ಆ್ಯಪ್ನಗರ

ಸಾಲ ಮರುಪಾವತಿಸದ ಗ್ರಾಹಕನ ಮೇಲೆ ಹಲ್ಲೆ

ಬೈಲಹೊಂಗಲ : ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಪಟ್ಟಣದ ಖಾಸಗಿ ಬ್ಯಾಂಕಿನ ಮ್ಯಾನೇಜರ್‌ ಶುಕ್ರವಾರ ದೇಶನೂರ ಚಾಳದಲ್ಲಿ ಗ್ರಾಹಕರೊಬ್ಬರಿಗೆ ಹಿಗ್ಗಾಮುಗ್ಗಾ ...

Vijaya Karnataka 2 Mar 2019, 5:00 am
ಬೈಲಹೊಂಗಲ : ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಪಟ್ಟಣದ ಖಾಸಗಿ ಬ್ಯಾಂಕಿನ ಮ್ಯಾನೇಜರ್‌ ಶುಕ್ರವಾರ ದೇಶನೂರ ಚಾಳದಲ್ಲಿ ಗ್ರಾಹಕರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
Vijaya Karnataka Web BEL-1HTP7


ಕುತುಬಶಾ ಫಿಕರಶಾ ಚಾಂದಶಾಹ (52) ಥಳಿತಕ್ಕೊಳಗಾದವರು. ಇವರು ಪಟ್ಟಣದ ಬಸವನ ಗಲ್ಲಿಯಲ್ಲಿರುವ ಖಾಸಗಿ ಸೊಸೈಟಿಯಲ್ಲಿ 15 ವರ್ಷಗಳ ಹಿಂದೆ 80 ಸಾವಿರ ರೂ. ಸಾಲ ಪಡೆದಿದ್ದರು. ಅದಕ್ಕೆ ಬಡ್ಡಿ ಸೇರಿ 3 ಲಕ್ಷ ರೂ. ಹೆಚ್ಚು ಸಾಲ ತೀರಿಸುವಂತೆ ಸೊಸೈಟಿ ಮ್ಯಾನೇಜರ್‌ ಶರಫೋದ್ದಿನ್‌ ದೇವಲಾಪುರ ಹಲ್ಲೆ ನಡೆಸಿದ್ದಾರೆ.

ದೇಶನೂರ ಚಾಳದ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದ ಕುತುಬಶಾ ಅವರಿಗೆ ಶರಫೋದ್ದಿನ್‌ ಅಡ್ಡಗಟ್ಟಿ ಸಾಲ ಮರುಪಾವತಿಸುವಂತೆ ಒತ್ತಾಯಿಸಿದ್ದಾನೆ. ನಮಾಜಗೆ ಹೋಗಿ ಬಂದು ಚೇರ್ಮನ್‌ಗೆ ಭೇಟಿಯಾಗಿ ಮಾತನಾಡುತ್ತೇನೆ ಎಂದರೂ ಏಕಾಏಕಿ ಮ್ಯಾನೇಜರ್‌ ಕೈಯಿಂದ ಕುತ್ತಿಗೆ ಹಾಗೂ ಸೊಂಟಕ್ಕೆ ಹಿಗ್ಗಾ ಮುಗ್ಗಾ ಥಳಿಸಿ, ಕಾಲಿನಿಂದ ಒದ್ದಿದ್ದಾನೆ. ತೀವ್ರ ಗಾಯಒಗಂಡ ಕುತುಬಶಾ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ