ಆ್ಯಪ್ನಗರ

ಚಿನ್ನದ ವ್ಯಾಪಾರಿ ಲೂಟಿಗೈದ ಆರೋಪಿಗಳ ಬಂಧನ

ಇಚಲಕರಂಜಿ: ಕಾರದಗಾ-ಇಚಲಕರಂಜಿ ರಸ್ತೆಯಲ್ಲಿ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲೂಟಿ ಮಾಡಿದ ಗ್ಯಾಂಗ್‌ನ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ಅವರಿಂದ 1...

Vijaya Karnataka 7 Feb 2019, 5:00 am
ಇಚಲಕರಂಜಿ : ಕಾರದಗಾ-ಇಚಲಕರಂಜಿ ರಸ್ತೆಯಲ್ಲಿ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲೂಟಿ ಮಾಡಿದ ಗ್ಯಾಂಗ್‌ನ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ಅವರಿಂದ 1.41ಲಕ್ಷ ರೂ. ವಸ್ತು ವಶಪಡಿಸಿಕೊಂಡಿದ್ದಾರೆ.
Vijaya Karnataka Web accused of robbing gold merchant arrested
ಚಿನ್ನದ ವ್ಯಾಪಾರಿ ಲೂಟಿಗೈದ ಆರೋಪಿಗಳ ಬಂಧನ


ಖಂಡೇರಾಜುರಿಯ ವಿಶಾಲ ರುಪನರ (23), ಧರಣಗುತ್ತಿಯ ಭರತೇಶ ಉರ್ಫ್‌ ಗುರು ಅಸ್ವಲೆ(22), ನಾಂದಣಿಯ ನಿಖಿಲ ಸುರೇಶ ಜಾಂಗಡೆ (22) ಬಂಧಿತರು. ಆರೋಪಿತರಿಂದ ಎರಡು ಪಿಸ್ತೂಲುಗಳು 32 ಜೀವಂತ ಗುಂಡುಗಳು ಸೇರಿ 1,41 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಜ. 25 ರಂದು ಸಂಜೆ ರೇಂದಾಳ-ಕಾರದಗಾ ರಸ್ತೆಯಲ್ಲಿ ಚಿನ್ನದ ವ್ಯಾಪಾರಿ ಶ್ರೀರಂಗ ದತ್ತಾತ್ರಯ ಪುಜಾರಿ ಅವರು ತಮ್ಮ ತಂದೆ ದತ್ತಾತ್ರಯ ಅವರೊಂದಿಗೆ ಬೈಕ್‌ನಲ್ಲಿ ಹುಪರಿ ಗ್ರಾಮಕ್ಕೆ ಬರುತ್ತಿದ್ದಾಗ ಅಜ್ಞಾತ ಆರೋಪಿಗಳು ಅಡ್ಡಗಟ್ಟಿ ಶ್ರೀರಂಗ ಪೂಜಾರಿಯವರ ಕೈಯಲ್ಲಿದ್ದ ಚೀಲ ಕೊಡಬೇಕೆಂದು ಬೆದರಿಸಿದಾಗ ಚೀಲ ನೀಡಲು ನಿರಾಕರಿಸಿದ್ದರಿಂದ ಅವರ ತಂದೆ ದತ್ತಾತ್ರಯ ಅವರ ಮೇಲೆ ಗುಂಡು ಹಾರಿಸಿ ಅವರ ಕೈಯಲ್ಲಿದ್ದ ವಾಚು, ಕೈಚೀಲ ಕಿತ್ತುಕೊಂಡು ಪರಾರಿಯಾಗಿದ್ದರು.

ಕರ್ನಾಟಕದ ಗಡಿಯಲ್ಲಿ ಘಟನೆ ನಡೆದಿದ್ದರಿಂದ ಹುಪರಿ ಪೊಲೀಸರು ಘಟನೆಯ ತನಿಖೆಯನ್ನು ಕಾರದಗಾ, ಸದಲಗಾ ಚಿಕ್ಕೋಡಿ ಶಿರಗುಪ್ಪಿ, ಅಂಕಲಿ ಪರಿಸರದಲ್ಲಿ ನಡೆಸುತ್ತಿದ್ದಾಗ ಘಟಣೆಯಲ್ಲಿ ಉಪಯೋಗಿಸಲಾದ ಬೈಕ್‌ನ್ನು ಮಿರಜ್‌ ತಾಲೂಕಿನ ನರವಾಡದ ಅಜಿತ ಕೋಳಿ ಎಂಬಾತ ಉಪಯೋಗಿಸುತ್ತಿದ್ದುದು ಗಮನಕ್ಕೆ ಬಂತು. ಆತನನ್ನು ವಶಕ್ಕೆ ಪಡೆದು ವಿಚಾರಿಸಿ ಆರೋಪಿ ವಿಶಾಲ ರುಪನರನನ್ನು ವಶಕ್ಕೆ ಪಡೆದ ಪೋಲಿಸರು ಇನ್ನಷ್ಟು ತನಿಖೆ ನಡೆಸಿದಾಗ ಉಳಿದ ಆರೋಪಿಗಳ ಸುಳಿವು ಲಭಿಸಿದೆ.

ಆರೋಪಿ ವಿಶಾಲನ ಮೇಲೆ ಮಹಾರಾಷ್ಟ್ರದ ಇತರ ಪ್ರದೇಶಗಳಲ್ಲೂ ದರೋಡೆ, ಬೆದರಿಕೆ, ಲೂಟಿ ಮನೆ ದರೋಡೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ಇನ್ನೊಬ್ಬ ಆರೋಪಿ ಮಾರುತಿ ಹೇರವಾಡೆ ಪರಾರಿಯಾಗಿದ್ದು ಶೋಧ ಕಾರ್ಯ ನಡೆದಿದೆ.

ಜಿಲ್ಲಾ ಪೊಲೀಸ್‌ ಅಧೀಕ್ಷ ಕ ಅಭಿನವ ದೇಶಮುಖ, ಅಪರ ಪೊಲೀಸ್‌ ನಿರೀಕ್ಷ ಕ ಶ್ರೀನಿವಾಸ ಘಾಡಗೆ, ಇಚಲಕರಂಜಿ ವಿಭಾಗದ ತಿರುಪತಿ ಕಾಕಡೆ, ಗಣೇಶ ಬಿರಾದಾರ, ತಾನಾಜಿ ಸಾವಂತ ಸತೀಶ ಶಿಂಧೆ ಹುಪರಿ ಪೊಲೀಸ್‌ ನಿರೀಕ್ಷಕಿ ರಿಝ್ವಾನಾ ನದಾಫ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ