ಆ್ಯಪ್ನಗರ

ಜೆಡಿಎಸ್‌ನಿಂದ ಅಶೋಕ್‌ ಪೂಜಾರಿ ನಾಮಪತ್ರ

ಗೋಕಾಕ: ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಅಶೋಕ ...

Vijaya Karnataka 19 Nov 2019, 5:00 am
ಗೋಕಾಕ: ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಅಶೋಕ ಪೂಜಾರಿ ಕೊನೇ ಗಳಿಗೆಯಲ್ಲಿಜೆಡಿಎಸ್‌ ಬಿ ಫಾಮ್‌ರ್‍ ಪಡೆದು ಗೋಕಾಕ ಮತಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
Vijaya Karnataka Web 18GOK3_53
ಗೋಕಾಕ ಉಪಚುನಾವಣೆಗೆ ಜೆಡಿಎಸ್‌ ಪಕ್ಷದಿಂದ ಅಶೋಕ ಪೂಜಾರಿ ನಾಮಪತ್ರ ಸಲ್ಲಿಸಿದರು.


ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಪೂಜಾರಿ, ''ನಾನು ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಟ ಮಾಡುತ್ತ ಬಂದಿದ್ದು, ಅದಕ್ಕೆ ಬದ್ಧನಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಗೋಕಾಕದಲ್ಲಿನ ಅವ್ಯವಸ್ಥೆ ತೊಲಗಿಸಲು ಜನ ನನ್ನ ಬೆಂಬಲಕ್ಕಿದ್ದಾರೆ. ಜನರ ಅಪೇಕ್ಷೆಯಂತೆ ನಾನು ಸ್ಪರ್ಧಿಸಿದ್ದೇನೆ'' ಎಂದರು.

''ಇಲ್ಲಿನ ವ್ಯವಸ್ಥೆ ಬದಲಾವಣೆಗೆ ಬಿಜೆಪಿ ಸಹ ನನಗೆ ಈ ಹಿಂದೆ ಟಿಕೆಟ್‌ ನೀಡಿತ್ತು. ಆದರೆ, ಬಿಜೆಪಿಯನ್ನು ಟೀಕಿಸಿದವರೇ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎನ್ನುತ್ತಿದ್ದಾರೆ. ಅವರಿಗೆ ಅಧಿಕಾರ ಮುಖ್ಯ. ಟೀಕಿಸಿದವರನ್ನೇ ನಾವು ಬೆಂಬಲಿಸಬೇಕಾಗಿತ್ತು. ಅದು ಸಾಧ್ಯವಾಗದ ಮಾತು. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜಾರಕಿಹೊಳಿ ಸಹೋದರರೇ ಬೇಕಾಗಿದ್ದಾರೆ. ಆದರೆ, ಜನರಿಗೆ ಬದಲಾವಣೆ ಬೇಕಾಗಿದೆ'' ಎಂದು ಅಶೋಕ ಪೂಜಾರಿ ಹೇಳಿದರು.

ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ನಗರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಬೆಂಬಲಿಗರ ಸಭೆ ನಡೆಸಿ ಚುನಾವಣೆ ತಂತ್ರಗಾರಿಕೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ