ಆ್ಯಪ್ನಗರ

ಬಾಯ್ಲರ್‌ ಅಧಿಕಾರಿ ಮೇಲೆ ಹಲ್ಲೆ; ದೂರು ದಾಖಲು

ಬೆಳಗಾವಿ: ತಮ್ಮದೇ ಇಲಾಖೆಯ ಕೆಲ ಅಧಿಕಾರಿಗಳು ದುಷ್ಕರ್ಮಿಗಳ ಮೂಲಕ ತಮ್ಮ ...

Vijaya Karnataka 10 May 2019, 5:00 am
ಬೆಳಗಾವಿ : ತಮ್ಮದೇ ಇಲಾಖೆಯ ಕೆಲ ಅಧಿಕಾರಿಗಳು ದುಷ್ಕರ್ಮಿಗಳ ಮೂಲಕ ತಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಕಾರ್ಖಾನೆ ಬಾಯ್ಲರ್‌ ಕಚೇರಿ ಉಪನಿರ್ದೇಶಕ ಕೆ.ವಿ. ಪಾಲಯ್ಯಾ ಅವರು ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Vijaya Karnataka Web assault on boiler officer complaint lodged
ಬಾಯ್ಲರ್‌ ಅಧಿಕಾರಿ ಮೇಲೆ ಹಲ್ಲೆ; ದೂರು ದಾಖಲು


ಕಚೇರಿ ಕೆಲಸ ಮುಗಿಸಿ ಮೇ 4ರ ರಾತ್ರಿ ಬಾಯ್ಲರ್‌ ದುರಸ್ತಿದಾರ, ಹುಬ್ಬಳ್ಳಿಯ ಭರತ ಕುಲಕರ್ಣಿ ಅವರ ಜತೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ''ಕಚೇರಿಯಿಂದ ಹೊರಟ ಬಳಿಕ ಭರತ ಕುಲಕರ್ಣಿ ಅವರು ಮಾರುತಿ ನಗರದ ಸರ್ವಿಸ್‌ ರಸ್ತೆ ಪಕ್ಕದ ಟೈರ್‌ ಮೋಡ್ಲಿಂಗ್‌ ಕಾರ್ಖಾನೆಯೊಂಬರ ಬಳಿ ಕಾರು ನಿಲ್ಲಿಸಿದ್ದರು. ಈ ವೇಳೆ ಮೂವರು ದುಷ್ಕರ್ಮಿಗಳು ಬಂದು ನನ್ನನ್ನು ಕಾರಿನಿಂದ ಹೊರಗೆಳೆದು ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾರೆ. ನೋವಿನಿಂದ ಚೀರಿಕೊಂಡಾಗ ಕಾರ್ಖಾನೆಯ ಸಿಬ್ಬಂದಿ ಬಂದು ರಕ್ಷಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ'' ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತಮ್ಮ ಮೇಲಿನ ಹಲ್ಲೆಗೆ ಭರತ ಕುಲಕರ್ಣಿ ಬೆಂಗಳೂರಿನ ಬಾಯ್ಲರ್‌ ಕಚೇರಿ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತೆ ಮೂವರು ಅನಾಮಧೇಯರ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ