ಆ್ಯಪ್ನಗರ

ಗಾಂಜಾ ಬೆಳೆದಿದ್ದ ಇಬ್ಬರ ಬಂಧನ

ಸಮೀಪದ ಇಟ್ನಾಳ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ...

Vijaya Karnataka 8 Jul 2018, 5:00 am
ಹಾರೂಗೇರಿ: ಸಮೀಪದ ಇಟ್ನಾಳ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web BEL-7ARAKERI-1


ಇಟ್ನಾಳದ ಬಸಪ್ಪ ನಾಗಪ್ಪ ಹಣಗಂಡಿ ಹಾಗೂ ಹಾಲಪ್ಪ ಭೀಮಪ್ಪ ಹುಲ್ಲೊಳ್ಳಿ ಬಂಧಿತ ಆರೋಪಿಗಳು. ಶುಕ್ರವಾರ ಹಾರೂಗೇರಿ ಪೊಲೀಸರು ಮಾರುವೇಶದಲ್ಲಿ ಹೋಗಿ, ಇಬ್ಬರೂ ಆರೋಪಿಗಳಿಂದ ಒಟ್ಟು 72.900 ರೂ. ಮೌಲ್ಯದ 7 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾರೂಗೇರಿ ಠಾಣೆ ಪಿಎಸ್‌ಐ ಎಂ.ಆರ್‌.ಎಂ.ತಹಶೀಲ್ದಾರ, ಸಿಬ್ಬಂದಿ ರಾಜು ಕಟ್ಟೇಕರಿ, ಕುಮಾರ ಪವಾರ, ವಿಷ್ಣು ಗಾಯಕವಾಡ, ಪರಮೇಶ್ವರ ಗುಡೋಡಗಿ, ಶಿವಾನಂದ ಬಡಿಗೇರ, ಎಚ್‌.ಎನ್‌.ಮೋಮಿನ್‌, ಎಎಸ್‌ಐ ಐ.ಎಂ.ದುಂದಮನಿ ಹಾಗೂ ಬಿ.ಎಚ್‌.ಬಿಸಲನಾಯಕ ಅವರು ದಾಳಿ ನಡೆಸಿದ ತಂಡದಲ್ಲಿದ್ದರು. ಹಾರೂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ