ಆ್ಯಪ್ನಗರ

ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾದ ಮೂರೂ ಕ್ಷೇತ್ರ

ಬೆಳಗಾವಿ: ಜಿಲ್ಲೆಯ ಮೂರು ಕ್ಷೇತ್ರಗಳ ...

Vijaya Karnataka 30 Nov 2019, 5:00 am
ಬೆಳಗಾವಿ: ಜಿಲ್ಲೆಯ ಮೂರು ಕ್ಷೇತ್ರಗಳ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಸ್ಟಾರ್‌ ಪ್ರಚಾರಕರ ದಂಡೇ ಆಗಮಿಸುತ್ತಿದ್ದು ಪ್ರಚಾರದ ಕಣ ಇನ್ನಷ್ಟು ರಂಗೇರಲಿದೆ.
Vijaya Karnataka Web all three constituencies are question of prestige for leaders
ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾದ ಮೂರೂ ಕ್ಷೇತ್ರ


ಇತರ ಜಿಲ್ಲೆಗಳ ರಾಜಕಾರಣಕ್ಕೆ ಹೋಲಿಕೆ ಮಾಡಿದರೆ ಬೆಳಗಾವಿಯ ರಾಜಕಾರಣ ವಿಭಿನ್ನ. ಪಕ್ಷ ಮತ್ತು ಜಾತಿ ಲೆಕ್ಕಾಚಾರದ ಜತೆಗೆ ಸಕ್ಕರೆ ಕಾರ್ಖಾನೆ ಲಾಬಿಯೂ ಇಲ್ಲಿದೆ. ಇಂಥ ಜಿಲ್ಲೆಯ ಮತದಾರರನ್ನು ಸೆಳೆಯಲು ಸ್ಟಾರ್‌ ಪ್ರಚಾರಕರು ಈಗಾಗಲೇ ಒಂದು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದಾರೆ. ಈಗ ಎರಡನೇ ಸುತ್ತಿಗೆ ಅಣಿಯಾಗುತ್ತಿದ್ದಾರೆ. ಅಥಣಿ, ಕಾಗವಾಡ ಮತ್ತು ಗೋಕಾಕ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಪ್ರಚಾರಕ್ಕೆ ಅತಿ ಹೆಚ್ಚು ಸಮಯ ಮೀಸಲಿಟ್ಟಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತೆ ಜಿಲ್ಲೆಗೆ ಬರುತ್ತಿದ್ದಾರೆ.

ಆರಂಭದಲ್ಲಿಎರಡು ದಿನ ಜಿಲ್ಲೆಯಲ್ಲಿಯೇ ಇದ್ದು ಮೂರೂ ಕ್ಷೇತ್ರಗಳಲ್ಲಿಪ್ರಚಾರ ನಡೆಸಿದ್ದ ಯಡಿಯೂರಪ್ಪ ಅವರು ಡಿ.1 ರಂದು ಜಿಲ್ಲೆಗೆ ಬರಲಿದ್ದು ಕಾಗವಾಡ ಕ್ಷೇತ್ರದ ಕೆಂಪವಾಡದಲ್ಲಿವಾಸ್ತವ್ಯ ಮಾಡಲಿದ್ದಾರೆ. ಡಿ.2 ರಂದು ಕಾಗವಾಡ ಮತ್ತು ಅಥಣಿ ಕ್ಷೇತ್ರದಲ್ಲಿಪ್ರಚಾರ ನಡೆಸಲಿದ್ದಾರೆ.

ಇನ್ನು ಕಾಂಗ್ರೆಸ್‌ ಪಾಳಯದಲ್ಲಿಸ್ಟಾರ್‌ ಪ್ರಚಾರಕರು ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಸ್ಟಾರ್‌ ಪ್ರಚಾರಕ ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಅಥಣಿ ಕ್ಷೇತ್ರದ ಅಬ್ಬರದ ಪ್ರಚಾರ ಮಾಡಿದ್ದು, ಶನಿವಾರ ಕಾಗವಾಡ ಮತ್ತು ಗೋಕಾಕದಲ್ಲಿಪ್ರಚಾರ ನಡೆಸಲಿದ್ದಾರೆ.

ಕಾಂಗ್ರೆಸ್‌ನ ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳಕರ್‌ ಅವರ ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್‌, ಡಿಸಿಎಂ ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್‌, ಸಿ.ಸಿ.ಪಾಟೀಲ ಜತೆಗೆ ಸ್ಥಳೀಯ ಶಾಸಕರು, ಸಂಸದರು ಕೂಡ ಪ್ರಚಾರದಲ್ಲಿಭಾಗಿಯಾಗಿದ್ದಾರೆ.

ಜೆಡಿಎಸ್‌ಗೆ ಗೋಕಾಕ ಗೆಲ್ಲುವ ಹಠ:
ಕಾಗವಾಡ ಮತ್ತು ಗೋಕಾಕ ಕ್ಷೇತ್ರದಲ್ಲಿಜೆಡಿಎಸ್‌ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎರಡನೇ ಹಂತದ ಪ್ರಚಾರಕ್ಕಾಗಿ ಶನಿವಾರ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅವರಿಗೆ ಶಾಸಕರಾದ ಸಾ.ರಾ.ಮಹೇಶ್‌, ಎಂ.ಸಿ.ಮನಗೂಳಿ, ಎಂಎಲ್‌ಸಿ ಚೌಡರೆಡ್ಡಿ, ಬೋಜಗೌಡ ಸಾಥ್‌ ನೀಡಲಿದ್ದಾರೆ. ಎರಡು ಕ್ಷೇತ್ರಗಳ ಪೈಕಿ ಗೋಕಾಕವನ್ನು ಗೆದ್ದೇ ಗೆಲ್ಲಬೇಕೆಂದು ಜೆಡಿಎಸ್‌ ಹಠಕ್ಕೆ ಬಿದ್ದಂತೆ ಕಾಣುತ್ತಿದೆ.

ತಣ್ಣಗಾದ ಆರೋಪ- ಪ್ರತ್ಯಾರೋಪ:
ಉಪಚುನಾವಣೆಯ ಪ್ರಚಾರದ ಕೊನೆಯ ದಿನಗಳು ಸಮೀಪಿಸುತ್ತಿದ್ದಂತೆ ಜಾರಕಿಹೊಳಿ ಸಹೋದರರ ಆರೋಪ- ಪ್ರತ್ಯಾರೋಪ ತಣ್ಣಗಾಗಿದೆ. ಹೈ ವೋಲ್ಟೇಜ್‌ ಕ್ಷೇತ್ರ ಎನಿಸಿಕೊಂಡಿರುವ ಗೋಕಾಕದಲ್ಲಿಕಳೆದ ಹಲವು ದಿನಗಳಿಂದ ಜಾರಕಿಹೊಳಿ ಸಹೋದರರು ಏನಾದರೂ ಒಂದು ಆರೋಪ- ಪ್ರತ್ಯಾರೋಪದಲ್ಲಿತೊಡಗಿದ್ದರು. ಅದರಲ್ಲೂಶಾಸಕ ಸತೀಶ ಜಾರಕಿಹೊಳಿ ಟೀಕಾಸ್ತ್ರಗಳನ್ನು ಬಿಡುತ್ತಲೇ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ