ಪ್ರಮೋದ ಹರಿಕಾಂತ ಬೆಳಗಾವಿ
ನಗರದ ಸುಂದರ ತಾಣಗಳಲ್ಲೊಂದಾದ ಕೋಟೆ ಕೆರೆಯಿಂದ ವಾರ್ಷಿಕ 5 ರಿಂದ 6 ಲಕ್ಷ ರೂ. ಆದಾಯ ಪಡೆಯುತ್ತಿರುವ ಜಿಲ್ಲಾಡಳಿತ, ಕೆರೆ ಆವರಣದ ಸುತ್ತಲೂ ಗೋಡೆ ಕಟ್ಟುವ ಉದ್ದೇಶದಿಂದ ಪ್ರವೇಶ ಶುಲ್ಕ ಆಕರಿಸುತ್ತಿರುವುದು ಚರ್ಚೆಗೆ ಗ್ರಾಸವೊದಗಿಸಿದೆ.
ಕೋಟೆ ಕೆರೆ ಆವರಣದಲ್ಲಿರುವ ಬೋಟಿಂಗ್ (ದೋಣಿ ವಿಹಾರ), ಮಕ್ಕಳ ಆಟಿಕೆ ಯಂತ್ರಗಳಿಂದಲೇ ಜಿಲ್ಲಾಡಳಿತಕ್ಕೆ ತಿಂಗಳಿಗೆ ಸುಮಾರು 40 ಸಾವಿರ ರೂ.ನಂತೆ ವರ್ಷಕ್ಕೆ 4ರಿಂದ 5 ಲಕ್ಷ ರೂ. ಬಾಡಿಗೆ ಪಾವತಿಯಾಗುತ್ತಿದೆ. ಇದರ ಜತೆಗೆ ಉದ್ಯಾನದ ಒಳಗಿನ ಅಂಗಡಿಗಳಿಂದಲೂ ಬಾಡಿಗೆ ಸಂಗ್ರಹವಾಗುತ್ತಿವೆ.
ಕೋಟೆ ಕೆರೆಯಲ್ಲಿ 2006ರಿಂದಲೂ ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ ಕೊಡಲಾಗುತ್ತಿದೆ. ಪ್ರತೀ ವರ್ಷ ಮಳಿಗೆ ಬಾಡಿಗೆಯನ್ನು ಹೆಚ್ಚಿಸಲಾಗುತ್ತಿದ್ದು ಸದ್ಯ ಬೋಟಿಂಗ್ ಮತ್ತು ಆಟಿಕೆ ಯಂತ್ರದ ಬಳಕೆಯ ಬಾಡಿಗೆ ತಿಂಗಳಿಗೆ 40 ಸಾವಿರ ರೂ. ತಲುಪಿದೆ. ಈ ಪ್ರಕಾರ ಕಳೆದ 13 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಕೋಟೆ ಕೆರೆಯಿಂದ ನಿರಂತರ ಆದಾಯ ಸಂದಾಯವಾಗುತ್ತಿದೆ. ಒಟ್ಟಾರೆ ಹಣ ಅರ್ಧ ಕೋಟಿ ರೂ. ಮೀರಲಿದೆ. ಆದರೆ, ಆ ಹಣದಲ್ಲಿ ಅಭಿವೃದ್ಧಿ ಕೆಲಸ ಮಾಡಿರುವ ಕುರುಹು ಕೆರೆಯ ಆವರಣದಲ್ಲಿ ಇಲ್ಲ.
''ಕೆರೆಯ ಆವರಣದಲ್ಲಿ ಈಗಾಗಲೇ ಪಾಲಿಕೆಯಿಂದ ಒಂದು ಕೋಟಿ ರೂ. ಗೂ ಹೆಚ್ಚು ಹಣವನ್ನು ಬೃಹತ್ ರಾಷ್ಟ್ರಧ್ವಜ ಸ್ಥಾಪನೆಗೆ ಖರ್ಚು ಮಾಡಲಾಗಿದೆ. ಅಲ್ಲದೆ, ಕೆರೆಯಲ್ಲಿರುವ ನಡುಗಡ್ಡೆ ಮೇಲೆ ಬುದ್ಧನ ವಿಗ್ರಹ ಸ್ಥಾಪಿಸುವ ಪ್ರಸ್ತಾವವೂ ಇತ್ತು. ಮಣ್ಣು ಗಟ್ಟಿ ಇಲ್ಲ ಎನ್ನುವ ಕಾರಣಕ್ಕೆ ನಿರ್ಧಾರ ಕೈ ಬಿಡಲಾಗಿದೆ. ಅಷ್ಟೆಲ್ಲ ಹಣ ಪಾಲಿಕೆಯಿಂದ ವಿನಿಯೋಗಿಸಲು ಅವಕಾಶ ಇರುವಾಗ ಕೆರೆಗೆ ಆವರಣ ಗೋಡೆ ಕಟ್ಟಲು ಪ್ರವೇಶ ಶುಲ್ಕ ಸಂಗ್ರಹಿಸುವ ಅನಿವಾರ್ಯತೆ ಏನಿದೆ?'' ಎನ್ನುವುದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ದೀಪಕ ಗುಡುಗನಟ್ಟಿ ಅವರ ಪ್ರಶ್ನೆ.
ಕೋಟೆ ಕೆರೆ ಆವರಣಕ್ಕೆ ಬರುವ ಜನರನ್ನೇ ನಂಬಿ ಹತ್ತಾರು ಅಂಗಡಿಗಳು ನಡೆಯುತ್ತಿವೆ. ಪ್ರವೇಶ ಶುಲ್ಕದಿಂದ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ಅಂಗಡಿಗಳ ವ್ಯಾಪಾರಕ್ಕೂ ಪೆಟ್ಟು ಬೀಳಲಿದೆ. ಜನರಿಗೂ ಅಲ್ಲಿನ ಆಟಿಕೆ ಸಾಮಾನುಗಳು ದುಬಾರಿ ಎನಿಸಲಿವೆ.
ಪ್ರವೇಶಕ್ಕೆ ಹಲವು ದ್ವಾರ :
ಮೂಲಗಳ ಪ್ರಕಾರ ಕೋಟೆ ಕೆರೆಯಿಂದ ಬಂದ ಬಾಡಿಗೆ ಆದಾಯದ ಜತೆಗೆ ಪ್ರವೇಶ ಶುಲ್ಕದಿಂದ ಸಂಗ್ರಹವಾಗುವ ಹಣ ಸೇರಿಸಿ ಕೆರೆ ಸುತ್ತ ಆವರಣ ಗೋಡೆ ಕಟ್ಟುವ ಯೋಜನೆ ಇದೆ. ಆದರೆ, ಗೋಡೆಯೇ ಸರಿಯಾಗಿಲ್ಲದ ಕೆರೆಯ ಆವರಣಕ್ಕೆ ಪ್ರವೇಶ ಶುಲ್ಕ ಹೇರುವುದೆಂದರೆ ತಮಾಷೆಯ ವಿಷಯ ಎನ್ನುತ್ತಾರೆ ಕೋಟೆ ಕೆರೆ ನಿರ್ವಹಣೆ ಮಾಡುವ ಸಿಬ್ಬಂದಿ. ಕೋಟೆ ಕೆರೆಯ ಒಂದು ಭಾಗದಲ್ಲಿ ರಸ್ತೆ ಇದೆ. ಇನ್ನೊಂದು ಭಾಗದಲ್ಲಿ ಜನವಸತಿ ಪ್ರದೇಶ ಇವೆ. ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆರೆಯ ಆವರಣ ಗೋಡೆಯನ್ನು ದುಷ್ಕರ್ಮಿಗಳು ಈಗಾಗಲೇ ಒಡೆದು ಹಾಳು ಮಾಡಿದ್ದಾರೆ. ಅಲ್ಲಿಂದಲೇ ಹಲವರು ಕೆರೆ ಆವರಣ ಪ್ರವೇಶಿಸುತ್ತಾರೆ. ರಸ್ತೆ ಪಕ್ಕ ಕಬ್ಬಿಣದ ಸರಳಿನ ಬೇಲಿ ಇದ್ದು ಸಭ್ಯಸ್ಥರು ಮಾತ್ರ ಕೋಟೆ ಕೆರೆ ಮುಖ್ಯ ಧ್ವಾರದಿಂದ ಪ್ರವೇಶಿಸುತ್ತಾರೆ. ಹೀಗಿರುವಾಗ ಹಣ ಕೊಟ್ಟು ಬನ್ನಿ ಎಂದರೆ ಯಾರು ಬರುತ್ತಾರೆ. ಕೆರೆಯನ್ನು ಅಭಿವೃದ್ಧಿ ಪಡಿಸಿದ ಬಳಿಕ ಶುಲ್ಕ ಹೇರಿದರೆ ಪ್ರಾಯೋಗಿಕವಾಗಿ ಒಪ್ಪಬಹುದು. ಈಗ ಶುಲ್ಕ ಸಂಗ್ರಹಿಸುವುದು ಮತ್ತೊಂದು ರೀತಿಯ ಅವ್ಯವಹಾರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಹಲವರ ಆರೋಪ.
ಅಭಿವೃದ್ಧಿ ಬಳಿಕ ಶುಲ್ಕ ಪಡೆಯಿರಿ :
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ಉದ್ಯಾನಗಳು ಇವೆ. ಅದರಲ್ಲಿ ಹುಬ್ಬಳ್ಳಿಯ ಗ್ಲಾಸ್ಹೌಸ್ ಉದ್ಯಾನಕ್ಕೆ ಮಾತ್ರ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಉಳಿದಂತೆ ಧಾರವಾಡದಲ್ಲಿಯೂ ಸದ್ಯ ಯಾವುದೇ ಉದ್ಯಾನಕ್ಕೆ ಪ್ರವೇಶ ಶುಲ್ಕ ಇಲ್ಲ. ಧಾರವಾಡದ ಬೇಂದ್ರೆ ಉದ್ಯಾನಕ್ಕೆ ಈ ಹಿಂದೆ ಪ್ರವೇಶ ಶುಲ್ಕ ಇದ್ದರೂ, ಅಭಿವೃದ್ಧಿ ಇಲ್ಲ ಎಂದು ಈಗ ತೆಗೆಯಲಾಗಿದೆ. ಅಂತೆಯೇ ಬೆಳಗಾವಿಯ ಕೋಟೆ ಕೆರೆ ಅಭಿವೃದ್ಧಿ ಪಡಿಸಿದ ನಂತರವೇ ಅಗತ್ಯ ಇದ್ದರೆ ಶುಲ್ಕ ವಿಧಿಸಬಹುದು ಎನ್ನುವುದು ಖಾಸಗಿ ಉದ್ಯೋಗಿ ಬಸವರಾಜ ಹಿರೇಮಠ ಅವರ ಅಭಿಪ್ರಾಯ.
ಕೆರೆಯ ಬೋಟಿಂಗ್ ಮತ್ತು ಆಟಿಕೆ ಸಾಮಾನು ಮಾರಾಟವನ್ನು 13 ವರ್ಷದಿಂದ ಗುತ್ತಿಗೆ ಪಡೆದಿದ್ದೇನೆ. ಸದ್ಯ ಪ್ರತೀ ತಿಂಗಳು ಸುಮಾರು 39 ಸಾವಿರ ರೂ. ಬಾಡಿಗೆ ಪಾವತಿಸುತ್ತಿದ್ದೇನೆ. ಈವರೆಗೆ 40ರಿಂದ 50 ಲಕ್ಷ ರೂ. ಬಾಡಿಗೆ ಪಾವತಿಸಿರಬಹುದು.
- ನಾಸಿರ್ ಹುಸೇನ್ ಮಕಾನದಾರ್, ಕೋಟೆಕೆರೆ ಗುತ್ತಿಗೆ ಸಂಸ್ಥೆ ವ್ಯವಸ್ಥಾಪಕ
ನಗರದ ಸುಂದರ ತಾಣಗಳಲ್ಲೊಂದಾದ ಕೋಟೆ ಕೆರೆಯಿಂದ ವಾರ್ಷಿಕ 5 ರಿಂದ 6 ಲಕ್ಷ ರೂ. ಆದಾಯ ಪಡೆಯುತ್ತಿರುವ ಜಿಲ್ಲಾಡಳಿತ, ಕೆರೆ ಆವರಣದ ಸುತ್ತಲೂ ಗೋಡೆ ಕಟ್ಟುವ ಉದ್ದೇಶದಿಂದ ಪ್ರವೇಶ ಶುಲ್ಕ ಆಕರಿಸುತ್ತಿರುವುದು ಚರ್ಚೆಗೆ ಗ್ರಾಸವೊದಗಿಸಿದೆ.
ಕೋಟೆ ಕೆರೆ ಆವರಣದಲ್ಲಿರುವ ಬೋಟಿಂಗ್ (ದೋಣಿ ವಿಹಾರ), ಮಕ್ಕಳ ಆಟಿಕೆ ಯಂತ್ರಗಳಿಂದಲೇ ಜಿಲ್ಲಾಡಳಿತಕ್ಕೆ ತಿಂಗಳಿಗೆ ಸುಮಾರು 40 ಸಾವಿರ ರೂ.ನಂತೆ ವರ್ಷಕ್ಕೆ 4ರಿಂದ 5 ಲಕ್ಷ ರೂ. ಬಾಡಿಗೆ ಪಾವತಿಯಾಗುತ್ತಿದೆ. ಇದರ ಜತೆಗೆ ಉದ್ಯಾನದ ಒಳಗಿನ ಅಂಗಡಿಗಳಿಂದಲೂ ಬಾಡಿಗೆ ಸಂಗ್ರಹವಾಗುತ್ತಿವೆ.
ಕೋಟೆ ಕೆರೆಯಲ್ಲಿ 2006ರಿಂದಲೂ ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ ಕೊಡಲಾಗುತ್ತಿದೆ. ಪ್ರತೀ ವರ್ಷ ಮಳಿಗೆ ಬಾಡಿಗೆಯನ್ನು ಹೆಚ್ಚಿಸಲಾಗುತ್ತಿದ್ದು ಸದ್ಯ ಬೋಟಿಂಗ್ ಮತ್ತು ಆಟಿಕೆ ಯಂತ್ರದ ಬಳಕೆಯ ಬಾಡಿಗೆ ತಿಂಗಳಿಗೆ 40 ಸಾವಿರ ರೂ. ತಲುಪಿದೆ. ಈ ಪ್ರಕಾರ ಕಳೆದ 13 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಕೋಟೆ ಕೆರೆಯಿಂದ ನಿರಂತರ ಆದಾಯ ಸಂದಾಯವಾಗುತ್ತಿದೆ. ಒಟ್ಟಾರೆ ಹಣ ಅರ್ಧ ಕೋಟಿ ರೂ. ಮೀರಲಿದೆ. ಆದರೆ, ಆ ಹಣದಲ್ಲಿ ಅಭಿವೃದ್ಧಿ ಕೆಲಸ ಮಾಡಿರುವ ಕುರುಹು ಕೆರೆಯ ಆವರಣದಲ್ಲಿ ಇಲ್ಲ.
''ಕೆರೆಯ ಆವರಣದಲ್ಲಿ ಈಗಾಗಲೇ ಪಾಲಿಕೆಯಿಂದ ಒಂದು ಕೋಟಿ ರೂ. ಗೂ ಹೆಚ್ಚು ಹಣವನ್ನು ಬೃಹತ್ ರಾಷ್ಟ್ರಧ್ವಜ ಸ್ಥಾಪನೆಗೆ ಖರ್ಚು ಮಾಡಲಾಗಿದೆ. ಅಲ್ಲದೆ, ಕೆರೆಯಲ್ಲಿರುವ ನಡುಗಡ್ಡೆ ಮೇಲೆ ಬುದ್ಧನ ವಿಗ್ರಹ ಸ್ಥಾಪಿಸುವ ಪ್ರಸ್ತಾವವೂ ಇತ್ತು. ಮಣ್ಣು ಗಟ್ಟಿ ಇಲ್ಲ ಎನ್ನುವ ಕಾರಣಕ್ಕೆ ನಿರ್ಧಾರ ಕೈ ಬಿಡಲಾಗಿದೆ. ಅಷ್ಟೆಲ್ಲ ಹಣ ಪಾಲಿಕೆಯಿಂದ ವಿನಿಯೋಗಿಸಲು ಅವಕಾಶ ಇರುವಾಗ ಕೆರೆಗೆ ಆವರಣ ಗೋಡೆ ಕಟ್ಟಲು ಪ್ರವೇಶ ಶುಲ್ಕ ಸಂಗ್ರಹಿಸುವ ಅನಿವಾರ್ಯತೆ ಏನಿದೆ?'' ಎನ್ನುವುದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ದೀಪಕ ಗುಡುಗನಟ್ಟಿ ಅವರ ಪ್ರಶ್ನೆ.
ಕೋಟೆ ಕೆರೆ ಆವರಣಕ್ಕೆ ಬರುವ ಜನರನ್ನೇ ನಂಬಿ ಹತ್ತಾರು ಅಂಗಡಿಗಳು ನಡೆಯುತ್ತಿವೆ. ಪ್ರವೇಶ ಶುಲ್ಕದಿಂದ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ಅಂಗಡಿಗಳ ವ್ಯಾಪಾರಕ್ಕೂ ಪೆಟ್ಟು ಬೀಳಲಿದೆ. ಜನರಿಗೂ ಅಲ್ಲಿನ ಆಟಿಕೆ ಸಾಮಾನುಗಳು ದುಬಾರಿ ಎನಿಸಲಿವೆ.
ಪ್ರವೇಶಕ್ಕೆ ಹಲವು ದ್ವಾರ :
ಮೂಲಗಳ ಪ್ರಕಾರ ಕೋಟೆ ಕೆರೆಯಿಂದ ಬಂದ ಬಾಡಿಗೆ ಆದಾಯದ ಜತೆಗೆ ಪ್ರವೇಶ ಶುಲ್ಕದಿಂದ ಸಂಗ್ರಹವಾಗುವ ಹಣ ಸೇರಿಸಿ ಕೆರೆ ಸುತ್ತ ಆವರಣ ಗೋಡೆ ಕಟ್ಟುವ ಯೋಜನೆ ಇದೆ. ಆದರೆ, ಗೋಡೆಯೇ ಸರಿಯಾಗಿಲ್ಲದ ಕೆರೆಯ ಆವರಣಕ್ಕೆ ಪ್ರವೇಶ ಶುಲ್ಕ ಹೇರುವುದೆಂದರೆ ತಮಾಷೆಯ ವಿಷಯ ಎನ್ನುತ್ತಾರೆ ಕೋಟೆ ಕೆರೆ ನಿರ್ವಹಣೆ ಮಾಡುವ ಸಿಬ್ಬಂದಿ. ಕೋಟೆ ಕೆರೆಯ ಒಂದು ಭಾಗದಲ್ಲಿ ರಸ್ತೆ ಇದೆ. ಇನ್ನೊಂದು ಭಾಗದಲ್ಲಿ ಜನವಸತಿ ಪ್ರದೇಶ ಇವೆ. ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆರೆಯ ಆವರಣ ಗೋಡೆಯನ್ನು ದುಷ್ಕರ್ಮಿಗಳು ಈಗಾಗಲೇ ಒಡೆದು ಹಾಳು ಮಾಡಿದ್ದಾರೆ. ಅಲ್ಲಿಂದಲೇ ಹಲವರು ಕೆರೆ ಆವರಣ ಪ್ರವೇಶಿಸುತ್ತಾರೆ. ರಸ್ತೆ ಪಕ್ಕ ಕಬ್ಬಿಣದ ಸರಳಿನ ಬೇಲಿ ಇದ್ದು ಸಭ್ಯಸ್ಥರು ಮಾತ್ರ ಕೋಟೆ ಕೆರೆ ಮುಖ್ಯ ಧ್ವಾರದಿಂದ ಪ್ರವೇಶಿಸುತ್ತಾರೆ. ಹೀಗಿರುವಾಗ ಹಣ ಕೊಟ್ಟು ಬನ್ನಿ ಎಂದರೆ ಯಾರು ಬರುತ್ತಾರೆ. ಕೆರೆಯನ್ನು ಅಭಿವೃದ್ಧಿ ಪಡಿಸಿದ ಬಳಿಕ ಶುಲ್ಕ ಹೇರಿದರೆ ಪ್ರಾಯೋಗಿಕವಾಗಿ ಒಪ್ಪಬಹುದು. ಈಗ ಶುಲ್ಕ ಸಂಗ್ರಹಿಸುವುದು ಮತ್ತೊಂದು ರೀತಿಯ ಅವ್ಯವಹಾರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಹಲವರ ಆರೋಪ.
ಅಭಿವೃದ್ಧಿ ಬಳಿಕ ಶುಲ್ಕ ಪಡೆಯಿರಿ :
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ಉದ್ಯಾನಗಳು ಇವೆ. ಅದರಲ್ಲಿ ಹುಬ್ಬಳ್ಳಿಯ ಗ್ಲಾಸ್ಹೌಸ್ ಉದ್ಯಾನಕ್ಕೆ ಮಾತ್ರ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಉಳಿದಂತೆ ಧಾರವಾಡದಲ್ಲಿಯೂ ಸದ್ಯ ಯಾವುದೇ ಉದ್ಯಾನಕ್ಕೆ ಪ್ರವೇಶ ಶುಲ್ಕ ಇಲ್ಲ. ಧಾರವಾಡದ ಬೇಂದ್ರೆ ಉದ್ಯಾನಕ್ಕೆ ಈ ಹಿಂದೆ ಪ್ರವೇಶ ಶುಲ್ಕ ಇದ್ದರೂ, ಅಭಿವೃದ್ಧಿ ಇಲ್ಲ ಎಂದು ಈಗ ತೆಗೆಯಲಾಗಿದೆ. ಅಂತೆಯೇ ಬೆಳಗಾವಿಯ ಕೋಟೆ ಕೆರೆ ಅಭಿವೃದ್ಧಿ ಪಡಿಸಿದ ನಂತರವೇ ಅಗತ್ಯ ಇದ್ದರೆ ಶುಲ್ಕ ವಿಧಿಸಬಹುದು ಎನ್ನುವುದು ಖಾಸಗಿ ಉದ್ಯೋಗಿ ಬಸವರಾಜ ಹಿರೇಮಠ ಅವರ ಅಭಿಪ್ರಾಯ.
ಕೆರೆಯ ಬೋಟಿಂಗ್ ಮತ್ತು ಆಟಿಕೆ ಸಾಮಾನು ಮಾರಾಟವನ್ನು 13 ವರ್ಷದಿಂದ ಗುತ್ತಿಗೆ ಪಡೆದಿದ್ದೇನೆ. ಸದ್ಯ ಪ್ರತೀ ತಿಂಗಳು ಸುಮಾರು 39 ಸಾವಿರ ರೂ. ಬಾಡಿಗೆ ಪಾವತಿಸುತ್ತಿದ್ದೇನೆ. ಈವರೆಗೆ 40ರಿಂದ 50 ಲಕ್ಷ ರೂ. ಬಾಡಿಗೆ ಪಾವತಿಸಿರಬಹುದು.
- ನಾಸಿರ್ ಹುಸೇನ್ ಮಕಾನದಾರ್, ಕೋಟೆಕೆರೆ ಗುತ್ತಿಗೆ ಸಂಸ್ಥೆ ವ್ಯವಸ್ಥಾಪಕ