ಆ್ಯಪ್ನಗರ

ಕೃಷ್ಣೆ ತೀರದಲ್ಲಿ ಪ್ರವಾಹ ಭೀತಿ

ಚಿಕ್ಕೋಡಿ : ಮಹಾರಾಷ್ಟ್ರದ ಜಲಾನಯನ ಪ್ರದೇಶ ಹಾಗೂ ತಾಲೂಕಿನಲ್ಲಿ ...

Vijaya Karnataka 12 Jul 2019, 5:00 am
ಚಿಕ್ಕೋಡಿ : ಮಹಾರಾಷ್ಟ್ರದ ಜಲಾನಯನ ಪ್ರದೇಶ ಹಾಗೂ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ಹಾಗೂ ಉಪನದಿಗಳು ಒಡಲುಕ್ಕಿ ಹರಿಯಲಾರಂಭಿಸಿವೆ. ಹೀಗಾಗಿ, ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದ್ದು, ಜನರು ನದಿಗಿಳಿಯದಂತೆ ತಾಲೂಕಾಡಳಿತ ಸೂಚಿಸಿದೆ.
Vijaya Karnataka Web BEL-11CKD3


ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ ಮುಖಾಂತರ ಕೃಷ್ಣಾ ನದಿಗೆ 87,510 ಕ್ಯೂಸೆಕ್‌ ನೀರು ಹರಿದುಬರುತ್ತಿದ್ದು, ನದಿ ತೀರದ ಹೊಲಗದ್ದೆಗಳಿಗೆ ನೀರು ನುಗ್ಗುತ್ತಿದೆ. ಈಗಾಗಲೇ ನದಿ ತೀರದ ಕಬ್ಬು ಸೇರಿ ಹಲವಾರು ಎಕರೆ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ. ತಾಲೂಕಿನ ಕೆಳ ಹಂತದ 8 ಸೇತುವೆಗಳ ಪೈಕಿ 6 ಸೇತುವೆಗಳು ಜಲಾವೃತ ಸ್ಥಿತಿಯಲ್ಲಿವೆ. ಆದರೆ, ಹಳ್ಳಿಗಳ ಸಂಪರ್ಕಕ್ಕೆ ಪರಾರ‍ಯಯ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಮಸ್ಯೆ ಎದುರಾಗಿಲ್ಲ.

ತಾಲೂಕಾಡಳಿತ ಸಜ್ಜು: ''ಸಂಭಾವ್ಯ ಪ್ರವಾಹ ಪರಿಸ್ಥಿತಿ ಎದುರಿಸಲು ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಹಾರಾಷ್ಟ್ರದ ನೀರಾವರಿ ಇಲಾಖೆ ಮತ್ತು ಸರಕಾರದೊಂದಿಗೆ ಸಂಪರ್ಕವಿಟ್ಟುಕೊಂಡು ಕ್ಷ ಣ ಕ್ಷ ಣಕ್ಕೂ ಮಾಹಿತಿ ಪಡೆದುಕೊಳ್ಳುತ್ತಿದೆ. ನದಿಗೆ ಬರುವಷ್ಟೇ ನೀರನ್ನು ಹಿಪ್ಪರಗಿ ಬ್ಯಾರೇಜ್‌ನಿಂದ ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ತೀರದ ಜನರು ಹೆದರಬೇಕಾದ ಅಗತ್ಯವಿಲ್ಲ'', ಎಂದು ತಹಸೀಲ್ದಾರ ಡಾ. ಸಂತೋಷ್‌ಕುಮಾರ ಬಿರಾದಾರ ಅಭಯ ನೀಡಿದ್ದಾರೆ.

ಬಂಗಾಲಿಬಾಬಾ ದೇವಸ್ಥಾನ ಜಲಾವೃತ
ಬೋರಗಾಂವ:
ದೂಧಗಂಗಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದೇವರು ಬಂಗಾಲಿಬಾಬಾ ದರ್ಗಾ ಜಲಾವೃತಗೊಂಡಿದೆ. ದರ್ಗಾದ ಉತ್ತರಕ್ಕಿರುವ ರೇಣುಕಾ ಮಂದಿರ, ಗಣೇಶ ಮಂದಿರ, ಪಶು ಆರೋಗ್ಯ ಕೇಂದ್ರದ ಸುತ್ತ ನದಿ ನೀರು ಹರಿಯುತ್ತಿದೆ. ಬೇಡಕಿಹಾಳ, ಶಮನೇವಾಡಿ, ಭೋಜ, ಕಾರದಗಾ ಸೇರಿದಂತೆ ದೂಧಗಂಗಾ ನದಿಪಕ್ಕದ 50 ಎಕರೆಗೂ ಅಧಿಕ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ. ಭೋಜ-ಕಾರದಗಾ ಮಾರ್ಗದ ಸಂಚಾರ ಎರಡನೇ ಬಾರಿ ಸ್ಥಗಿತಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ