ಆ್ಯಪ್ನಗರ

ಕುದರೆಮನಿ ಗ್ರಾಮದ ಬಳಿ ಮತ್ತೊಂದು ಚಿರತೆ ಪ್ರತ್ಯಕ್ಷ!

ಬೆಳಗಾವಿ: ನಗರದ ಹೊರವಲಯದಲ್ಲಿ ನ...

Vijaya Karnataka 11 Nov 2018, 5:00 am
ಬೆಳಗಾವಿ : ನಗರದ ಹೊರವಲಯದಲ್ಲಿ ನ.8ರಂದು ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಬೆನ್ನಲ್ಲೆ ಬೆಳಗಾವಿ ತಾಲೂಕಿನ ಇನ್ನೊಂದು ಭಾಗದಲ್ಲೂ ಮತ್ತೊಂದು ಚಿರತೆ ಕಾಣಿಸಿಕೊಂಡಿದೆ.
Vijaya Karnataka Web BLG-1011-2-52-10MAHESH2


ಕುದರೆಮನಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಮಧ್ಯಾಹ್ನ ಕಂಡು ಬಂದ ಚಿರತೆಯ ಚಲನವಲನವನ್ನು ಸ್ಥಳೀಯರು ವಿಡಿಯೊ ಮಾಡಿದ್ದು, ಅದೀಗ ವೈರಲ್‌ ಆಗಿದೆ. ಮಾಹಿತಿ ಸಿಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಸ್ಥಳ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶವಾದ್ದರಿಂದ ಮಹಾರಾಷ್ಟ್ರದ ಚಂದಗಡ ತಾಲೂಕಿನ ಅರಣ್ಯ ಅಧಿಕಾರಿಗಳೂ ಸ್ಥಳ ಪರಿಶೀಲನೆ ನಡೆಸಿದ್ದಾರೆ.

''ಕುದರೆಮನಿ ಗ್ರಾಮ ಅರಣ್ಯದಿಂದ ಸುತ್ತುವರಿದಿದೆ. ಅಲ್ಲದೆ, ಚಿರತೆ ಕಾಣಿಸಿಕೊಂಡ ಸ್ಥಳವೂ ಅರಣ್ಯ ಪ್ರದೇಶವಾದ್ದರಿಂದ ಕಾಡು ಪ್ರಾಣಿಗಳ ಚಲನವಲನ ಸಾಮಾನ್ಯ'', ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಕುದರೆಮನಿ ಗ್ರಾಮ ವ್ಯಾಪ್ತಿಯಲ್ಲಿ ಕಬ್ಬು ಮತ್ತು ಗೆಣಸು ಪೈರು ಕೊಯ್ಲಿಗೆ ಬಂದಿರುವುದು ಮತ್ತು ಇದೇ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯ ರೈತರಲ್ಲಿ ಒಂದಿಷ್ಟು ಆತಂಕ ಮೂಡಿಸಿದೆ.

ಮುಂದುವರಿದ ಕಾರ್ಯಾಚರಣೆ:
ಹಿಂಡಾಲ್ಕೊ ಕೈಗಾರಿಕಾ ಘಟಕದ ವಸತಿ ಪ್ರದೇಶದಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ಕಂಡು ಬಂದಿರುವ ಚಿರತೆ ಸೆರೆಹಿಡಿಯಲು ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ, ಶನಿವಾರವೂ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆರ್‌ಎಫ್‌ಒ ನಾಗರಾಜ ಬಾಳೇಹೊಸೂರ ನೇತೃತ್ವದಲ್ಲಿ ಕಾಕತಿ ಅರಣ್ಯ ವಲಯದ ಸಿಬ್ಬಂದಿ ಕೂಡ ಚಿರತೆ ಸೆರೆಗೆ ಶ್ರಮಿಸುತ್ತಿದ್ದಾರೆ.

ಮಕ್ಕಳು ಮತ್ತು ಜಾನುವಾರುಗಳನ್ನು ಬಯಲು ಪ್ರದೇಶಕ್ಕೆ ಬಿಡದಂತೆ ಎಚ್ಚರಿಕೆ ವಹಿಸಲು ಕುದರೆಮನಿ ಜನರಿಗೆ ಸೂಚನೆ ನೀಡಲಾಗಿದೆ. ವಸತಿ ಪ್ರದೇಶದ ಆಸುಪಾಸು ಕಾಡು ಪ್ರಾಣಿ ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸಲಹೆ ನೀಡಲಾಗಿದೆ.
- ಶ್ರೀನಾಥ ಕಡೋಲ್ಕರ್‌. ಆರ್‌ಎಫ್‌ಒ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ