ಆ್ಯಪ್ನಗರ

ಹಣ ವಂಚನೆ ಆರೋಪ; ಮಹಿಳೆಯರ ಪ್ರತಿಭಟನೆ

ಬೈಲಹೊಂಗಲ: ಹಣಕಾಸು ವ್ಯವಹಾರದಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿದ ಬೆಳಗಾವಿ ತಾಲೂಕಿನ ಬಡಸ ಕೆಎಚ್‌...

Vijaya Karnataka 18 Jul 2019, 5:00 am
ಬೈಲಹೊಂಗಲ: ಹಣಕಾಸು ವ್ಯವಹಾರದಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿದ ಬೆಳಗಾವಿ ತಾಲೂಕಿನ ಬಡಸ ಕೆ.ಎಚ್‌.ಗ್ರಾಮದ ಮಹಿಳೆಯರು ಬುಧವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Vijaya Karnataka Web BEL-17HTP5


ರೈತ ಮುಖಂಡ ಮಡಿವಾಳಪ್ಪ ಹೊಸಮನಿ ಮಾತನಾಡಿ, ಬಡ ಮಹಿಳೆಯರು ಶ್ರಮಪಟ್ಟು ದುಡಿದ ಲಕ್ಷಾಂತರ ರೂಪಾಯಿ ಹಣವನ್ನು ಸ್ಥಳೀಯ ಕಂಪನಿಗೆ ಸಂದಾಯ ಮಾಡಿದ್ದಾರೆ. ಈಗ ಅವಧಿ ಮುಗಿದರೂ ಹಣ ವಾಪಸ್‌ ನೀಡುತ್ತಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಣ ಮರಳಿ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೋಹಿಣಿ ಸುಣಗಾರ, ಜೈರಾಬಿ ಯಕ್ಕುಂಡಿ, ನೀಲವ್ವ ಮದನಭಾವಿ, ಮಲ್ಲವ್ವ ಪಾಟೀಲ, ಶೈಲಾ ಸುಣಗಾರ, ಲಕ್ಷ್ಮೀ ಕುರುಬರ, ಕಾಶವ್ವಾ ಕುಡಚಿ, ಗಿರಿಜವ್ವಾ ನರಿ, ಜಯಶ್ರೀ ಕಲಾಲ ಸೇರಿದಂತೆ ಅನೇಕ ಮಹಿಳೆಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ