ಆ್ಯಪ್ನಗರ

ನೆರೆ ಸಂತ್ರಸ್ತರ ಅನ್ನಭಾಗ್ಯಕ್ಕೆ ಕನ್ನ

ಮೂಡಲಗಿ (ಬೆಳಗಾವಿ): ನೆರೆ ಸಂತ್ರಸ್ತರಿಗೆ ಹಂಚಿಕೆಯಾಗಬೇಕಿದ್ದ ಅನ್ನಭಾಗ್ಯ ...

Vijaya Karnataka 7 Oct 2019, 5:00 am
ಮೂಡಲಗಿ (ಬೆಳಗಾವಿ): ನೆರೆ ಸಂತ್ರಸ್ತರಿಗೆ ಹಂಚಿಕೆಯಾಗಬೇಕಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ಇಬ್ಬರನ್ನು ಪಟ್ಟಣದಲ್ಲಿಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web 6MDL3_53


ಉತ್ತರಪ್ರದೇಶದ ಪೀಪಲಗಾಂವ್‌ ನಿವಾಸಿ ಮಹ್ಮದ ಅಸ್ಸದ್‌ ಮತಲೂಬ್‌ ಅಹ್ಮದ (23) ಹಾಗೂ ಮಹ್ಮದ ಸಬಾನ್‌ ಬುದ್ದಾನ್‌(20) ಬಂಧಿತರು. ಇವರಿಂದ 10.50 ಲಕ್ಷ ರೂ. ಮೌಲ್ಯದ 300 ಕ್ವಿಂಟಾಲ್‌ ಅಕ್ಕಿ ಹಾಗೂ 12 ಲಕ್ಷ ರೂ. ಮೌಲ್ಯದ ಲಾರಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಾರ್ವಜನಿಕರೊಬ್ಬರು ನೀಡಿದ ಮಾಹಿತಿ ಆಧರಿಸಿ ಅ.2ರಂದು ರಾತ್ರಿ ಶಿರಸ್ತೇದಾರ್‌ ರಾಜು ಶಿವಬಸು ಕಡಕೋಳ, ಮಹ್ಮದರಫೀಕ ಅಬ್ದುಲ್‌ ರೆಹಮಾನ್‌ ಚೌಧರಿ, ಗೋಕಾಕ ತಾಲೂಕಿನ ಆಹಾರ ನಿರೀಕ್ಷಕ ಮಾಜೀದ್‌ ನಿಜಾಮುದ್ದೀನ್‌ ಉಸ್ತಾದ್‌ ಹಾಗೂ ದ್ವಿತೀಯ ದರ್ಜೆ ಸಹಾಯಕ ಸುನಿಲ್‌ ರಾಮಚಂದ್ರ ದೇಸಾಯಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮೂಡಲಗಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ