ಆ್ಯಪ್ನಗರ

ಪಿಎಗಳ ರಾಜಕಾರಣ ಆರೋಪ ಸತ್ಯಕ್ಕೆ ದೂರ

ಮತಕ್ಷೇತ್ರದಲ್ಲಿ ಪಿಎಗಳು ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಅವರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಯೂಥ್‌ ಕಾಂಗ್ರೆಸ್‌ ಅಧ್ಯಕ್ಷ ಕಿರಣಸಿಂಗ ...

Vijaya Karnataka 22 Jan 2019, 5:00 am
ಯಮಕನಮರಡಿ: ಮತಕ್ಷೇತ್ರದಲ್ಲಿ ಪಿಎಗಳು ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಅವರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಯೂಥ್‌ ಕಾಂಗ್ರೆಸ್‌ ಅಧ್ಯಕ್ಷ ಕಿರಣಸಿಂಗ ರಜಪೂತ ಹೇಳಿದರು.
Vijaya Karnataka Web BEL-21YMD1


ಇಲ್ಲಿನ ಕಾಂಗ್ರೆಸ್‌ ಕಾರಾರ‍ಯಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಚೆಗೆ ಗೋಟುರ ಗ್ರಾಮದಲ್ಲಿ 2.50 ಕೋಟಿ ರೂ. ವೆಚ್ಚದ 3 ಕಿಮೀ ರಸ್ತೆ ಅಗಲೀಕರಣ ಕಾಮಗಾರಿಗೆ ತಾಪಂ ಸದಸ್ಯ ನಿಂಗನಗೌಡ ಪಾಟೀಲ ಚಾಲನೆ ನೀಡಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಪ್ರಕಾಶ ಬಸ್ಸಾಪುರಿ ಅವರು ಕೂಡ ಗುದ್ದಲಿ ಪೂಜೆ ಮಾಡಿದ್ದನ್ನು ಮಾರುತಿ ಅಷ್ಟಗಿ ತಪ್ಪಾಗಿ ಗ್ರಹಿಸಿಕೊಂಡು ಕ್ಷೇತ್ರದಲ್ಲಿ ಶಾಸಕರ ಗೈರು ಹಾಜರಿಯಲ್ಲಿ ಪಿಎಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ತಮ್ಮ ಪ್ರಚಾರಕ್ಕೋಸ್ಕರ ಆರೋಪ ಮಾಡಿದ್ದಾರೆ. ಪ್ರಕಾಶ ಬಸ್ಸಾಪುರಿ ಪಿಎ ಅಲ್ಲ, ಅವರು ಶಾಸಕರು ಮತ್ತು ಜನರ ನಡುವೆ ಕೊಂಡಿಯಾಗಿ ಕಾರ್ಯ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಯಮಕನಮರಡಿ ಬ್ಲಾಕ್‌ ಅಧ್ಯಕ್ಷ ವೀರಣ್ಣ ಬಿಸಿರೊಟ್ಟಿ, ಹುಕ್ಕೇರಿ ತಾಪಂ ಅಧ್ಯಕ್ಷ ದಸ್ತಗೀರ ಬಸಾಪುರಿ, ಗೋಟುರ ತಾಪಂ ಸದಸ್ಯ ನಿಂಗನಗೌಡ ಪಾಟೀಲ, ಹಣಮಂತ ಶೇಖನವರ, ಶಿವು ಕೋಳಿ, ಕಲಗೌಡಾ ಕಮತೆ, ರವೀಂದ್ರ ಮಾಸೆವಾಡಿ, ಗುರುನಾಥ ಶಿಂಧೆ, ವಿನಯ ಕೋಳಿ, ಯಲ್ಲಗೌಡಾ ಕಮತೆ ದುಂಡಪ್ಪಾ ಕಮತೆ, ನಾನಾ ಶೇಖನವರ, ಶಿವಶಂಕರ ಝುಟ್ಟಿ, ಗುಲಾಬಸಿಂಗ ರಜಪೂತ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ