ಆ್ಯಪ್ನಗರ

ಅಂಗನವಾಡಿ ಪದಾರ್ಥ ಮಾರಾಟ

ದೊಡವಾಡ: ಅಂಗನವಾಡಿಯ ಆಹಾರ ಸಾಮಗ್ರಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯ ಶಾಂತಿ ನಗರದ ಪ್ರಾಥಮಿಕ ಆರೋಗ್ಯ ...

Vijaya Karnataka 4 May 2019, 5:00 am
ದೊಡವಾಡ : ಅಂಗನವಾಡಿಯ ಆಹಾರ ಸಾಮಗ್ರಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯ ಶಾಂತಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ಇರುವ ಅಂಗನವಾಡಿ ಕಾರ್ಯಕರ್ತೆಯನ್ನು ಶುಕ್ರವಾರ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
Vijaya Karnataka Web BEL-3 DWDP 4


ಸಾರ್ವಜನಿಕರೊಬ್ಬರಿಗೆ ಮಾರಾಟ ಮಾಡಿದ ಬೆಲ್ಲದ ಪೆಂಟೆಯನ್ನು ಕಾರ್ಯಕರ್ತೆ ರೇಣುಕಾ ರಡ್ಡೇರ್‌ ಬಾಲಕಿಯ ತಲೆ ಮೇಲೆ ಹೊರಿಸಿ ಕಳಿಸಿದ್ದಳು. ಸಾರ್ವಜನಿಕರು ಬಾಲಕಿಯನ್ನು ತಡೆದು ವಿಚಾರಿಸಿದಾಗ ಬೆಲ್ಲ ಮಾರಾಟ ಮಾಡಿರುವ ವಿಷಯ ಬಯಲಾಯಿತು.

ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಅಂಗನವಾಡಿಗೆ ಆಗಮಿಸಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಕಾರ್ಯಕರ್ತ ತಪ್ಪೊಪ್ಪಿಕೊಂಡಳು. ಕ್ರಮಕ್ಕೆ ಒತ್ತಾಯ: ಅಂಗನವಾಡಿಯ ಆಹಾರ ಮಾರಾಟ ಮಾಡಿದ ಕಾರ್ಯಕರ್ತೆ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಅಂಗನವಾಡಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಮಾಜಿ ಯೋಧ ಈರಪ್ಪ ಹತ್ತಿಕಟಗಿ, ಮಲ್ಲಿಕಾರ್ಜುನ ಸಂಗೊಳ್ಳಿ, ಗದಿಗೆಪ್ಪ ಶಿವಧೂತನವರ, ಮಹಾಂತೇಶ ಚಂದರಗಿ, ಗ್ರಾಪಂ ಸದಸ್ಯ ವಿಠ್ಠಲ ಗಾಬಿ, ಮಂಜುನಾಥ ಮಾಡಲಗಿ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ