ಆ್ಯಪ್ನಗರ

ಮಾವಿನ ಫಸಲು ಸಾಗಣೆಗೆ ಅನುಮತಿ ನೀಡಿ

ಕಕ್ಕೇರಿ: ಬೆಳೆದು ನಿಂತಿರುವ ಮಾವಿನ ಫಸಲು ಕೊಯ್ದು ಬೇರೆ ...

Vijaya Karnataka 29 Apr 2020, 5:00 am
ಕಕ್ಕೇರಿ: ಬೆಳೆದು ನಿಂತಿರುವ ಮಾವಿನ ಫಸಲು ಕೊಯ್ದು ಬೇರೆ ಜಿಲ್ಲೆಯ ಮಾರುಕಟ್ಟೆಗೆ ಸಾಗಿಸಲು ಪರವಾನಗಿ ನೀಡಬೇಕೆಂದು ಒತ್ತಾಯಿಸಿ ರೈತರು ಮತ್ತು ವ್ಯಾಪಾರಸ್ಥರು ಖಾನಾಪುರ ತಹಸೀಲ್ದಾರ ರೇಶ್ಮಾ ತಾಳಿಕೋಟಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web 28KAKKERI1074815
ಖಾನಾಪುರ ತಹಸೀಲ್ದಾರರಿಗೆ ಮನವಿ ಸಲ್ಲಿಸುತ್ತಿರುವ ಮಾವಿನ ವ್ಯಾಪಾರಿಗಳು.


ಈ ವೇಳೆ ಮಾತನಾಡಿದ ಮಾರುತಿ ಹರಿಜನ, ಖಾನಾಪುರ ತಾಲೂಕಿನ ಲಿಂಗನಮಠ, ಗುಂಡೋಳ್ಳಿ, ಕಕ್ಕೇರಿ ಮತ್ತು ಚುಂಚವಾಡ ಗ್ರಾಮಗಳ 100ಕ್ಕೂ ಅಧಿಕ ವ್ಯಾಪಾರಸ್ಥರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮಾವಿನ ತೋಟಗಳ ಜತೆಗೆ ಪಕ್ಕದ ಧಾರವಾಡ ಜಿಲ್ಲೆಯ ಅಳ್ನಾವರ, ಕಲಘಟಗಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಹಳಿಯಾಳ ತಾಲೂಕಿನ ವ್ಯಾಪ್ತಿಯ ಮಾವಿನ ಫಸಲು ಖರೀದಿಸಲು ಮುಂಗಡ ಹಣ ನೀಡಿ ಗುತ್ತಿಗೆ ಪಡೆದ್ದಿದೇವೆ. ಈಗ ಮಾವಿನ ಕಾಯಿ ಕಟಾವಿಗೆ ಬಂದಿದೆ. ಹೀಗಾಗಿ ಮಾವಿನ ಕಾಯಿ ಕೊಯ್ಲುಮಾಡಲು ಮತ್ತು ಬೆಳಗಾವಿ ಮತ್ತು ಧಾರವಾಡ ಮಾರುಕಟ್ಟೆಗೆ ಸಾಗಿಸಲು ಪರವಾನಗಿ ನೀಡಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿವ್ಯಾಪಾರಸ್ಥರಾದ ಹನುಮಂತ ಹಟ್ಟಿಹೊಳಿ, ಅಬ್ದುಲ್‌ ಗಫಾರ ಕಟ್ಟಿಮನಿ, ಮೆಹಬೂಬಸಾಬ ಲಂಗೋಟಿ, ಶಾಹಿರ ಹಟ್ಟಿಹೊಳಿ, ಹನುಮಂತ ಮಾದರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ