ಆ್ಯಪ್ನಗರ

ನಕಲಿ ನೋಟು ಚಲಾವಣೆ ಆರೋಪಿ ಬಂಧನ

ಹಣ್ಣಿಕೇರಿ (ಬೆಳಗಾವಿ): ಶ್ರೀಕ್ಷೇತ್ರ ಯಲ್ಲಮ್ಮನ ...

Vijaya Karnataka 13 Jan 2020, 5:00 am
ಹಣ್ಣಿಕೇರಿ (ಬೆಳಗಾವಿ): ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿನಕಲಿ ನೋಟು ಚಲಾವಣೆ ಮಾಡುತ್ತಿದ್ದ ಆರೋಪದಲ್ಲಿವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web arrested for circulating counterfeit note
ನಕಲಿ ನೋಟು ಚಲಾವಣೆ ಆರೋಪಿ ಬಂಧನ


ಮೂಲತಃ ಬೆಳಗಾವಿಯ ಮಚ್ಚೆ ಗ್ರಾಮದ ನಿವಾಸಿ ಹಾಲಿ ಹಣ್ಣಿಕೇರಿಯಲ್ಲಿರುವ ಈರಪ್ಪ ಮೂಲಿಮನಿ (30) ಬಂಧಿತ.

ಆರೋಪಿಯಿಂದ 100 ಹಾಗೂ 500 ಮುಖಬೆಲೆಯ ಒಟ್ಟು 38,600 ರೂ. ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಲ್ಲಮ್ಮನ ಗುಡ್ಡದಲ್ಲಿವ್ಯಾಪಾರಿಗಳಿಗೆ 100ರ ನೋಟು ಕೊಟ್ಟು ವ್ಯಾಪಾರ ಮಾಡಿದಾಗ ಸಂಶಯಗೊಂಡ ವ್ಯಾಪಾರಿಗಳು ಪೋಲಿಸರಿಗೆ ತಿಳಿಸಿದ್ದಾರೆ. ಬಳಿಕ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ಶನಿವಾರ ರಾತ್ರಿ ಆರೋಪಿಯನ್ನು ಗ್ರಾಮಕ್ಕೆ ಕರೆದೊಯ್ದಾಗ ಪ್ರಿಂಟಿಂಗ್‌ ಮಶಿನ್‌ನೊಂದಿಗೆ ನೋಟು ತಯಾರಿಸುವ ಕಚ್ಚಾ ವಸ್ತುಗಳು ಸಿಕ್ಕಿವೆ. ಈರಪ್ಪ ಮೂಲಿಮನಿ ಗೌಂಡಿ ಕೆಲಸಕ್ಕಾಗಿ ಗ್ರಾಮಕ್ಕೆ ನಾಲ್ಕು ವರ್ಷಗಳ ಹಿಂದೆ ಆಗಮಿಸಿದ್ದ. ಇಲ್ಲಿಯೇ ಸಂಬಂಧಿಕರ ಮನೆಯಲ್ಲಿವಾಸವಿದ್ದ. ಮನೆ ಕಟ್ಟಲು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಎಂದು ಗ್ರಾಪಂ ಅಧ್ಯಕ್ಷ ಜಗದೀಶ ಪಾಟೀಲ ಪತ್ರಿಕೆಗೆ ತಿಳಿಸಿದ್ದಾರೆ.

ಸವದತ್ತಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಸಿಪಿಐ ಮಂಜುನಾಥ ನಡುವಿನಮನಿಯವರ ನೇತೃತ್ವದಲ್ಲಿತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ