ಚಿಕ್ಕೋಡಿ : ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಸುಮಾರು 9 ಕಡೆಗೆ ಮನೆ ಕಳ್ಳತನ ಮಾಡಿದ್ದ ಆರೋಪದನ್ವಯ ವ್ಯಕ್ತಿಯೊಬ್ಬನನ್ನು ಚಿಕ್ಕೋಡಿ ಪೊಲೀಸರು ಬಂಧಿಸಿ ಆತನಿಂದ 19,86,500 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಉಚಗಾಂವದ ರಾಜವೀರ ಸುಭಾಷ ದೇಸಾಯಿ ಬಂಧಿತ ಆರೋಪಿ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಸದಲಗಾ ಪಟ್ಟಣ, ಬಸವನಾಳಗಡ್ಡೆ, ನನದಿವಾಡಿ, ಕೇರೂರ, ರೂಪಿನಾಳ, ಬೋರಗಾಂವವಾಡಿ ಹಾಗೂ ಅಥಣಿ ಉಪವಿಭಾಗದ ವ್ಯಾಪ್ತಿಯ ಕಾಗವಾಡ ಗ್ರಾಮದ ಸುಮಾರು 9 ಕಡೆಗೆ ಮನೆ ಬಾಗಿಲುಗಳಿಗೆ ಹಾಕಿದ ಕೀಲಿ ಹಾಗೂ ಚಿಲಕದ ಕೊಂಡಿ ಮುರಿದು ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿದ್ದ ಆರೋಪವಿದೆ.
ಬಂಧಿತನಿಂದ 739.750 ಗ್ರಾಂ ತೂಕದ 17.74 ಲಕ್ಷ ಮೌಲ್ಯದ ಚಿನ್ನಾಭರಣ, 25 ಸಾವಿರ ಮೌಲ್ಯದ ಹೊಂಡಾ ಸ್ಕೂಟರ್, ಬಜಾಜ ಡೋಮಿನರ್ ಮೋಟರ್ ಸೈಕಲ್ ಮೊಬೈಲ್ ಸೆಟ್ ಸೇರಿದಂತೆ ಇನ್ನಿತರ ಸಣ್ಣ ಪುಟ್ಟ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಉಚಗಾಂವದ ರಾಜವೀರ ಸುಭಾಷ ದೇಸಾಯಿ ಬಂಧಿತ ಆರೋಪಿ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಸದಲಗಾ ಪಟ್ಟಣ, ಬಸವನಾಳಗಡ್ಡೆ, ನನದಿವಾಡಿ, ಕೇರೂರ, ರೂಪಿನಾಳ, ಬೋರಗಾಂವವಾಡಿ ಹಾಗೂ ಅಥಣಿ ಉಪವಿಭಾಗದ ವ್ಯಾಪ್ತಿಯ ಕಾಗವಾಡ ಗ್ರಾಮದ ಸುಮಾರು 9 ಕಡೆಗೆ ಮನೆ ಬಾಗಿಲುಗಳಿಗೆ ಹಾಕಿದ ಕೀಲಿ ಹಾಗೂ ಚಿಲಕದ ಕೊಂಡಿ ಮುರಿದು ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿದ್ದ ಆರೋಪವಿದೆ.
ಬಂಧಿತನಿಂದ 739.750 ಗ್ರಾಂ ತೂಕದ 17.74 ಲಕ್ಷ ಮೌಲ್ಯದ ಚಿನ್ನಾಭರಣ, 25 ಸಾವಿರ ಮೌಲ್ಯದ ಹೊಂಡಾ ಸ್ಕೂಟರ್, ಬಜಾಜ ಡೋಮಿನರ್ ಮೋಟರ್ ಸೈಕಲ್ ಮೊಬೈಲ್ ಸೆಟ್ ಸೇರಿದಂತೆ ಇನ್ನಿತರ ಸಣ್ಣ ಪುಟ್ಟ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.