ಆ್ಯಪ್ನಗರ

ಕಳವು ಆರೋಪಿಗಳ ಬಂಧನ

ಬೈಲಹೊಂಗಲ: ಇಲ್ಲಿನ ಬನಶಂಕರಿ ದೇವಸ್ಥಾನದಲ್ಲಿ ಗರ್ಭಗುಡಿ ಬಾಗಿಲು ...

Vijaya Karnataka 15 Dec 2019, 5:00 am
ಬೈಲಹೊಂಗಲ: ಇಲ್ಲಿನ ಬನಶಂಕರಿ ದೇವಸ್ಥಾನದಲ್ಲಿಗರ್ಭಗುಡಿ ಬಾಗಿಲು ಮುರಿದು ಅಲ್ಲಿನ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web arrest of accused of theft
ಕಳವು ಆರೋಪಿಗಳ ಬಂಧನ


ಬೆಳಗಾವಿಯ ನಾನಾವಾಡಿಯ, ಹಾಲಿ ಚಿಕ್ಕೋಡಿ ತಾಲೂಕು ಗಳತಗಾ ನಿವಾಸಿ ನಿತಿನ್‌ ಕಾಮಣ್ಣ ಜಾಧವ (26), ಸವದತ್ತಿ ತಾಲೂಕಿನ ಹಿರೇಕೊಪ್ಪದ ಸಂಜೀವ ದುಂಡಪ್ಪ ಬೋಳೆತ್ತಿನ (21) ಹಾಗೂ ಬೈಲಹೊಂಗಲ ವಿನಾಯಕ ನಗರದ ವಿಠ್ಠಲ ಮಾಣಿಕ ಬಡಿಗೇರ (27) ಬಂಧಿತರು. ಆರೋಪಿಗಳಿಂದ 6,64,865 ರೂ. ಮೌಲ್ಯದ ಚಿನ್ನಾಭರಣಗಳು, 1.86 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ, ಟಿವಿ, ಓಮ್ನಿ ಕಾರು ಸೇರಿದಂತೆ ಸುಮಾರು 9.41 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ನ. 21ರ ರಾತ್ರಿ ಬೈಲಹೊಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ಬನಶಂಕರಿ ದೇವಸ್ಥಾನದಲ್ಲಿ1.55 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾದ ಬಗ್ಗೆ ಮಾವುಲಿ ಬಾಲಕೃಷ್ಣ ಧವಳೆ ಎಂಬುವವರು ದೂರು ದಾಖಲಿಸಿದ್ದರು.

ವಿಚಾರಣೆ ವೇಳೆ ಆರೋಪಿಗಳು ಬೈಲಹೊಂಗಲ, ಸಂಕೇಶ್ವರ ಹಾಗೂ ಗೋಕಾಕ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಲಹೊಂಗಲ ಸಿಪಿಐ ಎಂ.ಎಸ್‌. ಕುಸಗಲ್‌, ಪಿಎಸ್‌ಐ ಎಂ.ಎಸ್‌. ಹೂಗಾರ, ಎಎಸ್‌ಐಗಳಾದ ಎ.ಜಿ. ಸಾಲಿ, ಎಸ್‌.ವಿ. ಪತ್ತಾರ, ಸಿಬ್ಬಂದಿಗಳಾದ ಆರ್‌.ವಿ. ಪಾಟೀಲ, ಎನ್‌.ವಿ. ಪರಡ್ಡಿ, ವಿ.ಎಸ್‌. ಯರಗಟ್ಟಿಮಠ, ರಮೇಶ ಉದಪುಡಿ, ಉದ್ದಪ್ಪ ಪೂಜೇರಿ, ಎಸ್‌.ಎಚ್‌. ಹಾದಿಮನಿ, ಎಂ.ಬಿ. ಸಂಬಳದ ಹಾಗೂ ಶಿವಾನಂದ ವರನ್ನವರ ಕಾರ್ಯಾಚರಣೆ ತಂಡದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ