ಆ್ಯಪ್ನಗರ

ಪ್ರಾಣಿ ಹತ್ಯೆ ಆರೋಪಿಗಳ ಬಂಧನ

ಚನ್ನಮ್ಮನ ಕಿತ್ತೂರು : ಸಮೀಪದ ಹೊನ್ನಾಪುರ ಗ್ರಾಮದ ಅರಣ್ಯ ಪ್ರದೇಶದ ಹತ್ತಿರ ಸಿಡಿಮದ್ದು ಸಿಡಿಸಿ ಕಾಡುಹಂದಿಯನ್ನು ಕೊಂದು ಸಾಗಿಸುತ್ತಿದ್ದ ಆರೋಪಿಗಳನ್ನು ...

Vijaya Karnataka 30 Jan 2019, 5:00 am
ಚನ್ನಮ್ಮನ ಕಿತ್ತೂರು : ಸಮೀಪದ ಹೊನ್ನಾಪುರ ಗ್ರಾಮದ ಅರಣ್ಯ ಪ್ರದೇಶದ ಹತ್ತಿರ ಸಿಡಿಮದ್ದು ಸಿಡಿಸಿ ಕಾಡುಹಂದಿಯನ್ನು ಕೊಂದು ಸಾಗಿಸುತ್ತಿದ್ದ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web BEL-29 KITTUR PHOTO 1


ಹೊನ್ನಾಪುರ ಗ್ರಾಮದ ನಾಗಪ್ಪ ಗಂಗಪ್ಪ ಅಂಗಡಿ ಹಾಗೂ ಕರೆಪ್ಪ ಮಹಾದೇವ ಮರಕುಂಬಿ ಬಂಧಿತರು. ಇವರು ಸತ್ತ ಹಂದಿ ಜತೆ ಜೀವಂತ ಆಮೆಯನ್ನೂ ಸಾಗಿಸುತ್ತಿದ್ದರು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಎಚ್‌.ಎನ್‌. ಪಾತ್ರೋಟ ಹಾಗೂ ಗೋಲಿಹಳ್ಳಿ ವಲಯ ಅರಣ್ಯಾಧಿಕಾರಿ ರತ್ನಾಕರ ಓಬಣ್ಣವರ ಮಾರ್ಗದರ್ಶನದಲ್ಲಿ ಕಿತ್ತೂರು ಉಪವಲಯ ಅರಣ್ಯಾಧಿಕಾರಿ ಎಚ್‌. ಲೋಹಿತ್‌ ಕಾರಾರ‍ಯಚರಣೆ ನಡೆಸಿದ್ದರು. ಅರಣ್ಯ ರಕ್ಷ ಕರಾದ ರಾಜು ಹುಬ್ಬಳ್ಳಿ, ಗಿರೀಶ ಮೆಕ್ಕೆದ ಹಾಗೂ ಸಿಬ್ಬಂದಿ ಕಾರಾರ‍ಯಚರಣೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ