ಆ್ಯಪ್ನಗರ

ಉಗ್ರರ ಕೃತ್ಯಕ್ಕೆ ಐಗಳಿ ಗ್ರಾಮಸ್ಥರ ಖಂಡನೆ

ಐಗಳಿ: ಕಾಶ್ಮೀರದಲ್ಲಿ ಉಗ್ರರ ದುಷ್ಕೃತ್ಯಕ್ಕೆ ಗುರುವಾರ ಬಲಿಯಾದ 42 ವೀರ ಯೋಧರಿಗೆ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಶ್ರದ್ಧಾಂಜಲಿ ಅರ್ಪಿಸಿದರು...

Vijaya Karnataka 16 Feb 2019, 5:00 am
ಐಗಳಿ : ಕಾಶ್ಮೀರದಲ್ಲಿ ಉಗ್ರರ ದುಷ್ಕೃತ್ಯಕ್ಕೆ ಗುರುವಾರ ಬಲಿಯಾದ 42 ವೀರ ಯೋಧರಿಗೆ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಶ್ರದ್ಧಾಂಜಲಿ ಅರ್ಪಿಸಿದರು.
Vijaya Karnataka Web BEL-15 AIGALI 4


ಗ್ರಾಮದಲ್ಲಿ ಆದರ್ಶ ಶಾಲಾ ಮಕ್ಕಳು ದೀಪ ಹಿಡಿದು ಉಗ್ರರ ವಿರುದ್ಧ ಧಿಕ್ಕಾರ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಷ್ಟ್ರೀಯ ಕ್ರೀಡಾ ಮಂಡಳದ ವೇದಿಕೆಯ ಮುಂಭಾಗದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲಾಯಿತು.

ಈ ವೇಳೆ ಎ.ಎಸ್‌. ತೆಲಸಂಗ ಹಾಗೂ ಶಿವಾನಂದ ಶಿಂದೂರ ಉಗ್ರರ ಕೃತ್ಯ ಖಂಡಿಸಿ ಮಾತನಾಡಿ, ಹುತಾತ್ಮ ಯೋಧರ ಕುಟುಂಬದೊಂದಿಗೆ ಇಡೀ ದೇಶವೇ ಇದ್ದು, ಉಗ್ರರ ಹುಟ್ಟಡಗಿಸಲು ಯೋಗ್ಯ ಕ್ರಮಗಳನ್ನು ಸರಕಾರ ಕೂಡಲೇ ತೆಗೆದುಕೊಳ್ಳಬೇಕು ಎಂದರು.

ಗ್ರಾಮದ ಸಹಕಾರಿ ಸಂಘಗಳ ಹಾಗೂ ಗ್ರಾಪಂ ಸದಸ್ಯರು, ನಾನಾ ಯುವಕ ಮಂಡಳಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಯುವಕರು, ಮಕ್ಕಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ