ಆ್ಯಪ್ನಗರ

ಚಿನ್ನಾಭರಣ ಕದ್ದ ಆರೋಪಿಗಳ ಬಂಧನ

ಬೆಳಗಾವಿ: ಗಮನ ಬೇರೆಡೆ ಸೆಳೆದು ಬಂಗಾದ ಅಂಗಡಿಯಲ್ಲಿ ಚಿನ್ನಾಭರಣ ದೋಚಿದ ಆರೋಪಿಗಳಿಬ್ಬರನ್ನು ಮಂಗಳವಾರ ಗೋಕಾಕ ನಗರ ಠಾಣೆ ...

Vijaya Karnataka 13 Feb 2019, 5:00 am
ಬೆಳಗಾವಿ : ಗಮನ ಬೇರೆಡೆ ಸೆಳೆದು ಬಂಗಾದ ಅಂಗಡಿಯಲ್ಲಿ ಚಿನ್ನಾಭರಣ ದೋಚಿದ ಆರೋಪಿಗಳಿಬ್ಬರನ್ನು ಮಂಗಳವಾರ ಗೋಕಾಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web BLG-1202-2-52-12 GOKAK


ಗದಗ ಜಿಲ್ಲೆಯ ಗದಗ ಬೇಟಗೇರಿಯ ನರಸಾಪುರ ಆಶ್ರಯ ಕಾಲನಿಯ ಸಾದೀಕ್‌ಅಲಿ ಶರ್ಫರಾಜ್‌ಅಲಿ ಬೇಗ್‌ ಮತ್ತು ಎಸ್‌.ಎಂ.ಕೃಷ್ಣ ನಗರ ಆಶ್ರಯ ಕಾಲನಿಯ ಹುಸೇನ್‌ಅಲಿ ಸಲಾಂಲಿ ಬೇಗ್‌ ಬಂಧಿತರು.

2018ರ ಅ.16 ರಂದು ಗೋಕಾಕ ಪಟ್ಟಣದ ರವಿವಾರ ಪೇಟೆಯ ಶ್ರೀ ಗುರುವಲ್ಲಭ ಜ್ಯುವೆಲರಿ ಅಂಗಡಿಯಲ್ಲಿ ಇವರಿಬ್ಬರು ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು 2.50 ಲಕ್ಷ ರೂ.ಮೌಲ್ಯದ 76 ಗ್ರಾಂ ತೂಕದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪರಿಶೀಲನೆ ಸಂದರ್ಭದಲ್ಲಿ ಚಿನ್ನಾಭರಣ ಕಡಿಮೆ ಕಾಣುತ್ತಿರುವುದು ತಿಳಿದುಬಂದಾಗ ಅಂಗಡಿ ಮಾಲೀಕರು ಸಿಸಿಟಿವಿ ಕ್ಯಾಮರಾ ದಾಖಲಾತಿ ನೋಡಿದಾಗ ಕಳ್ಳತನವಾಗಿರುವುದು ತಿಳಿದು ಬಂದಿತ್ತು. ಈ ಕುರಿತು ಪ್ರಕರಣ ದಾಖಲಾಗಿತ್ತು.

ಫೆ.12ರಂದು ಗೋಕಾಕದ ರವಿವಾರ ಪೇಟೆಯಲ್ಲಿ ಸಂಶಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ ಕದ್ದ ಚಿನ್ನಾಭರಣ ಪೈಕಿ 55 ಗ್ರಾಂ ತೂಕದ ಚಿನ್ನಾಭರಣವನ್ನು ಗದಗ ಪಟ್ಟಣದ ಓಂಕಾರ ಜ್ಯುವೆಲರಿಯಲ್ಲಿ ಮಾರಾಟ ಮಾಡಿ 1.20 ಲಕ್ಷ ರೂ.ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಕಾಕ್‌ ಡಿಎಸ್ಪಿ ಡಿ.ಟಿ.ಪ್ರಭು, ಸಿಪಿಐ ಶ್ರೀಧರ ಸಾತಾರೆ, ಪಿಎಸ್‌ಐ ಗುರುನಾಥ ಚವ್ಹಾಣ ಸೇರಿದಂತೆ ತನಿಖಾ ತಂಡದ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಸುಧೀರಕುಮಾರ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ