ಆ್ಯಪ್ನಗರ

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿ ಕೊಲೆ

ಬೆಳಗಾವಿ: ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಹೊರವಲಯ ...

Vijaya Karnataka 24 Nov 2019, 5:00 am
ಬೆಳಗಾವಿ: ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಹೊರವಲಯದಲ್ಲಿಶುಕ್ರವಾರ ಮಧ್ಯರಾತ್ರಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಮುತ್ಯಾನಟ್ಟಿ ಗ್ರಾಮದ ಯಲ್ಲಪ್ಪ ಹಾಲಪ್ಪ ಗುರವ (53) ಕೊಲೆಯಾದ ವ್ಯಕ್ತಿ.
Vijaya Karnataka Web 23YALLAPPA GURAV074614
ಯಲ್ಲಪ್ಪ ಗುರವ


ಬೆಳಗಾವಿ ನಗರದ ಖಾಸಗಿ ಕಂಪನಿಯೊಂದರಲ್ಲಿಕೆಲಸ ಮಾಡುತ್ತಿದ್ದ ಯಲ್ಲಪ್ಪ ಗುರವ ಎಂದಿನಂತೆ ಶುಕ್ರವಾರ ರಾತ್ರಿ ಪಾಳಿಯ ಕೆಲಸಕ್ಕೆ ಬೈಕ್‌ನಲ್ಲಿತೆರಳುವಾಗ ಮುತ್ಯಾನಟ್ಟಿಯಿಂದ ಬೆಳಗಾವಿಗೆ ಬರುವ ರಾಷ್ಟ್ರೀಯ ಹೆದ್ದಾರಿ ಬಳಿಯ ಸರ್ವಿಸ್‌ ರಸ್ತೆಯಲ್ಲಿಐವರು ಅಡ್ಡಗಟ್ಟಿ ತಲವಾರ್‌ ಮತ್ತು ಕೊಯ್ತಾದಿಂದ ಹಲ್ಲೆನಡೆಸಿದ್ದಾರೆ. ಕತ್ತು ಮತ್ತು ತಲೆ ಭಾಗದಲ್ಲಿಭಾರಿ ಗಾಯಗಳಿಂದಾಗಿ ಯಲ್ಲಪ್ಪ ಮೃತಪಟ್ಟಿದ್ದಾರೆ.

ಮುತ್ಯಾನಟ್ಟಿ ಗ್ರಾಮದ ಸಂತೋಷ ಸಿದ್ಧಪ್ಪ ಕೆಂಪ, ಸಿದ್ಧಪ್ಪ ಯಲ್ಲಪ್ಪ ಕೆಂಪ, ಈಶ್ವರ ಹಾಲಪ್ಪ ಹಾಲಭಾವಿ, ಬಿ.ಕೆ.ಕಂಗ್ರಾಳಿ ಗ್ರಾಮದ ರವಿ ಬಸು ಕುಂಬರಗಿ ಮತ್ತು ವಿವೇಕ ಕರೆಪ್ಪ ನಾಯಿಕ ಕೊಲೆ ಮಾಡಿದ್ದಾರೆ ಎಂದು ಮೃತನ ಸಹೋದರ ಸಿದ್ಧಪ್ಪ ಹಾಲಪ್ಪ ಗುರವ ಕಾಕತಿ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಳೇ ದ್ವೇಷ: ಕ್ಷುಲ್ಲಕ ಕಾರಣಕ್ಕಾಗಿ 10 ವರ್ಷಗಳ ಹಿಂದಿನಿಂದಲೂ ಗುರವ ಮತ್ತು ಕೆಂಪ ಕುಟುಂಬಗಳ ನಡುವೆ ದ್ವೇಷವಿತ್ತು. ಕೆಂಪ ಕುಟುಂಬದ ಸದಸ್ಯರು ವಾಹನ ಹಾಯಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಮೃತ ಯಲ್ಲಪ್ಪ ಗುರವ ಕಳೆದ ವರ್ಷ ಕಾಕತಿ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಿದ್ದರು. ಹಳೇ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಕೊಲೆ ವಿಷಯ ತಿಳಿಯುತ್ತಿದ್ದಂತೆ ಮುತ್ಯಾನಟ್ಟಿ ಗ್ರಾಮದಲ್ಲಿಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಮತ್ತೆ ಎರಡೂ ಕುಟುಂಬಗಳಲ್ಲಿಜಗಳ ಆರಂಭಗೊಂಡಿದೆ ಎನ್ನುವ ವದಂತಿ ಹರಡುತ್ತಿದ್ದಂತೆ ಪಿಐ ಶ್ರೀಶೈಲ್‌ ಕೌಜಲಗಿ ಮತ್ತು ಕಾಕತಿ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಬಿಗಿ ಬಂದೋಬಸ್‌್ತ ಕೈಗೊಂಡು ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ