ಬೆಳಗಾವಿ: ರಾಜ್ಯದ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಶನಿವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 11.15ಕ್ಕೆ ರಾಮದುರ್ಗಕ್ಕೆ ಆಗಮಿಸುವ ಅವರು, 11.45ಕ್ಕೆ ಹೇಮರೆಡ್ಡಿ ಮಲ್ಲಮನ ನೂತನ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಯರಗಟ್ಟಿಗೆ ಆಗಮಿಸಿ 3.30ಕ್ಕೆ ಕೃಷಿ ಯಂತ್ರಧಾರೆ ಯೋಜನೆಯಡಿ ಬಾಡಿಗೆ ಆಧಾರಿತ ಸೇವಾ ಕೇಂದ್ರಕ್ಕೆ ಭೇಟಿ ನೀಡುವರು. ಸಂಜೆ 4.30ಕ್ಕೆ ಕಡಬಿ ಗ್ರಾಮದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕೈಗೊಂಡ ರೈತನ ಕ್ಷೇತ್ರಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.
ಕೃಷಿ ಸಚಿವರ ಜಿಲ್ಲಾ ಪ್ರವಾಸ
ರಾಜ್ಯದ ಕೃಷಿ ಸಚಿವ ಎನ್ಎಚ್ ಶಿವಶಂಕರ ರೆಡ್ಡಿ ಶನಿವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಬೆಳಗ್ಗೆ 1115ಕ್ಕೆ ರಾಮದುರ್ಗಕ್ಕೆ ಆಗಮಿಸುವ ಅವರು, 11...
Vijaya Karnataka 22 Jun 2019, 5:00 am