ಆ್ಯಪ್ನಗರ

ಕೊಲೆಗೆ ಯತ್ನಿಸಿದ ಆರೋಪಿಗೆ ಶಿಕ್ಷೆ

ಬೆಳಗಾವಿ: ಮನೆ ಗೋಡೆ ವಿಷಯವಾಗಿ ಪತಿ-ಪತ್ನಿಯ ಕೊಲೆಗೆ ಯತ್ನಿಸಿದ ಆರೋಪಿಗಳಿಗೆ ಇಲ್ಲಿನ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಂಡ ಸಹಿತ ತಲಾ ಮೂರು ವರ್ಷ ...

Vijaya Karnataka 8 Jan 2019, 5:00 am
ಬೆಳಗಾವಿ : ಮನೆ ಗೋಡೆ ವಿಷಯವಾಗಿ ಪತಿ-ಪತ್ನಿಯ ಕೊಲೆಗೆ ಯತ್ನಿಸಿದ ಆರೋಪಿಗಳಿಗೆ ಇಲ್ಲಿನ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಂಡ ಸಹಿತ ತಲಾ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.
Vijaya Karnataka Web accused of attempt to murder sentenced
ಕೊಲೆಗೆ ಯತ್ನಿಸಿದ ಆರೋಪಿಗೆ ಶಿಕ್ಷೆ


ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಗ್ರಾಮದ ಮನೋಹರ ಅಪ್ಪಣ್ಣ ಕಡ್ಲಾಸ್ಕರ (43) ಹಾಗೂ ಅವರ ಪತ್ನಿ ಪ್ರೇಮಾ ಅಲಿಯಾಸ್‌ ಶೃತಿ ಮನೋಹರ ಕಡ್ಲಾಸ್ಕರ (36) ಶಿಕ್ಷೆಗೆ ಗುರಿಯಾದವರು. ಮನೋಹರ ಕಡ್ಲಾಸ್ಕರ್‌ ಅವರಿಗೆ 9,500 ರೂ. ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ಮತ್ತು ಪ್ರೇಮಾ ಕಡ್ಲಾಸ್ಕರ್‌ ಅವರಿಗೆ 3000 ರೂ.ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಕೆ.ಕೆ. ಕೊಪ್ಪ ಗ್ರಾಮದಲ್ಲಿನ ಮನೆ ಗೋಡೆಯ ವಿಷಯವಾಗಿ ಆರೋಪಿಗಳು ಮತ್ತು ಬಸಪ್ಪ ಹಾಲಪ್ಪ ಡೊಂಗರಗಾವಿ ಕುಟುಂಬದ ನಡುವೆ ವಿವಾದ ಹುಟ್ಟಿಕೊಂಡಿತ್ತು. 2016ರ ಸೆ. 23ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಜಮೀನಿಗೆ ಹೊರಟಿದ್ದ ಬಸಪ್ಪ ಡೊಂಗರಗಾವಿ ಅವರನ್ನು ತಡೆದ ಮನೋಹರ ಕಡ್ಲಾಸ್ಕರ್‌ ಅವಾಚ್ಯ ಶಬ್ದಗಳಿಂದ ನಿಂದಿಸಿ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಮನೋಹರ ಕಡ್ಲಾಸ್ಕರ್‌ ಪತ್ನಿ ಪ್ರೇಮಾ ಕಡ್ಲಾಸ್ಕರ್‌ ಗಾಯಾಳುವಿನ ಮನೆಗೆ ತೆರಳಿ ಮನೆಯಲ್ಲಿದ್ದ ಬಸಪ್ಪನ ಪತ್ನಿ ನೀಲವ್ವ ಡೊಂಗರಗಾವಿ ಮೇಲೂ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಸಪ್ಪ ಡೊಂಗರಗಾವಿ 22 ದಿನಗಳ ಕಾಲ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.

ಈ ಕುರಿತು ಗಾಯಾಳು ದಂಪತಿ ಮುರಗೋಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಸಾಕ್ಷಾಧಾರ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಬಿ.ಸೂರ‍್ಯವಂಶಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಿಳಿಬ್ಬರಿಗೂ ಸೋಮವಾರ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ಕಿರಣ ಪಾಟೀಲ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ