ಆ್ಯಪ್ನಗರ

ಬೆಳಗಾವಿ: ಪಿಸ್ತೂಲ್‌ ತೋರಿಸಿ ಚಿನ್ನಾಭರಣ ದೋಚಿದ್ದ ಆರೋಪಿ ಅಂದರ್‌

ಬೆಳಗಾವಿ: ಚಿನ್ನಾಭರಣ ಖರೀದಿ ನೆಪದಲ್ಲಿ ಆಗಮಿಸಿ ಮಳಿಗೆಯ ...

Vijaya Karnataka 30 Jun 2020, 5:00 am
ಬೆಳಗಾವಿ: ಚಿನ್ನಾಭರಣ ಖರೀದಿ ನೆಪದಲ್ಲಿ ಆಗಮಿಸಿ ಮಳಿಗೆಯ ಮಾಲೀಕನಿಗೆ ಪಿಸ್ತೂಲ್‌ನಿಂದ ಬೆದರಿಸಿ 3 ಲಕ್ಷ ರೂ. ಮೌಲ್ಯದ ಆಭರಣ ದೋಚಿದ್ದ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Vijaya Karnataka Web 29LBS9_53
ಜ್ಯುವೆಲರ್ಸ್‌ ಮಳಿಗೆಯಲ್ಲಿಪಿಸ್ತೂಲ್‌ನಿಂದ ಬೆದರಿಸಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬಂಧಿಸಿರುವ ಕ್ಯಾಂಪ್‌ ಠಾಣೆ ಪೊಲೀಸರು.


ಬೆಳಗಾವಿ ತಾಲೂಕಿನ ಮಜಗಾವಿಯ ವೈಭವ ರಾಜೇಂದ್ರ ಪಾಟೀಲ (29) ಬಂಧಿತ. ಆರೋಪಿಯು ಜೂ.27 ರಂದು ಬೆಳಗಾವಿಯ ಹಿಂಡಲಗಾ ರಸ್ತೆಯ ವಿಜಯ ನಗರದಲ್ಲಿನ ಸಮೃದ್ಧಿ ಜ್ಯುವೆಲರ್ಸ್‌ ಮಳಿಗೆಗೆ ಆಗಮಿಸಿ ನೆಕ್ಲೆಸ್‌ ಖರೀದಿಸುವುದಾಗಿ ತಿಳಿಸಿದ್ದಾನೆ. ಈ ವೇಳೆ ನಾಲ್ಕು ನೆಕ್ಲೆಸ್‌ಗಳನ್ನು ಅಂಗಡಿ ಮಾಲೀಕರು ತೋರಿಸಿದ್ದಾರೆ. ನಂತರ ತನ್ನ ಹತ್ತಿರವಿದ್ದ ಪಿಸ್ತೂಲ್‌ ಹಿಡಿದುಕೊಂಡು ನೆಕ್ಲೆಸ್‌ ಕೊಡದಿದ್ದರೆ ನಿನ್ನನ್ನು ಕೊಂದು ಬಿಡುವುದಾಗಿ ಹೆದರಿಸಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ. ಈ ಕುರಿತು ಮಳಿಗೆ ಮಾಲೀಕ ಸಚಿನ್‌ ಬಾಂದಿವಾಡೇಕರ ನಗರದ ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಿದ್ದರು.

ಪ್ರಕರಣದ ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿಯಶಸ್ವಿಯಾಗಿದ್ದಾರೆ. ಆರೋಪಿಯಿಂದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ 1 ಕಂಟ್ರಿ ಪಿಸ್ತೂಲ್‌, 3 ಜೀವಂತ ಗುಂಡು ಹಾಗೂ 1 ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎಸಿಪಿ ಚಂದ್ರಪ್ಪ ಮಾರ್ಗದರ್ಶನದಲ್ಲಿಪೊಲೀಸ್‌ ಇನ್ಸ್‌ಪೆಕ್ಟರ್‌ ಡಿ.ಸಂತೋಷಕುಮಾರ, ಎಎಸ್‌ಐಗಳಾದ ಬಿ.ಆರ್‌.ಡೂಗ್‌, ಎಸ್‌.ಎಂ. ಬಾಂಗಿ, ಎಂ.ವೈ. ಹುಕ್ಕೇರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ