ಆ್ಯಪ್ನಗರ

ರಾಜ್ಯ ಮಟ್ಟದ ಸ್ನೇಹ ಸಮ್ಮಿಲನದಲ್ಲಿ ಸಾಧನೆ

ಕಾಗವಾಡ: ಇಲ್ಲಿನ ಶಿವಾನಂದ ಮಹಾವಿದ್ಯಾಲಯದ ಬಿಕಾಂ ಮತ್ತು ಬಿಎ ವಿದ್ಯಾರ್ಥಿಗಳು ಚಿಕ್ಕೋಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಕಲಾ ದಿನದ ಒಂದು ದಿನದ ...

Vijaya Karnataka 22 Mar 2019, 5:00 am
ಕಾಗವಾಡ : ಇಲ್ಲಿನ ಶಿವಾನಂದ ಮಹಾವಿದ್ಯಾಲಯದ ಬಿಕಾಂ ಮತ್ತು ಬಿಎ ವಿದ್ಯಾರ್ಥಿಗಳು ಚಿಕ್ಕೋಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಕಲಾ ದಿನದ ಒಂದು ದಿನದ ರಾಜ್ಯ ಮಟ್ಟದ ಸ್ನೇಹ ಸಮ್ಮಿಲನ-2019ರಲ್ಲಿ ಸಮಗ್ರ ಪ್ರಶಸ್ತಿಗಳಿಸಿದ್ದಾರೆ.
Vijaya Karnataka Web BEL-21 KAGWAD 1 NEWS PHOTO


ಈ ಕುರಿತು ಪ್ರಾಚಾರ‍್ಯ ಡಾ. ಜಿ.ಜಿ. ಕರಲಟ್ಟಿ ಗುರುವಾರ ಮಾಹಿತಿ ನೀಡಿದರು. ಡಾ. ಎಸ್‌.ಓ.ಹಲಸಗಿ ಮಾತನಾಡಿ, ಕಳೆದ ಫೆಬ್ರವರಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕಾಮರ್ಸ್‌ ಫೆಸ್ಟ್‌ ಪವರ್‌ ಆಫ್‌ ಫಿಫ್ಟಿ ಆಯೋಜಿಸಿದ್ದರಿಂದ ಸಾಕಷ್ಟು ಅನುಭವ ಪಡೆದು, ತಮ್ಮ ಪರಿಣಿತಿ, ಜ್ಞಾನದೊಂದಿಗೆ ವಿವಿಧ ವಿಭಾಗಗಳಲ್ಲಿ ಜಯಿಸಿದ್ದಾರೆ ಎಂದರು.

ಈ ಸ್ಪರ್ಧೆಗಳಲ್ಲಿ ಸುನೀಲ ಜಂಗಮಶೆಟ್ಟಿ, ಜಿನಶ್ರೀ ಗಣೆ, ಸೋನಾಲಿ ಪಡತರೆ, ಶ್ವೇತಾವರಿ ಗಣೆ, ಅಮೃತಾ ಮಾದಿಗೊಂಡ, ಶ್ವೇತಾ ಗಣೆ, ಕೋಮಲ ಕುರಣೆ ಮತ್ತು ಸಾವಿತ್ರಿ ಕಗ್ಗೂಡೆ ಭಾಗವಹಿಸಿದ್ದರು. ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ. ಬಿ.ಎ.ಪಾಟೀಲ ಮತ್ತು ಪ್ರೊ. ಅಶ್ವಿನಿ ಸವದತ್ತಿ ಮಾರ್ಗದರ್ಶನ ನೀಡಿದ್ದರು ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಪ್ರೊ. ಎಸ್‌.ಎಸ್‌.ಬಾಗನೆ, ಪ್ರೊ. ಟಿ.ಆರ್‌.ದರೇಕರ, ಡಾ. ಎಸ್‌.ಎ. ಕರ್ಕಿ, ಡಾ. ಡಿ.ಡಿ. ನಗರಕರ, ಡಾ. ಎಂ.ವೈ. ಭೋಸಲೆ, ಡಾ. ಎಸ್‌.ಪಿ. ತಳವಾರ, ಪ್ರೊ. ಬಿ.ಡಿ.ದಾಮಣ್ಣವರ, ಪ್ರೊ. ಜೆ.ಕೆ.ಪಾಟೀಲ, ಪ್ರೊ. ಆರ್‌.ಎಸ್‌.ನಾಗರೆಡ್ಡಿ, ಡಾ. ಆರ್‌.ಎಸ್‌. ಕಲ್ಲೋಳಿಕರ, ಪ್ರೊ. ಕಿರಣ ದೇಸಾಯಿ, ಪ್ರೊ. ಎ.ಐ. ಜಂಗಮಶೆಟ್ಟಿ, ಪ್ರೊ. ಎಸ್‌.ಡಿ. ಮಗದುಮ್‌ ಸೇರಿದಂತೆ ಇನ್ನಿತರ ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ