ಬೆಳಗಾವಿ: ಉತ್ತರ ಕರ್ನಾಟಕದ 13 ಜಿಲ್ಲೆಗಳ ಅಭಿವೃದ್ಧಿಗೆ ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿ ಧರಣಿ ನಡೆಸಿದ ವಿವಿಧ ಮಠಾಧೀಶರು, ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದರೆ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ತಾವೇ ಧ್ವನಿಯಾಗುವುದಾಗಿ ರಾಜ್ಯ ಸರಕಾರಕ್ಕೆ ಮಂಗಳವಾರ ಸ್ಪಷ್ಟ ಎಚ್ಚರಿಕೆ ರವಾನಿಸಿದರು.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸುಮಾರು 65 ಸ್ವಾಮೀಜಿಗಳು ಹೋರಾಟದಲ್ಲಿ ಪಾಲ್ಗೊಂಡು ದಿಟ್ಟ ಸಂದೇಶ ಸಾರಿದರು. ''ರಾಜ್ಯ ವಿಭಜನೆ ಹೋರಾಟದ ಉದ್ದೇಶವಲ್ಲ. ಆದರೆ, ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡದೇ ಮಲತಾಯಿ ಧೋರಣೆ ಅನುಸರಿಸಿದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ. ಅಂಥ ಸಂದರ್ಭವನ್ನು ರಾಜ್ಯ ಸರಕಾರ ಸೃಷ್ಟಿಸಬಾರದು. ಕರ್ನಾಟಕ ಎಂದಿಗೂ ಅಖಂಡವಾಗಿರಬೇಕು'', ಎಂದು ಸ್ಪಷ್ಟಪಡಿಸಿದರು.
ಬಿಸ್ಕಿಟ್ ಬೇಬಿ: ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕದ ಶಾಸಕರು, ಸಂಸದರು 'ಬಿಸ್ಕಿಟ್ ಬೇಬಿ'ಗಳಾಗಿದ್ದಾರೆ. ಅಭಿವೃದ್ಧಿ ಮಾಡಲಾಗದೆ ಇದ್ದರೆ ರಾಜೀನಾಮೆ ಕೊಡಿ. ನಿಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಶಾಸಕರ, ಸಂಸದರ ಕಿವಿ ಹಿಂಡಿದರು. ''ಪ್ರತ್ಯೇಕ ರಾಜ್ಯ ನಡೆಸುವ ತಾಕತ್ ಇದೆಯಾ?'', ಎನ್ನುವ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಸ್ವಾಮಿಗಳು ''ಉತ್ತರ ಕರ್ನಾಟಕದವರು ಎಲ್ಲದಕ್ಕೂ ಸಿದ್ಧ'', ಎಂದು ಸವಾಲು ಹಾಕಿದರು. ಸಿಎಂ ಕುಮಾರಸ್ವಾಮಿ ಅವರ ಹೆಸರಿಗೆ ಬರೆದ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಸಲ್ಲಿಸಿದರು. ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೂ ಮನವಿ ಪತ್ರ ಕೊಟ್ಟರು.
ಸದನದಲ್ಲಿ ಹೋರಾಟ: ಇದೇ ವೇಳೆ, ಕರ್ನಾಟಕ ಅಖಂಡವಾಗಿರಬೇಕು ಎಂದು ಪ್ರತಿಪಾದಿಸಿದ ಬಿಎಸ್ವೈ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸದನದ ಒಳಗೆ, ಹೊರಗೆ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು. ಆ. 2ಕ್ಕೆ ಕರೆಕೊಟ್ಟಿರುವ 13 ಜಿಲ್ಲೆಗಳ ಬಂದ್ ಹಿಂಪಡೆಯಬೇಕು ಎಂದು ಮನವಿ ಮಾಡಿ, ಈ ಭಾಗದ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸಮಸ್ಯೆ ಆಲಿಸಿ ಸರಕಾರದ ಗಮನಸೆಳೆಯುವುದಾಗಿ ಹೇಳಿದರು. ಈ ಹೋರಾಟದ ಕಿಚ್ಚಿಗೆ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೇ ಕಾರಣ ಎಂದು ಜರಿದರು.
ಕೃಷ್ಣಾ 'ಬಿ' ಯೋಜನೆ ಆರಂಭಿಸಬೇಕು ಎಂದು ಧರಣಿಯಲ್ಲಿ ಪಾಲ್ಗೊಂಡಿದ್ದ ಶಾಸಕ ಉಮೇಶ್ ಕತ್ತಿ ಆಗ್ರಹಿಸಿದರು. ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಶಶಿಕಲಾ ಜೊಲ್ಲೆ, ಅನಿಲ ಬೆನಕೆ, ಮಾಜಿ ಶಾಸಕ ಸುನಿಲ್ ಹೆಗಡೆ, ಮಾಜಿ ಸಚಿವ ಶಶಿಕಾಂತ ನಾಯ್ಕ, ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಭೀಮಪ್ಪ ಗಡಾದ, ಉಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಮತ್ತಿತರರು ಹಾಜರಿದ್ದರು.
ಅಖಂಡತೆ ಮಧ್ಯೆ ಪ್ರತ್ಯೇಕತೆ ಕಿಚ್ಚು: ಪ್ರತಿಭಟನೆ ಸ್ಥಳಕ್ಕೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಬರುತ್ತಿದ್ದಂತೆಯೇ ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡರು ವೇದಿಕೆಯ ಬದಿಯಲ್ಲಿದ್ದ ಸ್ವಾಮೀಜಿಗಳಿಂದ 'ಪ್ರತ್ಯೇಕ ರಾಜ್ಯ' ಧ್ವಜ ಪ್ರದರ್ಶನ ಮಾಡಿಸಿದ್ದರಿಂದ ಕೋಲಾಹಲ ಸೃಷ್ಟಿಯಾಯಿತು. ವೇದಿಕೆಯಲ್ಲಿದ್ದ ಅದೇ ಸಮಿತಿಯ ಮತ್ತೊಬ್ಬ ಮುಖಂಡ ನಾಗೇಶ ಗೋಲಿಶೆಟ್ಟಿ ''ಪ್ರತ್ಯೇಕ ರಾಜ್ಯ ಬೇಡಿಕೆ ಇಡಲೇಬೇಕು. ಮತ್ತೆ ರಾಜ್ಯ ಸರಕಾರಕ್ಕೆ ಗಡುವು ಕೊಡುವುದರಲ್ಲಿ ಅರ್ಥವಿಲ್ಲ'', ಎನ್ನುತ್ತಾ ಮತ್ತಷ್ಟು ಗದ್ದಲ ಹೆಚ್ಚಿಸಿದರು.
ಇದರಿಂದ ಆತಂಕ ಮನೆ ಮಾಡಿತು. ಸ್ವಾಮೀಜಿಗಳು ಸೇರಿದಂತೆ ಆಗ ತಾನೇ ಸ್ಥಳಕ್ಕೆ ಬಂದಿದ್ದ ಬಿ.ಎಸ್. ಯಡಿಯೂರಪ್ಪ ಅವರು ಈ ಅನಿರೀಕ್ಷಿತ ಘಟನೆಯಿಂದ ಕಕ್ಕಾಬಿಕ್ಕಿಯಾದರು. ಸ್ವಾಮೀಜಿಗಳು ಪ್ರತಿಭಟನಾಕಾರರನ್ನು ಸಂತೈಸಲು ಯತ್ನಿಸುತ್ತಿರುವಾಗಲೇ, ಇನ್ನೊಂದು ಕಡೆಯಿಂದ ಮಹದಾಯಿ ಕುರಿತ ಘೋಷಣೆ ಎದ್ದಿತು. ''ಮಹದಾಯಿ ವಿಚಾರ ರಾಜ್ಯದ ಕೈಯಲ್ಲಿಲ್ಲ. ಬಿಜೆಪಿಗರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಿ'', ಎಂದು ಬಿಎಸ್ವೈ ಎದುರಲ್ಲೇ ಘೋಷಣೆ ಕೂಗಿದರು. ಪೊಲೀಸರು ಮಧ್ಯ ಪ್ರವೇಶಿಸಿ ಗದ್ದಲ ಎಬ್ಬಿಸಿದ ಕಾರ್ಯಕರ್ತರನ್ನು ವೇದಿಕೆಯಿಂದ ಹೊರ ಕಳುಹಿಸಿದರು. ಜನರ ಗುಂಪನ್ನು ಚದುರಿಸಿದರು.
ಈ ಭಾಗದ ಶಾಸಕ, ಸಚಿವರು ಎಲ್ಲರೂ ನಮ್ಮವರು. ಅದಕ್ಕೆ ಯಾರೂ ಭಿನ್ನ ಹೇಳಿಕೆ ನೀಡಬಾರದು. ಉತ್ತರ ಕರ್ನಾಟಕ ಪ್ರತ್ಯೇಕಿಸುವ ಭಾವನೆ ನಮಗಿಲ್ಲ. ಈ ಭಾಗಕ್ಕೆ ಅನ್ಯಾಯವಾದರೆ ಅದಕ್ಕೆ ರಾಜಕಾರಣಿಗಳೇ ಹೊಣೆಗಾರರು. ಅದಕ್ಕೆ ಅವಕಾಶ ಕೊಡಬಾರದು - ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ.
ಉತ್ತರ ಕರ್ನಾಟಕ ಅಭಿವೃದ್ಧಿಗೆ ಸ್ಪಂದಿಸದೆ ಸಿಎಂ ಕುಮಾರ ಸ್ವಾಮಿ ಬೆಂಕಿ ಹಚ್ಚಿದ್ದಾರೆ. ಪ್ರತ್ಯೇಕ ರಾಜ್ಯ ಮಾಡೋದಕ್ಕೆ, ನೋಡೋದಕ್ಕೆ ನಾವು ಗಟ್ಟಿ ಇದ್ದೇವೆ. ಉಕ ಅಭಿವೃದ್ಧಿಯಾಗದೇ ಇದ್ದಾಗ ಯಾವತ್ತಿಗೂ ಪ್ರತ್ಯೇಕ ರಾಜ್ಯದ ಕೂಗು ಹಾಕುತ್ತಲೇ ಇರುತ್ತೇವೆ. ಇದರ ಹಿಂದಿನ ಕಾಳಜಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಒಡೆಯುವ ಉದ್ದೇಶ ಇಲ್ಲ - ಉಮೇಶ್ ಕತ್ತಿ, ಶಾಸಕ, ಮಾಜಿ ಸಚಿವ.
ಬೆಂಗಳೂರಿನ ದುಡ್ಡನ್ನು ಇಲ್ಲಿಗೆ ಹಾಕುತ್ತಿದ್ದೇವೆ ಎನ್ನುವುದು ಸರಿಯಲ್ಲ. ಸಿಎಂ ಅಖಂಡತೆ ಬಿಟ್ಟು ಮಾತನಾಡಬಾರದು. ತೆಲಂಗಾಣವನ್ನು ಕಡೆಗಣಿಸಿದ್ದಕ್ಕೆ ಪ್ರತ್ಯೇಕ ರಾಜ್ಯ ಆಯ್ತು. ಅನಿವಾರ್ಯ ಬಂದರೆ ಉಕ ಪ್ರತ್ಯೇಕ ರಾಜ್ಯ ಆಗಬೇಕಾಗುತ್ತದೆ. ಇಲ್ಲಿನ ಜನಪ್ರತಿನಿಧಿಗಳು ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟರೆ ಅವರನ್ನು ಆನೆ ಮೇಲೆ ಕೂರಿಸಿ ಸನ್ಮಾನಿಸಿ - ಡಾ. ಸಿದ್ದರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸುಮಾರು 65 ಸ್ವಾಮೀಜಿಗಳು ಹೋರಾಟದಲ್ಲಿ ಪಾಲ್ಗೊಂಡು ದಿಟ್ಟ ಸಂದೇಶ ಸಾರಿದರು. ''ರಾಜ್ಯ ವಿಭಜನೆ ಹೋರಾಟದ ಉದ್ದೇಶವಲ್ಲ. ಆದರೆ, ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡದೇ ಮಲತಾಯಿ ಧೋರಣೆ ಅನುಸರಿಸಿದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ. ಅಂಥ ಸಂದರ್ಭವನ್ನು ರಾಜ್ಯ ಸರಕಾರ ಸೃಷ್ಟಿಸಬಾರದು. ಕರ್ನಾಟಕ ಎಂದಿಗೂ ಅಖಂಡವಾಗಿರಬೇಕು'', ಎಂದು ಸ್ಪಷ್ಟಪಡಿಸಿದರು.
ಬಿಸ್ಕಿಟ್ ಬೇಬಿ: ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕದ ಶಾಸಕರು, ಸಂಸದರು 'ಬಿಸ್ಕಿಟ್ ಬೇಬಿ'ಗಳಾಗಿದ್ದಾರೆ. ಅಭಿವೃದ್ಧಿ ಮಾಡಲಾಗದೆ ಇದ್ದರೆ ರಾಜೀನಾಮೆ ಕೊಡಿ. ನಿಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಶಾಸಕರ, ಸಂಸದರ ಕಿವಿ ಹಿಂಡಿದರು. ''ಪ್ರತ್ಯೇಕ ರಾಜ್ಯ ನಡೆಸುವ ತಾಕತ್ ಇದೆಯಾ?'', ಎನ್ನುವ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಸ್ವಾಮಿಗಳು ''ಉತ್ತರ ಕರ್ನಾಟಕದವರು ಎಲ್ಲದಕ್ಕೂ ಸಿದ್ಧ'', ಎಂದು ಸವಾಲು ಹಾಕಿದರು. ಸಿಎಂ ಕುಮಾರಸ್ವಾಮಿ ಅವರ ಹೆಸರಿಗೆ ಬರೆದ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಸಲ್ಲಿಸಿದರು. ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೂ ಮನವಿ ಪತ್ರ ಕೊಟ್ಟರು.
ಸದನದಲ್ಲಿ ಹೋರಾಟ: ಇದೇ ವೇಳೆ, ಕರ್ನಾಟಕ ಅಖಂಡವಾಗಿರಬೇಕು ಎಂದು ಪ್ರತಿಪಾದಿಸಿದ ಬಿಎಸ್ವೈ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸದನದ ಒಳಗೆ, ಹೊರಗೆ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು. ಆ. 2ಕ್ಕೆ ಕರೆಕೊಟ್ಟಿರುವ 13 ಜಿಲ್ಲೆಗಳ ಬಂದ್ ಹಿಂಪಡೆಯಬೇಕು ಎಂದು ಮನವಿ ಮಾಡಿ, ಈ ಭಾಗದ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸಮಸ್ಯೆ ಆಲಿಸಿ ಸರಕಾರದ ಗಮನಸೆಳೆಯುವುದಾಗಿ ಹೇಳಿದರು. ಈ ಹೋರಾಟದ ಕಿಚ್ಚಿಗೆ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೇ ಕಾರಣ ಎಂದು ಜರಿದರು.
ಕೃಷ್ಣಾ 'ಬಿ' ಯೋಜನೆ ಆರಂಭಿಸಬೇಕು ಎಂದು ಧರಣಿಯಲ್ಲಿ ಪಾಲ್ಗೊಂಡಿದ್ದ ಶಾಸಕ ಉಮೇಶ್ ಕತ್ತಿ ಆಗ್ರಹಿಸಿದರು. ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಶಶಿಕಲಾ ಜೊಲ್ಲೆ, ಅನಿಲ ಬೆನಕೆ, ಮಾಜಿ ಶಾಸಕ ಸುನಿಲ್ ಹೆಗಡೆ, ಮಾಜಿ ಸಚಿವ ಶಶಿಕಾಂತ ನಾಯ್ಕ, ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಭೀಮಪ್ಪ ಗಡಾದ, ಉಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಮತ್ತಿತರರು ಹಾಜರಿದ್ದರು.
ಅಖಂಡತೆ ಮಧ್ಯೆ ಪ್ರತ್ಯೇಕತೆ ಕಿಚ್ಚು: ಪ್ರತಿಭಟನೆ ಸ್ಥಳಕ್ಕೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಬರುತ್ತಿದ್ದಂತೆಯೇ ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡರು ವೇದಿಕೆಯ ಬದಿಯಲ್ಲಿದ್ದ ಸ್ವಾಮೀಜಿಗಳಿಂದ 'ಪ್ರತ್ಯೇಕ ರಾಜ್ಯ' ಧ್ವಜ ಪ್ರದರ್ಶನ ಮಾಡಿಸಿದ್ದರಿಂದ ಕೋಲಾಹಲ ಸೃಷ್ಟಿಯಾಯಿತು. ವೇದಿಕೆಯಲ್ಲಿದ್ದ ಅದೇ ಸಮಿತಿಯ ಮತ್ತೊಬ್ಬ ಮುಖಂಡ ನಾಗೇಶ ಗೋಲಿಶೆಟ್ಟಿ ''ಪ್ರತ್ಯೇಕ ರಾಜ್ಯ ಬೇಡಿಕೆ ಇಡಲೇಬೇಕು. ಮತ್ತೆ ರಾಜ್ಯ ಸರಕಾರಕ್ಕೆ ಗಡುವು ಕೊಡುವುದರಲ್ಲಿ ಅರ್ಥವಿಲ್ಲ'', ಎನ್ನುತ್ತಾ ಮತ್ತಷ್ಟು ಗದ್ದಲ ಹೆಚ್ಚಿಸಿದರು.
ಇದರಿಂದ ಆತಂಕ ಮನೆ ಮಾಡಿತು. ಸ್ವಾಮೀಜಿಗಳು ಸೇರಿದಂತೆ ಆಗ ತಾನೇ ಸ್ಥಳಕ್ಕೆ ಬಂದಿದ್ದ ಬಿ.ಎಸ್. ಯಡಿಯೂರಪ್ಪ ಅವರು ಈ ಅನಿರೀಕ್ಷಿತ ಘಟನೆಯಿಂದ ಕಕ್ಕಾಬಿಕ್ಕಿಯಾದರು. ಸ್ವಾಮೀಜಿಗಳು ಪ್ರತಿಭಟನಾಕಾರರನ್ನು ಸಂತೈಸಲು ಯತ್ನಿಸುತ್ತಿರುವಾಗಲೇ, ಇನ್ನೊಂದು ಕಡೆಯಿಂದ ಮಹದಾಯಿ ಕುರಿತ ಘೋಷಣೆ ಎದ್ದಿತು. ''ಮಹದಾಯಿ ವಿಚಾರ ರಾಜ್ಯದ ಕೈಯಲ್ಲಿಲ್ಲ. ಬಿಜೆಪಿಗರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಿ'', ಎಂದು ಬಿಎಸ್ವೈ ಎದುರಲ್ಲೇ ಘೋಷಣೆ ಕೂಗಿದರು. ಪೊಲೀಸರು ಮಧ್ಯ ಪ್ರವೇಶಿಸಿ ಗದ್ದಲ ಎಬ್ಬಿಸಿದ ಕಾರ್ಯಕರ್ತರನ್ನು ವೇದಿಕೆಯಿಂದ ಹೊರ ಕಳುಹಿಸಿದರು. ಜನರ ಗುಂಪನ್ನು ಚದುರಿಸಿದರು.
ಈ ಭಾಗದ ಶಾಸಕ, ಸಚಿವರು ಎಲ್ಲರೂ ನಮ್ಮವರು. ಅದಕ್ಕೆ ಯಾರೂ ಭಿನ್ನ ಹೇಳಿಕೆ ನೀಡಬಾರದು. ಉತ್ತರ ಕರ್ನಾಟಕ ಪ್ರತ್ಯೇಕಿಸುವ ಭಾವನೆ ನಮಗಿಲ್ಲ. ಈ ಭಾಗಕ್ಕೆ ಅನ್ಯಾಯವಾದರೆ ಅದಕ್ಕೆ ರಾಜಕಾರಣಿಗಳೇ ಹೊಣೆಗಾರರು. ಅದಕ್ಕೆ ಅವಕಾಶ ಕೊಡಬಾರದು - ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ.
ಉತ್ತರ ಕರ್ನಾಟಕ ಅಭಿವೃದ್ಧಿಗೆ ಸ್ಪಂದಿಸದೆ ಸಿಎಂ ಕುಮಾರ ಸ್ವಾಮಿ ಬೆಂಕಿ ಹಚ್ಚಿದ್ದಾರೆ. ಪ್ರತ್ಯೇಕ ರಾಜ್ಯ ಮಾಡೋದಕ್ಕೆ, ನೋಡೋದಕ್ಕೆ ನಾವು ಗಟ್ಟಿ ಇದ್ದೇವೆ. ಉಕ ಅಭಿವೃದ್ಧಿಯಾಗದೇ ಇದ್ದಾಗ ಯಾವತ್ತಿಗೂ ಪ್ರತ್ಯೇಕ ರಾಜ್ಯದ ಕೂಗು ಹಾಕುತ್ತಲೇ ಇರುತ್ತೇವೆ. ಇದರ ಹಿಂದಿನ ಕಾಳಜಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಒಡೆಯುವ ಉದ್ದೇಶ ಇಲ್ಲ - ಉಮೇಶ್ ಕತ್ತಿ, ಶಾಸಕ, ಮಾಜಿ ಸಚಿವ.
ಬೆಂಗಳೂರಿನ ದುಡ್ಡನ್ನು ಇಲ್ಲಿಗೆ ಹಾಕುತ್ತಿದ್ದೇವೆ ಎನ್ನುವುದು ಸರಿಯಲ್ಲ. ಸಿಎಂ ಅಖಂಡತೆ ಬಿಟ್ಟು ಮಾತನಾಡಬಾರದು. ತೆಲಂಗಾಣವನ್ನು ಕಡೆಗಣಿಸಿದ್ದಕ್ಕೆ ಪ್ರತ್ಯೇಕ ರಾಜ್ಯ ಆಯ್ತು. ಅನಿವಾರ್ಯ ಬಂದರೆ ಉಕ ಪ್ರತ್ಯೇಕ ರಾಜ್ಯ ಆಗಬೇಕಾಗುತ್ತದೆ. ಇಲ್ಲಿನ ಜನಪ್ರತಿನಿಧಿಗಳು ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟರೆ ಅವರನ್ನು ಆನೆ ಮೇಲೆ ಕೂರಿಸಿ ಸನ್ಮಾನಿಸಿ - ಡಾ. ಸಿದ್ದರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ.