ಆ್ಯಪ್ನಗರ

ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪ; ಖಾಸಗಿ ಕಂಪನಿ ವಿರುದ್ಧ ದೂರು ದಾಖಲು

ಬೆಳಗಾವಿ: ತಮಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ...

Vijaya Karnataka 6 Nov 2020, 5:00 am
ಬೆಳಗಾವಿ: ತಮಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂಪಾಯಿ ಪಡೆದು ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ ಹಲವು ಯುವಕರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
Vijaya Karnataka Web 5PRAMOD2_52
ನ್ಯಾಯಕ್ಕಾಗಿ ಪೊಲೀಸರ ಬಳಿ ಬಂದ ಯುವಕರು.


ಖಾಸಗಿ ಕಂಪನಿ ಹಣ ಪಡೆದು ಮೋಸ ಮಾಡಿದೆ ಎಂದು ಆರೋಪಿಸಿ ಯುವಕರು ನಗರದ ಎಪಿಎಂಸಿ ಠಾಣೆ ಎದುರು ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಬಳಿಕ ಡಿಸಿಪಿ ಅವರ ಬಳಿ ತೆರಳಿ ಅಳಲು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಮೂರು ದಿನಗಳ ಹಿಂದೆ ನಗರದ ಸೈಬರ್‌ ಕ್ರೆತ್ರೖಂ ವಿಭಾಗದಲ್ಲಿಪ್ರಕರಣ ದಾಖಲಾಗಿದೆ.

''ನಗರದ ಬಾಕೈ್ಸಟ್‌ ರಸ್ತೆಯಲ್ಲಿರುವ ಖಾಸಗಿ ಕಂಪನಿಗೆ ಸುಮಾರು 30 ಯುವಕರು ತಲಾ 26 ಸಾವಿರ ರೂ. ಹಣ ಪಾವತಿಸಿದ್ದಾರೆ. ಕಂಪನಿ ಕೆಲ ಸಾಮಾನುಗಳನ್ನು ಕೊಟ್ಟು, ಇನ್ನೊಂದಿಷ್ಟು ಯುವಕರನ್ನು ನೋಂದಣಿ ಮಾಡಿಸುವಂತೆ ಹೇಳುತ್ತಿದೆ. ಹಣ ಪಡೆದು ಮೋಸ ಮಾಡಿದೆ'' ಎಂದು ಯುವಕರು ಆರೋಪಿಸಿದ್ದಾರೆ.

ಖಾಸಗಿ ಕಂಪನಿಯೊಂದು ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದುಕೊಂಡು ಮೋಸ ಮಾಡಿದೆ ಎಂದು ಕೆಲ ಯುವಕರು ಮೂರು ದಿನಗಳ ಹಿಂದೆ ದೂರು ಹೇಳಿಕೊಂಡು ಬಂದಿದ್ದರು. ಈ ಸಂಬಂಧ ಸೈಬರ್‌ ಕ್ರೆತ್ರೖಂ ವಿಭಾಗದಲ್ಲಿಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಕ್ರಮ್‌ ಆಮ್ಟೆ, ಡಿಸಿಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ