ಆ್ಯಪ್ನಗರ

ಸಾಮೂಹಿಕ ಗೋವಧೆ ತಡೆಗೆ ಒತ್ತಾಯಿಸಿ ಮನವಿ

ಬೈಲಹೊಂಗಲ: ಬಕ್ರೀದ್‌ ಹಬ್ಬದಂದು ಸಾಮೂಹಿಕ ವಧೆಗೆ ತಂದಿಡಲಾಗಿರುವ ಗೋವುಗಳನ್ನು ತಕ್ಷ ಣ ರಕ್ಷ ಣೆ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ...

Vijaya Karnataka 22 Aug 2018, 5:00 am
ಬೈಲಹೊಂಗಲ: ಬಕ್ರೀದ್‌ ಹಬ್ಬದಂದು ಸಾಮೂಹಿಕ ವಧೆಗೆ ತಂದಿಡಲಾಗಿರುವ ಗೋವುಗಳನ್ನು ತಕ್ಷ ಣ ರಕ್ಷ ಣೆ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ತಾಲೂಕು ಭಜರಂಗದಳ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.
Vijaya Karnataka Web BEL-21HTP2


ಹೊಸ ಓಣಿ ಶೆಡ್‌ನಲ್ಲಿ ಬಚ್ಚಿಡಲಾಗಿದ್ದ ಗೋವುಗಳ ರಕ್ಷ ಣೆಗೆ ಪೊಲೀಸರ ಮೊರೆ ಹೋಗಲಾಗಿತ್ತು. ಪೊಲೀಸರು ನಿರ್ಲಕ್ಷ ್ಯ ವಹಿಸಿದ್ದರಿಂದ ಗೋವುಗಳನ್ನು ಬೇರೆ ಕಡೆ ಸಾಗಿಸಿ ವಧೆಗೆ ತಯಾರಿ ನಡೆಸಲಾಗುತ್ತಿದೆ. ಈ ಬಗ್ಗೆ ತಕ್ಷ ಣ ಎಚ್ಚೆತ್ತುಕೊಂಡು ಪ್ರಾಣಿ ಬಲಿ ತಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿಹಿಂಪ ತಾಲೂಕು ಘಟಕ ಕಾರ್ಯದರ್ಶಿ ವಿವೇಕಾನಂದ ಪೂಜೇರ, ಶ್ರೀರಾಮ ಸೇನೆ ತಾಲೂಕಾಧ್ಯಕ್ಷ ಅಶೋಕ ಸವದತ್ತಿ, ಭಜರಂಗದಳ ಸಂಯೋಜಕ ಬಸವರಾಜ ಈಟಿ, ಶ್ರೀರಾಮ ಸೇನೆ ನಗರ ಘಟಕ ಅಧ್ಯಕ್ಷ ಬಾಳು ಉಪ್ಪಿನ ಮಾತನಾಡಿ, ಬಕ್ರೀದ್‌ ಹಬ್ಬಕ್ಕೆ ಇನ್ನು ಒಂದೇ ದಿನ ಬಾಕಿ ಇದ್ದು, ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಗೋವುಗಳ ವಧೆ ತಪ್ಪಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಕೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ