ಆ್ಯಪ್ನಗರ

ಅಧಿಕಾರಿಗಳ ವಿರುದ್ಧ ತನಿಖಾ ಸಮಿತಿ ನೇಮಿಸಿ

ಬೆಳಗಾವಿ: ನಗರದಲ್ಲಿ ಡ್ರಗ್ಸ್‌, ಮಟ್ಕಾ, ಗಾಂಜಾ, ಚರಸ್‌, ಜೂಜಾಟದಂಥ ಅಕ್ರಮ ದಂಧೆ ನಡೆಯಲು ಹಿರಿಯ ಪೊಲೀಸ್‌ ...

Vijaya Karnataka 26 Aug 2018, 5:00 am
ಬೆಳಗಾವಿ: ನಗರದಲ್ಲಿ ಡ್ರಗ್ಸ್‌, ಮಟ್ಕಾ, ಗಾಂಜಾ, ಚರಸ್‌, ಜೂಜಾಟದಂಥ ಅಕ್ರಮ ದಂಧೆ ನಡೆಯಲು ಹಿರಿಯ ಪೊಲೀಸ್‌ ಅಧಿಕಾರಿಗಳೇ ಕಾರಣವಾಗಿದ್ದು, ಅವರ ವಿರುದ್ಧ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷ ತೆಯಲ್ಲಿ ತನಿಖಾ ಸಮಿತಿ ನೇಮಿಸಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದ್ದಾರೆ.
Vijaya Karnataka Web appoint investigative committee against officials
ಅಧಿಕಾರಿಗಳ ವಿರುದ್ಧ ತನಿಖಾ ಸಮಿತಿ ನೇಮಿಸಿ


ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪೊಲೀಸ್‌ ಅಧಿಕಾರಿಗಳು ಭಾಗಿಯಾಗದೆ ಇಂಥ ಅಕ್ರಮಗಳು ನಗರದಲ್ಲಿ ನಡೆಯಲು ಸಾಧ್ಯವಿಲ್ಲ. ಉನ್ನತ ಅಧಿಕಾರಿಗಳೇ ಅಕ್ರಮಗಳ ಪೋಷಕರಾಗಿದ್ದಾರೆ. ಇಚೆಗೆ ಡಿಸಿಪಿ ಸೀಮಾ ಲಾಟ್ಕರ್‌ ಜೂಜಾಟ ಅಡ್ಡೆ ಮೇಲೆ ದಾಳಿ ಮಾಡಿದ್ದು ಅಭಿನಂದನಾರ್ಹ. ಇಂಥ ಅಕ್ರಮ ದಂಧೆಗಳ ಬಗ್ಗೆ ತನಿಖೆ ಮುಂದುವರಿಸಬೇಕು'', ಎಂದರು.

''ಸೀಮಾ ಲಾಟ್ಕರ್‌ ಅಕ್ರಮ ಅಡ್ಡೆ ಪತ್ತೆ ಹಚ್ಚಿದ್ದಕ್ಕೆ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ಅಸಮಧಾನಗೊಂಡಿದ್ದಾರೆ ಎಂದರೆ ಏನರ್ಥ?'', ಎಂದು ಪ್ರಶ್ನಿಸಿದ ಅಭಯ ಪಾಟೀಲ, ''ಅಕ್ರಮ ಗಾಂಜಾ, ಚರಸ್‌ ಮಾರಾಟದ ಬಗ್ಗೆ ಪೊಲೀಸ್‌ ಆಯುಕ್ತರಿಗೆ ದೂರವಾಣಿ ಮೂಲಕ ತಿಳಿಸಿದರೂ ನಾಳೆ ಬಂದು ನೋಡುತ್ತೇನೆ, ಬೆಂಗಳೂರಿನಲ್ಲಿದ್ದೇನೆ ಎಂಬ ಉತ್ತರ ಕೊಡುತ್ತಾರೆ'', ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ''ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಜೂಜು, ಮಟ್ಕಾ ವಿಪರೀತವಾಗಿ ನಡೆಯುತ್ತಿವೆ. ನಗರ ಪೊಲೀಸರ ಕಾರ್ಯವೈಖರಿ ಕುರಿತು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಚರ್ಚಿಸಲಾಗುವುದು'', ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ