ಆ್ಯಪ್ನಗರ

ಕುಸ್ತಿಯೊಂದಿಗೆ ಶಿವಯೋಗಿ ಅಪ್ಪಯ್ಯ ಸ್ವಾಮಿಗಳ ಜಾತ್ರೆ ಅಂತ್ಯ

ಐಗಳಿ: ಗ್ರಾಮದಲ್ಲಿ ನಡೆಯುತ್ತಿರುವ ಶಿವಯೋಗಿ ಅಪ್ಪಯ್ಯಸ್ವಾಮಿಗಳ ಜಾತ್ರಾ ಮಹೋತ್ಸವದ ನಿಮತ್ತ ಶುಕ್ರವಾರ ಸಂಜೆ ನಡೆದ 31 ಜೋಡಿ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ ...

Vijaya Karnataka 17 Mar 2019, 5:00 am
ಐಗಳಿ : ಗ್ರಾಮದಲ್ಲಿ ನಡೆಯುತ್ತಿರುವ ಶಿವಯೋಗಿ ಅಪ್ಪಯ್ಯಸ್ವಾಮಿಗಳ ಜಾತ್ರಾ ಮಹೋತ್ಸವದ ನಿಮತ್ತ ಶುಕ್ರವಾರ ಸಂಜೆ ನಡೆದ 31 ಜೋಡಿ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ ನೋಡುಗರನ್ನು ರೋಮಾಂಚನಗೊಳಿಸಿತು.
Vijaya Karnataka Web BEL-16 AIGALI 1(1)


ಕೊಹಳ್ಳಿ ಸಂಗಮೇಶ ಪೈ ಹಾಗೂ ದಿಲ್ಲಿ ಅಭಿಜಿತ ಪೈ, ಅಡಹಳಟ್ಟಿ ಅಪ್ಪಾಸಾಬ ಪೈ ಹಾಗೂ ಸಾಂಗಲಿ ನಾಥಾ ಪೈ, ಯಲಿಹಡಲಗಿ ಸಾಗರ ಪೈ ಹಾಗೂ ಸಾಂಗಲಿ ಮಹಾದೇವ ಪೈ, ಅಥಣಿ ಭೀರಪ್ಪ ಪೈ ಹಾಗೂ ಸಾಂಗಲಿ ಸಚೀನ ಪೈ ಅವರ ಜೋಡಿ ಕುಸ್ತಿ ಭಲೆ ಎನಿಸಿಕೊಂಡವು.

ಮಕಣಾಪುರ, ಹಾರುಗೇರಿ, ಸಾಂಗಲಿ, ಮುಗಳಖೋಡ, ಕೊಡಗಾನೂರ, ಮಸರಗುಪ್ಪಿ, ಲಚ್ಯಾನ, ಹಣಮಾಪುರ ಸೇರಿದಂತೆ ನಾನಾ ಗ್ರಾಮಗಳ ಕುಸ್ತಿ ಪಟುಗಳು ಪಾಲ್ಗೊಂಡು ತಮ್ಮ ತಮ್ಮ ಕಸರತ್ತು ಹಾಗೂ ಶಕ್ತಿ ಪ್ರದರ್ಶನ ನೀಡಿದರು. ಚಿಕ್ಕಪಡಸಲಗಿ ಶಿವರುದ್ರಯ್ಯಾ ಬಬಲಾದಿಮಠ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಪಂದ್ಯಾವಳಿಗೆ ಚಾಲನೆ ನೀಡಿದರು. ಪಿಎಸ್‌ಐ ಮಲ್ಲಿಕಾರ್ಜುನ ಶಿಂದೂರ ಪಂದ್ಯಾವಳಿಗಳಿಯಲ್ಲಿ ಉಸ್ತಾದರಾಗಿ ಕಾರ್ಯನಿರ್ವಹಿಸಿದರು. ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಅನೇಕ ಸ್ವಯಂ ಸೇವಕರನ್ನು ಸತ್ಕರಿಸಿ ಅಭಿನಂದಿಸಿಲಾಯಿತು. ಇದರೊಂದಿಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಮುಕ್ತಾಯಗೊಂಡವು.

ಅರ್ಚಕರಾದ ಬನಪ್ಪ ಪೂಜಾರಿ ಸೇರಿದಂತೆ ಹತ್ತಾರು ಗ್ರಾಮಗಳ ಸಾವಿರಾರು ಅಭಿಮಾನಿಗಳು, ಜಾತ್ರಾ ವ್ಯವಸ್ಥಾಪಕ ಮಂಡಳಿ ಹಾಗೂ ಅಪ್ಪಯ್ಯಸ್ವಾಮಿ ಸೇವಾ ಸಮಿತಿ ಸದಸ್ಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ