ಆ್ಯಪ್ನಗರ

ಪರಿಹಾರ ಚೆಕ್‌ ವಿತರಣೆಗೆ ಅಡ್ಡಿಪಡಿಸಿದರೆ ಕ್ರಮ

ನೆರೆ ಸಂತ್ರಸ್ತರಿಗೆ ನೀಡಲಾಗುತ್ತಿರುವ ತಾತ್ಕಾಲಿಕ ಪರಿಹಾರ ಚೆಕ್‌ ವಿತರಣೆಗೆ ...

Vijaya Karnataka 8 Sep 2019, 5:00 am
ಬೆಳಗಾವಿ: ನೆರೆ ಸಂತ್ರಸ್ತರಿಗೆ ನೀಡಲಾಗುತ್ತಿರುವ ತಾತ್ಕಾಲಿಕ ಪರಿಹಾರ ಚೆಕ್‌ ವಿತರಣೆಗೆ ಕೆಲ ಭಾಗಗಳಲ್ಲಿ ವಿನಾಕಾರಣ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪಗಳಿದ್ದು, ಅಡ್ಡಿ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ. ''ಜಿಲ್ಲೆಯಲ್ಲಿ ಮತ್ತೆ ನೆರೆ ಆವರಿಸಿದರೆ ತಕ್ಷಣ ರಕ್ಷಣಾ ಕಾರ್ಯ ಕೈಗೊಳ್ಳಲು ರಕ್ಷಣಾ ತಂಡ ನಿಯೋಜಿಸಲಾಗಿದೆ. ಈಗಾಗಲೆ ಪುಣೆಯಿಂದ ಎನ್‌ಡಿಆರ್‌ಎಫ್‌ನ ಮೂರು ತಂಡಗಳು ಜಿಲ್ಲೆಗೆ ಆಗಮಿಸಿವೆ. ಇವುಗಳನ್ನು ಅಥಣಿ, ಕಾಗವಾಡ ಮತ್ತು ಕುಡಚಿ ಭಾಗಗಳಲ್ಲಿ ನಿಯೋಜಿಸಲಾಗಿದೆ. ಇದರಲ್ಲಿ ಒಂದು ತಂಡವನ್ನು ರಾಮದುರ್ಗ ತಾಲೂಕಿಗೆ ಕಳುಹಿಸಿಕೊಡಲಾಗುತ್ತಿದೆ. ಜತೆಗೆ ಸ್ಥಳೀಯ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ'', ಎಂದು ಅವರು ತಿಳಿಸಿದ್ದಾರೆ.
Vijaya Karnataka Web action if the issuance of a remedial check is interrupted
ಪರಿಹಾರ ಚೆಕ್‌ ವಿತರಣೆಗೆ ಅಡ್ಡಿಪಡಿಸಿದರೆ ಕ್ರಮ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ