ಆ್ಯಪ್ನಗರ

ಅನಂತ್‌ಕುಮಾರ ಹೆಗಡೆ ಹಿಂದೂ ಧರ್ಮಕ್ಕೆ ಕ್ಯಾನ್ಸರ್‌ ಇದ್ದಂತೆ: ಅಸ್ನೋಟಿಕರ್‌

ಕೇಂದ್ರ ಸಚಿವ ಅನಂತ್‌ಕುಮಾರ ಹೆಗಡೆ ಹಿಂದೂ ಧರ್ಮಕ್ಕೆ ಕ್ಯಾನ್ಸರ್‌ ಕಾಯಿಲೆ ಇದ್ದಂತೆ. ಆತ ಹಿಂದೂ ಯುವಕರ ದಾರಿ ತಪ್ಪಿಸುವ ವ್ಯಕ್ತಿ ಎಂದು

Vijaya Karnataka 21 Mar 2019, 5:00 am
ಚನ್ನಮ್ಮನ ಕಿತ್ತೂರು: ಕೇಂದ್ರ ಸಚಿವ ಅನಂತ್‌ಕುಮಾರ ಹೆಗಡೆ ಹಿಂದೂ ಧರ್ಮಕ್ಕೆ ಕ್ಯಾನ್ಸರ್‌ ಕಾಯಿಲೆ ಇದ್ದಂತೆ. ಆತ ಹಿಂದೂ ಯುವಕರ ದಾರಿ ತಪ್ಪಿಸುವ ವ್ಯಕ್ತಿ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಟೀಕಿಸಿದರು.
Vijaya Karnataka Web BEL-20 KITTUR NEWS 1


ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಜತೆ ಚುನಾವಣಾ ಸಿದ್ಧತೆ ಕುರಿತು ಚರ್ಚೆ ನಡೆಸಿ, ಜಿಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಅವರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು. ''ಜಿಲ್ಲೆಯಲ್ಲಿ ನಡೆಯುವ ಯಾವುದೇ ಸಭೆಯಲ್ಲೂ ಕಿತ್ತೂರು-ಖಾನಾಪುರ ಕ್ಷೇತ್ರದ ಪ್ರತಿನಿಧಿಯಾಗಿ ಸಂಸದರು ಭಾಗವಹಿಸಿರುವ ಉದಾಹರಣೆ ಇಲ್ಲ. ಕ್ಷೇತ್ರದ ಅಭಿವೃದ್ಧಿ ಬದಿಗೊತ್ತಿ ಕೇವಲ ಪ್ರಚೋದನಕಾರಿ ಭಾಷಣಕ್ಕೆ ಸೀಮಿತವಾಗಿ ಯುವ ಸಮೂಹವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ'', ಎಂದು ಹರಿಹಾಯ್ದರು.

ಇದಕ್ಕೂ ಮೊದಲು ಮಾಜಿ ಶಾಸಕ ಸುರೇಶ ಮಾರಿಹಾಳ ಅವರನ್ನು ಆನಂದ ಅಸ್ನೋಟಿಕರ್‌ ಭೇಟಿ ಮಾಡಿ ಪಕ್ಷ ಸಂಘಟನೆ ಕುರಿತು ಚರ್ಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ