ಆ್ಯಪ್ನಗರ

ರಾಣಿ ಚನ್ನಮ್ಮ ವಿವಿ ಸ್ಥಳಾಂತರ ವಿರೋಧಿಸಿ ಮನವಿ

ಯಮಕನಮರಡಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಳಾಂತರಿಸುವ ಪ್ರಸ್ತಾಪ ವಿರೋಧಿಸಿ ರಾಣಿ ...

Vijaya Karnataka 16 Oct 2019, 5:00 am
ಯಮಕನಮರಡಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಳಾಂತರಿಸುವ ಪ್ರಸ್ತಾಪ ವಿರೋಧಿಸಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಹೋರಾಟ ಸಮಿತಿ, ಭೂತರಾಮನಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾನುವಾರ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web 15YMD2_53


ಯಮಕನಮರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೂತರಾಮನಹಟ್ಟಿ, ಹೊಸವಂಟಮುರಿ, ಉಕ್ಕಡ, ಸುತಗಟ್ಟಿ, ಹಾಲಬಾವಿ, ಹೊನಗಾ, ಕಾಕತಿ, ಗುಗ್ರೇನಟ್ಟಿ, ಹೊಸುರ, ನಿಂಗ್ಯಾನಟ್ಟಿ, ಬಂಬರಗಾ, ದೇವಗೇರಿ, ಬೆನ್ನಾಳಿ, ದಾಸರವಾಡಿ, ಕೇದನೂರ, ಮನ್ನಿಕೇರಿ, ಅಗಸಗಿ, ಚೆಲವಿನಹಟ್ಟಿ, ಹಂದಿಗನೂರ, ಕುರಿಹಾಳ, ಕಡೋಲಿ ಗ್ರಾಮಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿರುವ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದ ಜನರ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಶ್ವ ವಿದ್ಯಾಲಯವರು ಇಲ್ಲೇ ಮುಂದುವರಿಯುವುದು ಅವಶ್ಯವಾಗಿದೆ.

ಹೀಗಾಗಿ ವಿವಿ ಆಡಳಿತ ಮಂಡಳಿ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವಣೆಯನ್ನು ಸರಕಾರ ಅನುಮೋದಿಸಬಾರದು. ಜತೆಗೆ ಅರಣ್ಯ ಇಲಾಖೆ ಸಲ್ಲಿಸಿದ ಆಕ್ಷೇಪಣೆಯನ್ನು ತಿರಸ್ಕರಿಸಬೇಕು. ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿ ವಿಶ್ವ ವಿದ್ಯಾಲಯವು ಭೂತರಾಮನಹಟ್ಟಿಯಲ್ಲೇ ಉಳಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿಕಾಕತಿ ಜಿಪಂ ಸದಸ್ಯ ಸಿದ್ದನಗೌಡ ಸುಣಗಾರ, ತಾಪಂ ಮಾಜಿ ಸದಸ್ಯ ರಾಮಣ್ಣ ಗುಳ್ಳಿ, ಗ್ರಾಮದ ಮುಖಂಡರಾದ ಭೀಮಗೌಡಾ ಪಾಟೀಲ, ಮಾರುತಿ ಚೌಗಲಾ, ಅಶೋಕ ಪಾಟೀಲ, ಮಾರುತಿ ಚಿಂವ್ವಗೋಳ, ಗ್ರಾಪಂ ಸದಸ್ಯರಾದ ಬಾಲಕೃಷ್ಣ ಪಾಟೀಲ, ಭೀಮರಾಯಿ ಕಟಾಬಳಿ, ಅಣ್ಣಪ್ಪ ಕಟಾಬಳಿ, ಸಣ್ಣಪ್ಪ ಕಟಾಬಳಿ, ಹೋರಾಟ ಸಮಿತಿ ಸದಸ್ಯರಾದ ಪ್ರಕಾಶ ಕಮತಿ, ಆನಂದ ಚೌಗಲೆ, ಪ್ರಕಾಶ ಹೊಂಡಾಯಿ (ವಕೀಲ), ಪರಸಪ್ಪ ಚೌಗಲೆ, ಈರಪ್ಪಾ ಪಾಟೀಲ, ಪರಸಪ್ಪ ಪಾಟೀಲ ಇನ್ನಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ