ಸಂತೋಷ ಗಿರಿ ಬಾವನಸೌಂದತ್ತಿ
ಮಳೆಯಿಂದ ಕುಸಿದ ಅಂಗನವಾಡಿ ಗೋಡೆ, ಗಾಳಿಗೆ ಹಾರಿ ಹೋದ ಚಾವಣಿ... ಹನುಮ ಮಂದಿರದ ಆವರಣದಲ್ಲಿಮಕ್ಕಳಿಗೆ ಪಾಠ...
ಇದು ರಾಯಬಾಗ ತಾಲೂಕು ಬಾವನಸೌಂದತ್ತಿ ಗ್ರಾಮದ ಅಂಗನವಾಡಿ ಕೇಂದ್ರಗಳ ದುಸ್ಥಿತಿ.
ಗಾಳಿ- ಅತಿವೃಷ್ಟಿಗೆ ಅಂಗನವಾಡಿ ನಂ.1ರ ಚಾವಣಿಯ ಹಂಚುಗಳೆಲ್ಲಹಾರಿ ಹೋಗಿವೆ. ಹಂಚು ಹಾರಿ ಹೋಗಿದ್ದರಿಂದ ಅಂಗನವಾಡಿಯ ಒಳಗೆ ನೀರು ಬಿದ್ದು ಸಾಮಗ್ರಿಗಳೆಲ್ಲಹಾಳಾಗಿವೆ. ಇಂಥ ಅಂಗನವಾಡಿಗೆ ಪಾಲಕರು ತಮ್ಮ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂಗನವಾಡಿ ದುಸ್ಥಿತಿಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ ದುರಸ್ತಿ ಮಾಡುವಂತೆ ಕೋರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎರಡು ತಿಂಗಳಾದರೂ ದುರಸ್ತಿಯಾಗದೇ ಇರುವುದರಿಂದ ಮಕ್ಕಳಿಗೆ ಪಾಠ ಮಾಡಲು ತೊಂದರೆಯಾಗಿದೆ.
ಚಾವಣಿ ಹಾರಿ ಹೋದ ಅಂಗನವಾಡಿ ಕೇಂದ್ರ ನಂ.1ರಲ್ಲಿ50ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಂಗನವಾಡಿ ನಂ.9ರ ಗೋಡೆ ಮಳೆಯಿಂದ ಕುಸಿದಿದ್ದು, ಅಲ್ಲಿಯೂ ಪಾಠ ಮಾಡಲು ಆಗುತ್ತಿಲ್ಲ. ಈ ಎರಡೂ ಅಂಗನವಾಡಿಗಳಲ್ಲಿಪಾಠ ಮಾಡಲು ಸಾಧ್ಯವಾಗದೇ ಇರುವುದರಿಂದ ಗ್ರಾಮದಲ್ಲಿಇರುವ ಇನ್ನೊಂದು ಅಂಗನವಾಡಿ ನಂ.8ರಲ್ಲಿಪಾಠ ಮಾಡೋಣವೆಂದರೆ ಅಲ್ಲಿಎಲ್ಲಮಕ್ಕಳು ಕುಳಿತುಕೊಳ್ಳುವಷ್ಟು ಜಾಗವಿಲ್ಲ. ಹೀಗಾಗಿ ಎಲ್ಲಮಕ್ಕಳನ್ನು ಹನುಮ ದೇವಸ್ಥಾನದ ಆವರಣದಲ್ಲಿನೆಲದ ಮೇಲೆ ಕೂರಿಸಿ ಪಾಠ ಮಾಡಲಾಗುತ್ತಿದೆ.
ಅಂಗನವಾಡಿ ಕಟ್ಟಡ ಸಂಪೂರ್ಣ ಹಾಳಾಗಿರುವ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ರಾಯಬಾಗದ ಸಿಡಿಪಿಒ ಅವರ ಗಮನಕ್ಕೆ ತರಲಾಗಿದೆ. ಆದರೆ, ಇನ್ನೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
-ವೈಜಯಂತಿ, ಅಂಗನವಾಡಿ ಸಹಾಯಕಿ
ಅಂಗನವಾಡಿ ಮಕ್ಕಳಿಗೆ ತೊಂದರೆ ಆಗುತ್ತಿರುವ ಕುರಿತು ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಬಾವನಸೌಂದತ್ತಿ ಗ್ರಾಮದಲ್ಲಿಬಾಡಿಗೆ ಮನೆಯೂ ಸಿಗುತ್ತಿಲ್ಲ. ಅಂಗನವಾಡಿ ಕೇಂದ್ರ ದುರಸ್ತಿಯಾಗುವವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
- ಸಂತೋಷ ಕಾಂಬಳೆ, ಸಿಡಿಪಿಒ ರಾಯಬಾಗ
ಅಂಗನವಾಡಿ ಕೇಂದ್ರದ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಯಾರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಪಂಚಾಯಿತಿ ವತಿಯಿಂದಲೇ 14ನೇ ಹಣಕಾಸು ಯೋಜನೆ ಅಡಿ ದುರಸ್ತಿಗೆ ಪ್ರಸ್ತಾವ ಸಿದ್ಧಪಡಿಸಲಾಗಿದೆ.
- ಅಜೀತ ಖೆಮಲಾಪುರೆ, ಗ್ರಾಪಂ ಅಧ್ಯಕ್ಷ, ಬಾವನ ಸೌಂದತ್ತಿ
ಮಳೆಯಿಂದ ಕುಸಿದ ಅಂಗನವಾಡಿ ಗೋಡೆ, ಗಾಳಿಗೆ ಹಾರಿ ಹೋದ ಚಾವಣಿ... ಹನುಮ ಮಂದಿರದ ಆವರಣದಲ್ಲಿಮಕ್ಕಳಿಗೆ ಪಾಠ...
ಇದು ರಾಯಬಾಗ ತಾಲೂಕು ಬಾವನಸೌಂದತ್ತಿ ಗ್ರಾಮದ ಅಂಗನವಾಡಿ ಕೇಂದ್ರಗಳ ದುಸ್ಥಿತಿ.
ಗಾಳಿ- ಅತಿವೃಷ್ಟಿಗೆ ಅಂಗನವಾಡಿ ನಂ.1ರ ಚಾವಣಿಯ ಹಂಚುಗಳೆಲ್ಲಹಾರಿ ಹೋಗಿವೆ. ಹಂಚು ಹಾರಿ ಹೋಗಿದ್ದರಿಂದ ಅಂಗನವಾಡಿಯ ಒಳಗೆ ನೀರು ಬಿದ್ದು ಸಾಮಗ್ರಿಗಳೆಲ್ಲಹಾಳಾಗಿವೆ. ಇಂಥ ಅಂಗನವಾಡಿಗೆ ಪಾಲಕರು ತಮ್ಮ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂಗನವಾಡಿ ದುಸ್ಥಿತಿಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ ದುರಸ್ತಿ ಮಾಡುವಂತೆ ಕೋರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎರಡು ತಿಂಗಳಾದರೂ ದುರಸ್ತಿಯಾಗದೇ ಇರುವುದರಿಂದ ಮಕ್ಕಳಿಗೆ ಪಾಠ ಮಾಡಲು ತೊಂದರೆಯಾಗಿದೆ.
ಚಾವಣಿ ಹಾರಿ ಹೋದ ಅಂಗನವಾಡಿ ಕೇಂದ್ರ ನಂ.1ರಲ್ಲಿ50ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಂಗನವಾಡಿ ನಂ.9ರ ಗೋಡೆ ಮಳೆಯಿಂದ ಕುಸಿದಿದ್ದು, ಅಲ್ಲಿಯೂ ಪಾಠ ಮಾಡಲು ಆಗುತ್ತಿಲ್ಲ. ಈ ಎರಡೂ ಅಂಗನವಾಡಿಗಳಲ್ಲಿಪಾಠ ಮಾಡಲು ಸಾಧ್ಯವಾಗದೇ ಇರುವುದರಿಂದ ಗ್ರಾಮದಲ್ಲಿಇರುವ ಇನ್ನೊಂದು ಅಂಗನವಾಡಿ ನಂ.8ರಲ್ಲಿಪಾಠ ಮಾಡೋಣವೆಂದರೆ ಅಲ್ಲಿಎಲ್ಲಮಕ್ಕಳು ಕುಳಿತುಕೊಳ್ಳುವಷ್ಟು ಜಾಗವಿಲ್ಲ. ಹೀಗಾಗಿ ಎಲ್ಲಮಕ್ಕಳನ್ನು ಹನುಮ ದೇವಸ್ಥಾನದ ಆವರಣದಲ್ಲಿನೆಲದ ಮೇಲೆ ಕೂರಿಸಿ ಪಾಠ ಮಾಡಲಾಗುತ್ತಿದೆ.
ಅಂಗನವಾಡಿ ಕಟ್ಟಡ ಸಂಪೂರ್ಣ ಹಾಳಾಗಿರುವ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ರಾಯಬಾಗದ ಸಿಡಿಪಿಒ ಅವರ ಗಮನಕ್ಕೆ ತರಲಾಗಿದೆ. ಆದರೆ, ಇನ್ನೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
-ವೈಜಯಂತಿ, ಅಂಗನವಾಡಿ ಸಹಾಯಕಿ
ಅಂಗನವಾಡಿ ಮಕ್ಕಳಿಗೆ ತೊಂದರೆ ಆಗುತ್ತಿರುವ ಕುರಿತು ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಬಾವನಸೌಂದತ್ತಿ ಗ್ರಾಮದಲ್ಲಿಬಾಡಿಗೆ ಮನೆಯೂ ಸಿಗುತ್ತಿಲ್ಲ. ಅಂಗನವಾಡಿ ಕೇಂದ್ರ ದುರಸ್ತಿಯಾಗುವವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
- ಸಂತೋಷ ಕಾಂಬಳೆ, ಸಿಡಿಪಿಒ ರಾಯಬಾಗ
ಅಂಗನವಾಡಿ ಕೇಂದ್ರದ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಯಾರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಪಂಚಾಯಿತಿ ವತಿಯಿಂದಲೇ 14ನೇ ಹಣಕಾಸು ಯೋಜನೆ ಅಡಿ ದುರಸ್ತಿಗೆ ಪ್ರಸ್ತಾವ ಸಿದ್ಧಪಡಿಸಲಾಗಿದೆ.
- ಅಜೀತ ಖೆಮಲಾಪುರೆ, ಗ್ರಾಪಂ ಅಧ್ಯಕ್ಷ, ಬಾವನ ಸೌಂದತ್ತಿ