್ಬರು ಮೃತಪಟ್ಟು, ಮತ್ತೋರ್ವ ಮಾಜಿ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೀರನವಾಡಿಯ ಗೋಮಟೇಶ್‌ ಕಾಲನಿಯ ಎಡ್ವಿನ್‌ ರಾಕಿ ಮಾಸ್ಕರ್‌ನಸ್‌ (53) ಮೃತ ವ್ಯಕ್ತಿ. ಪಾಟೀಲ ಗಲ್ಲಿಯ ಗಜಾನನ್‌ ನಾಗೇಶ ಪಾಟೀಲ (51) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಗೋಂದಳಿ ಗಲ್ಲಿಯಲ್ಲಿ ಪುತ್ರನನ್ನು ಭೇಟಿ ಮಾಡಿ ಬೈಕ್‌ ಮೇಲೆ ಮರಳಿ ಹೋಗುವಾಗ ಸಂಚಯನಿ ವೃತ್ತ ಬಳಿ ಅಪಘಾತ ಸಂಭವಿಸಿದ್ದರಿಂದ ಬೈಕ್‌ ಹಿಂಬದಿ ಸವಾರ ಎಡ್ವಿನ್‌ ಟ್ರಕ್‌ನ ಹಿಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃಪತಟ್ಟಿದ್ದಾರೆ. ರಸ್ತೆ ಮಧ್ಯೆ ಅಪಘಾತ ಸಂಭವಿಸಿದ್ದರಿಂದ ಕೆಲ ಹೊತ್ತು ಸಂಚಾರ ಸಮಸ್ಯೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ನಗರ ಸಂಚಾರ ದಕ್ಷಿಣ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ