ಆ್ಯಪ್ನಗರ

ಬಾಲಕ ಸೇರಿ ಮೂವರು ಕಳ್ಳರ ಬಂಧನ

ಬೆಳಗಾವಿ: ನಗರ ಪ್ರದೇಶದಲ್ಲಿಕಳ್ಳತನ ಮಾಡುತ್ತಿದ್ದ ಅಪ್ರಾಪ್ತ ...

Vijaya Karnataka Web 27 Sep 2019, 5:00 am
ಬೆಳಗಾವಿ: ನಗರ ಪ್ರದೇಶದಲ್ಲಿಕಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿದಂತೆ ಮೂವರು ಕಳ್ಳರನ್ನು ಗುರುವಾರ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web 26POLICE084911


ಕಂಗ್ರಾಳಿ ಬಿ.ಕೆ.ಗ್ರಾಮದ ಸಂತೋಷ ಪಮ್ಮಾರ (20), ರುಕ್ಮಿಣಿ ನಗರದ ಸಂಪತ್‌ ಪಮ್ಮಾರ (19) ಬಂಧಿತರು. ಇವರು ಬಾಲಕನ ಜತೆ ಸಹ್ಯಾದ್ರಿ ನಗರ, ಬಿ.ಕೆ.ಕಂಗ್ರಾಳಿ, ಹೊನಗಾ, ರಾಮತೀರ್ಥ ನಗರ, ಮಹಾಂತೇಶ ನಗರ, ಮುತಗಾ ಗ್ರಾಮಗಳಲ್ಲಿಮನೆಗಳ್ಳತನ ನಡೆಸಿದ್ದರು.

ಬಂಧಿತರಿಂದ 1.16 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 9850 ರೂ.ಮೌಲ್ಯದ ಬೆಳ್ಳಿ ಆಭರಣ, 20 ಸಾವಿರ ರೂ.ಮೌಲ್ಯದ ದ್ವಿಚಕ್ರ ವಾಹನ, 1.05 ಲಕ್ಷ ರೂ.ಮೌಲ್ಯದ ಕ್ಯಾಮರಾ, ಪೆನ್‌ಡ್ರೈವ್‌, ಕಂಪೂಟರ್‌ ಭಾಗಗಳು ಮತ್ತು 14 ಸಾವಿರ ರೂ.ಮೌಲ್ಯದ ಲ್ಯಾಪ್‌ಟಾಪ್‌ ವಶ ಪಡಿಸಿಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಾಳಮಾರುತಿ ಠಾಣೆ ಪಿಐ ಬಿ.ಆರ್‌.ಗಡ್ಡೇಕರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ