ಆ್ಯಪ್ನಗರ

ಸ್ಕೂಟರ್‌ ಕಳ್ಳನ ಬಂಧನ

ಬೆಳಗಾವಿ: ನಗರದಲ್ಲಿ ವಾಹನ ಕಳವು ಮಾಡುತ್ತಿದ್ದ ...

Vijaya Karnataka 11 Nov 2019, 5:00 am
ಬೆಳಗಾವಿ: ನಗರದಲ್ಲಿವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಭಾನುವಾರ ಬಂಧಿಸಿರುವ ಬೆಳಗಾವಿ ನಗರ ಪೊಲೀಸರು ಆತನಿಂದ 1.13 ಲಕ್ಷ ರೂ. ಮೌಲ್ಯದ 4 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
Vijaya Karnataka Web 10PRAMOD1075413
ನಾಗೇಶ ರೇಡೇಕರ


ಸಂಭಾಜಿ ಗಲ್ಲಿಯ ನಾಗೇಶ ರೇಡೇಕರ(37) ಬಂಧಿತ ಆರೋಪಿ. ಮಹಾದ್ವಾರ ರಸ್ತೆ ಬಳಿ ಸಿಸಿಬಿ ಘಟಕದ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಆರೋಪಿಯು ತಾನು ಬರುತ್ತಿದ್ದ ದಾರಿಯಲ್ಲಿಯೇ ವಾಹನ ತಿರುಗಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಸಂಶಯದಿಂದ ಆತನನ್ನು ಹಿಡಿದು ವಿಚಾರಿಸಿದಾಗ ಅವನ ಬಳಿ ಇದ್ದ ವಾಹನ ಜುಲೈನಲ್ಲಿಕಳವು ಮಾಡಿದ್ದು ಎಂದು ಬಾಯಿಬಿಟ್ಟಿದ್ದಾನೆ.

ಆರೋಪಿಯ ಹೆಚ್ಚಿನ ವಿಚಾರಣೆ ನಡೆಸಿದಾಗ ಇತರೆ ನಾಲ್ಕು ವಾಹನಗಳನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತ ಮುಚ್ಚಿಟ್ಟಿದ್ದ ನಾಲ್ಕು ಸ್ಕೂಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ವಾಹನಗಳು ಕಳವಾಗಿರುವ ಬಗ್ಗೆ ಮಾರ್ಕೆಟ್‌, ಶಹಾಪುರ, ಖಡೇಬಜಾರ್‌ ಠಾಣೆಗಳಲ್ಲಿದೂರು ದಾಖಲಾಗಿತ್ತು. ಇನ್‌ಸ್ಪೆಕ್ಟರ್‌ ಯು. ಎಚ್‌. ಸಾತೇನಹಳ್ಳಿ, ಸಿಬ್ಬಂದಿ ಎಚ್‌.ಎಸ್‌. ನಿಸ್ಸುನ್ನವರ, ಶ್ರೀಧರ ಭಜಂತ್ರಿ, ಯಾಶೀನ್‌ ನಧಾಫ್‌ ಕಾರ್ಯಾಚರಣೆಯಲ್ಲಿದ್ದರು ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ