ಆ್ಯಪ್ನಗರ

ಬೈಕ್‌ ಕಳ್ಳತನ ಆರೋಪಿ ಬಂಧನ

ಇಚಲಕರಂಜಿ: ಬೈಕ್‌ ಕಳುವು ಆರೋಪಕ್ಕೆ ಸಂಬಂಧಿಸಿದಂತೆ ...

Vijaya Karnataka 3 Nov 2019, 5:00 am
ಇಚಲಕರಂಜಿ: ಬೈಕ್‌ ಕಳುವು ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ಶಿವನಾಕವಾಡಿಯ ಯುವಕನನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web 2ICH6_53


ರಾಹುಲ್‌ ರಾಜೇಂದ್ರ ಮಾಳಿ(23) ಬಂಧಿತ. ಈತನಿಂದ 55 ಸಾವಿರ ರೂ. ಮೌಲ್ಯದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಟ್ಟಣದಲ್ಲಿನಂಬರ್‌ ಪ್ಲೇಟ್‌ ಇಲ್ಲದೆ ಬೈಕ್‌ ಓಡಿಸುತ್ತಿದ್ದ ಈತನನ್ನು ಪಿಎಸ್‌ಐ ಈಶ್ವರ ಓಮಾಸೆ ನೇತೃತ್ವದ ತಂಡ ತಡೆದು ವಿಚಾರಣೆ ನಡೆಸಿದಾಗ ಬೈಕ್‌ ಕಳ್ಳತನ ನಡೆಸುತ್ತಿದ್ದುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ತಂಡದಲ್ಲಿಠಾಣೆಯ ತನಿಖಾ ದಳದ ಪಿಎಸ್‌ಐ ನಸೀಮ್‌ ಖಾನ್‌ ಫರಾಸ್‌, ಉದಯ ಪಾಟೀಲ, ಪ್ರಶಾಂತ ಓತಾರಿ, ರಫಿಕ್‌ ಫಾತರವಾಟ, ವಿವೇಕ ಕರಾಡೆ, ಅರ್ಜುನ ಫಾತಲೆ, ತೌಫಿಕ್‌ ಬಾನದಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ