ಆ್ಯಪ್ನಗರ

ಯಲ್ಲಮ್ಮಗುಡ್ಡಕ್ಕೆ ಸಾಗರೋಪಾದಿ ಭಕ್ತರ ಆಗಮನ

ಪುಂಡಲೀಕ ಬಾಳೋಜಿ, ಸವದತ್ತಿ ಮಂಗಳವಾರ ನಡೆಯುವ ತರಳು ಬಾಳು (ಭಾರತ ಹುಣ್ಣಿಮೆ) ಹುಣ್ಣಿಮೆಗೆ ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಸಾಗರೋಪಾದಿಯಲ್ಲಿ ಭಕ್ತ ಸಮೂಹ ಹರಿದು ...

Vijaya Karnataka 19 Feb 2019, 5:00 am
ಪುಂಡಲೀಕ ಬಾಳೋಜಿ ಸವದತ್ತಿ
Vijaya Karnataka Web BEL-18SDT1

ಮಂಗಳವಾರ ನಡೆಯುವ ತರಳು ಬಾಳು (ಭಾರತ ಹುಣ್ಣಿಮೆ) ಹುಣ್ಣಿಮೆಗೆ ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಸಾಗರೋಪಾದಿಯಲ್ಲಿ ಭಕ್ತ ಸಮೂಹ ಹರಿದು ಬರುತ್ತಿದೆ.

ವರ್ಷದ ಹನ್ನೆರಡು ಹುಣ್ಣಿಮೆಗಳಲ್ಲಿ ತರಳು ಬಾಳು (ಭಾರತ) ಹುಣ್ಣಿಮೆ ಯಲ್ಲಮ್ಮಾ ದೇವಸ್ಥಾನದಲ್ಲಿ ಅತ್ಯಂತ ಮಹತ್ವದ ದಿನ. ದೇವಿಯ ವಾರವಾದ ಮಂಗಳವಾರ ಭಾರತ ಹುಣ್ಣಿಮೆ ಬಂದಿದ್ದು ನಿರೀಕ್ಷೆಗೂ ಮೀರಿ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಶ್ರೀಕ್ಷೇತ್ರದಲ್ಲಿ ಸೇರುತ್ತಿದೆ.

ದೇವಸ್ಥಾನದ ಸುತ್ತಲಿನ ಗುಡ್ಡದ ಪ್ರದೇಶದ ತುಂಬೆಲ್ಲ ಭಕ್ತ ಸಮೂಹ ಜಮಾಯಿಸುತ್ತಿದೆ. ಭಕ್ತರು ಶ್ರೀದೇವಿಯ ಕೃಪೆಗೆ ಪಾತ್ರರಾಗಲು ಹಾತೊರೆಯುತ್ತಿದ್ದು, ತರಳು ಬಾಳು ಹುಣ್ಣಿಮೆಗೆ ಶ್ರೀ ಕ್ಷೇತ್ರ ಸಂಪೂರ್ಣ ಸಜ್ಜುಗೊಂಡಿದೆ.

ಭಾರತ ಹುಣ್ಣಿಮೆಯಂದು ಕ್ಷೇತ್ರದ ದೇವತೆಗೆ ಪಡ್ಡಲಿಗಿ ತುಂಬಿಸುವುದು ಸೇರಿದಂತೆ ನಾನಾ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಕಳೆದ ಅಮಾವಾಸ್ಯೆಯಿಂದಲೇ ಎತ್ತಿನ ಬಂಡಿ ಹಾಗೂ ಪಾದಯಾತ್ರೆಯೊಂದಿಗೆ ಸಾಕಷ್ಟು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಹಾಗೂ ಅಕ್ಕಪಕ್ಕದ ರಾಜ್ಯಗಳ ಜನರೂ ಜಮಾಯಿಸುತ್ತಿದ್ದಾರೆ.

ಕ್ಷೇತ್ರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಾಹನಗಳು ಮತ್ತು ಚಕ್ಕಡಿಗಳು ಆಗಮಿಸುತ್ತಿರುವುದರಿಂದ ಸಂಚಾರ ದಟ್ಟಣೆಯಾಗದಂತೆ ಏಕ ಮುಖ ರಸ್ತೆ ಮಾರ್ಗ ರಚಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಎಲ್ಲಿಯೂ ವಾಹನಗಳ ಸಂಚಾರಕ್ಕೆ ಅಡತಡೆಯಾಗದಂತೆ ಸಿಪಿಐ ಮುತ್ತಣ್ಣ ಸರವ್ವಗೋಳ ಮತ್ತು ಪಿಎಸ್‌ಐ ಪರಶುರಾಮ ಪೂಜಾರ ನೇತೃತ್ವದ ಪೊಲೀಸ್‌ ಸಿಬ್ಬಂದಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪವಿತ್ರ ಸ್ನಾನ: ಯಲ್ಲಮ್ಮನಗುಡ್ಡಕ್ಕೆ ಆಗಮಿಸುವ ಭಕ್ತರು ಮೊದಲು ಮಲಪ್ರಭಾ ನದಿ ತೀರದಲ್ಲಿರುವ ಜೋಗುಳಬಾವಿಯಲ್ಲಿ ಸ್ನಾನ ಮಾಡಿ, ಅಲ್ಲಿರುವ ಸತ್ಯೆಮ್ಮಾದೇವಿಯ ದರ್ಶನ ಪಡೆದು ನಂತರ ಯಲ್ಲಮ್ಮಾ ದೇವಸ್ಥಾನಕ್ಕೆ ತೆರಳುವುದು ವಾಡಿಕೆ. ಸೋಮವಾರದಂದು ಜೋಗುಳ ಬಾವಿಯಲ್ಲಿ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡಿ ತಮ್ಮ ಪ್ರಯಾಣವನ್ನು ಯಲ್ಲಮ್ಮನಗುಡ್ಡಕ್ಕೆ ಮುಂದುವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ