ಆ್ಯಪ್ನಗರ

ಬೆಳೆಯೂ ಇಲ್ಲ ಪರಿಹಾರವೂ ಇಲ್ಲ; ಸಾಲ ಕಟ್ಟದ ನೆರೆ ಸಂತ್ರಸ್ತ ರೈತರಿಗೀಗ ಬಂಧನದ ವಾರಂಟ್‌

ರೈತ ಈರಪ್ಪ 2014ರಲ್ಲಿ ಬೈಲಹೊಂಗಲದ ಐಸಿಐಸಿಐ ಬ್ಯಾಂಕ್ ನಿಂದ 2.65 ಲಕ್ಷ ರೂ. ಸಾಲ ಪಡೆದಿದ್ದರು. ಬಡ್ಡಿ ಸೇರಿ ಈಗ ಅದು 4.65 ಲಕ್ಷ ರೂ. ಆಗಿದೆ. ಆದರೆ, ಸಾಲ ಮರು ಪಾವತಿಸದ ಕಾರಣಕ್ಕೆ 2017ರಲ್ಲಿ ಈರಪ್ಪ ವಿರುದ್ಧ ಕೇಸ್ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಈಗ ವಾರಂಟ್ ಜಾರಿ ಮಾಡಲಾಗಿದೆ.

Vijaya Karnataka Web 14 Sep 2019, 6:18 pm
ಬೆಳಗಾವಿ: ಮಲಪ್ರಭಾ ನದಿ ಪ್ರವಾಹದಿಂದ ಬೆಳೆ ಹಾನಿ ಅನುಭವಿಸಿದ ರೈತರೊಬ್ಬರಿಗೆ ಸಾಲ ಪಾವತಿಸದ ಕಾರಣಕ್ಕೆ ಬಂಧನ ವಾರಂಟ್ ಜಾರಿಯಾಗಿದೆ. ಸವದತ್ತಿ ತಾಲೂಕಿನ ಏಣಗಿ ಗ್ರಾಮದ‌ ಈರಪ್ಪ ಹುಬ್ಬಳ್ಳಿ ಎಂಬ ರೈತರಿಗೆ ಹುಬ್ಬಳ್ಳಿ ಜೆಎಂಎಫ್ ಕೋರ್ಟ್‌ನಿಂದ ವಾರಂಟ್ ನೀಡಲಾಗಿದೆ.
Vijaya Karnataka Web Arrest warrant against farmer


ರೈತ ಈರಪ್ಪ 2014ರಲ್ಲಿ ಬೈಲಹೊಂಗಲದ ಐಸಿಐಸಿಐ ಬ್ಯಾಂಕ್ ನಿಂದ 2.65 ಲಕ್ಷ ರೂ. ಸಾಲ ಪಡೆದಿದ್ದರು. ಬಡ್ಡಿ ಸೇರಿ ಈಗ ಅದು 4.65 ಲಕ್ಷ ರೂ. ಆಗಿದೆ. ಆದರೆ, ಸಾಲ ಮರು ಪಾವತಿಸದ ಕಾರಣಕ್ಕೆ 2017ರಲ್ಲಿ ಈರಪ್ಪ ವಿರುದ್ಧ ಕೇಸ್ ದಾಖಲಾಗಿತ್ತು.

ಆ ಹಿನ್ನೆಲೆಯಲ್ಲಿ ಈಗ ವಾರಂಟ್ ಜಾರಿ ಮಾಡಲಾಗಿದೆ. ಬೆಳಗಾವಿ ಎಸ್‌ಪಿ ಕಚೇರಿಯಿಂದಲೇ ಆಗಸ್ಟ್‌ 28ರಂದು ವಾರಂಟ್‌ ಹೊರಡಿಸಲಾಗಿದ್ದು ಈರಪ್ಪ ಈಗ ದಾರಿ ಕಾಣದಾಗಿದ್ದಾರೆ.

ಚಿಕ್ಕಮಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ನೆರೆ ಸಂತ್ರಸ್ತ ರೈತ

2018ರಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಎಚ್‌.ಡಿ. ಕುಮಾರಸ್ವಾಮಿ ಸರಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿತ್ತು. ಇದರಿಂದ ಈರಪ್ಪ ಅವರಲ್ಲಿ ಸಾಲಮನ್ನಾದ ಬಗ್ಗೆ ಒಂದಷ್ಟು ನಿರೀಕ್ಷೆ ಹುಟ್ಟಿತ್ತು. ಆದರೆ ಸಾಲ ಮನ್ನಾ ಆಗಲಿಲ್ಲ.

ಬಳಿಕ ಬಂದ ಬೆಳೆಯಲ್ಲಿ ಒಂದಷ್ಟು ಸಾಲ ಕಟ್ಟೋಣ ಎಂದುಕೊಂಡು ಈರಪ್ಪ ಯೋಚಿಸುತ್ತಿದ್ದರೆ ಅಷ್ಟರಲ್ಲಾಗಲೇ ಮಲಪ್ರಭಾ ನದಿಯ ಪ್ರವಾಹ ಇದ್ದ ಬೆಳೆಯನ್ನು ಕೊಚ್ಚಿಕೊಂಡು ಹೋಯಿತು.

ಬಳಿಕ ಒಂದಷ್ಟು ಪರಿಹಾರ ಸಿಗಬಹುದು ಎಂದು ಈರಪ್ಪ ಕಾಯುತ್ತಿದ್ದರು. ಆದರೆ ನೆರೆ ಇಳಿದು ತಿಂಗಳಾದರೂ ರಾಜ್ಯ ಸರಕಾರ ಸಂತ್ರಸ್ತರತ್ತ ಮುಖ ತಿರುಗಿಸಿಯೂ ನೋಡಿಲ್ಲ. ನೀಡಿದ 10 ಸಾವಿರ ರೂಪಾಯಿ ಪರಿಹಾರವೇ ಹೆಚ್ಚು ಎಂಬುದಾಗಿ ಸಚಿವರೇ ಹೇಳತೊಡಗಿದ್ದಾರೆ. ಹೀಗಾಗಿ ಬಂಧನ ವಾರಂಟ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದು ಈರಪ್ಪ ಅವರನ್ನು ಚಿಂತೆಗೀಡು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ