ಪಣಜಿ: ಕತ್ತಿ ಹಿಡಿದು ಬಹಿರಂಗವಾಗಿ ಓಡಾಡುತ್ತ ಜನರಲ್ಲಿ ಆತಂಕ ಮೂಡಿಸುತ್ತಿದ್ದ ಮೋಸ್ಟ್ ವಾಂಟೆಡ್ ಆರೋಪಿಯನ್ನು ಮಂಗಳವಾರ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅನ್ವರ್ ಶೇಖ್ ಬಂಧಿತ ಆರೋಪಿ.
ಗೋವಾದ ಕೆಫೆಯಲ್ಲಿಯುವತಿಯೋರ್ವಳನ್ನು ಅಪಹರಿಸಿ ಧಾರವಾಡದಲ್ಲಿಕೂಡಿಟ್ಟು ಆಕೆಯ ಮೇಲೆ ಮೂರು ತಿಂಗಳು ಸತತ ಲೈಂಗಿಕ ಶೋಷಣೆ ನಡೆಸಿದ ಆರೋಪ ಅನ್ವರ್ ಮೇಲಿದ್ದು, ಈ ಪ್ರಕರಣದಲ್ಲಿಈಗಾಗಲೇ ಈತನ ಮೂವರು ಸಹಚರರನ್ನು ಗೋವಾ ಪೋಲಿಸರು ಬಂಧಿಸಿದ್ದಾರೆ.
ಆರೋಪಿ ಅನ್ವರ್ ಧಾರವಾಡದಲ್ಲಿಅಡಗಿ ಕುಳಿತಿರುವ ಮಾಹಿತಿ ಗೋವಾ ಪೊಲೀಸರಿಗೆ ಲಭ್ಯವಾದ ಹಿನ್ನೆಲೆಯಲ್ಲಿಸೋಮವಾರ ಗೋವಾ ಪೊಲೀಸರು ಧಾರವಾಡಕ್ಕೆ ತೆರಳಿದ್ದರು. ಆದರೆ, ಆರೋಪಿ ಧಾರವಾಡದಿಂದ ಸವದತ್ತಿಗೆ ಪಲಾಯನಗೈದಿರುವ ಮಾಹಿತಿ ಲಭ್ಯವಾಯಿತು. ಸವದತ್ತಿಯಲ್ಲಿಗೋವಾ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಹೋಟೆಲ್ವೊಂದರಲ್ಲಿತಂಗಿರುವುದು ಖಚಿತವಾಗಿದೆ. ಗೋವಾ ಪೊಲೀಸರು ಕರ್ನಾಟಕ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಅನ್ವರ್ ಮೇಲೆ ಕೊಲೆ, ಅಪಹರಣ, ಹಲ್ಲೆಸೇರಿದಂತೆ 26 ಅಪರಾಧ ಪ್ರಕರಣಗಳಿವೆ. ಈತನ ಸಹಚರರಾದ ಶಿವದತ್ತ ತಲ್ವಾರ್, ತುಳಸೀದಾಸ್ ನಾಯ್ಕ, ರಾಜೇಂದ್ರ ದೇವರ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಗೋವಾ ಪೊಲೀಸ್ ಅಧೀಕ್ಷಕ ಅರವಿಂದ ಗಾವಸ್ ತಿಳಿಸಿದ್ದಾರೆ.
ಗೋವಾದ ಕೆಫೆಯಲ್ಲಿಯುವತಿಯೋರ್ವಳನ್ನು ಅಪಹರಿಸಿ ಧಾರವಾಡದಲ್ಲಿಕೂಡಿಟ್ಟು ಆಕೆಯ ಮೇಲೆ ಮೂರು ತಿಂಗಳು ಸತತ ಲೈಂಗಿಕ ಶೋಷಣೆ ನಡೆಸಿದ ಆರೋಪ ಅನ್ವರ್ ಮೇಲಿದ್ದು, ಈ ಪ್ರಕರಣದಲ್ಲಿಈಗಾಗಲೇ ಈತನ ಮೂವರು ಸಹಚರರನ್ನು ಗೋವಾ ಪೋಲಿಸರು ಬಂಧಿಸಿದ್ದಾರೆ.
ಆರೋಪಿ ಅನ್ವರ್ ಧಾರವಾಡದಲ್ಲಿಅಡಗಿ ಕುಳಿತಿರುವ ಮಾಹಿತಿ ಗೋವಾ ಪೊಲೀಸರಿಗೆ ಲಭ್ಯವಾದ ಹಿನ್ನೆಲೆಯಲ್ಲಿಸೋಮವಾರ ಗೋವಾ ಪೊಲೀಸರು ಧಾರವಾಡಕ್ಕೆ ತೆರಳಿದ್ದರು. ಆದರೆ, ಆರೋಪಿ ಧಾರವಾಡದಿಂದ ಸವದತ್ತಿಗೆ ಪಲಾಯನಗೈದಿರುವ ಮಾಹಿತಿ ಲಭ್ಯವಾಯಿತು. ಸವದತ್ತಿಯಲ್ಲಿಗೋವಾ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಹೋಟೆಲ್ವೊಂದರಲ್ಲಿತಂಗಿರುವುದು ಖಚಿತವಾಗಿದೆ. ಗೋವಾ ಪೊಲೀಸರು ಕರ್ನಾಟಕ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಅನ್ವರ್ ಮೇಲೆ ಕೊಲೆ, ಅಪಹರಣ, ಹಲ್ಲೆಸೇರಿದಂತೆ 26 ಅಪರಾಧ ಪ್ರಕರಣಗಳಿವೆ. ಈತನ ಸಹಚರರಾದ ಶಿವದತ್ತ ತಲ್ವಾರ್, ತುಳಸೀದಾಸ್ ನಾಯ್ಕ, ರಾಜೇಂದ್ರ ದೇವರ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಗೋವಾ ಪೊಲೀಸ್ ಅಧೀಕ್ಷಕ ಅರವಿಂದ ಗಾವಸ್ ತಿಳಿಸಿದ್ದಾರೆ.